ಹುಬ್ಬಳ್ಳಿ:
ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಬಿಜೆಪಿ ಮತ್ತೊಂದು ಸುಳ್ಳು ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಗ್ರಾಮೀಣ ಕಾಂಗ್ರೆಸ್ ಜಿಲ್ಲಾದ್ಯಕ್ಷ ಅನಿಲ್ ಕುಮಾರ ಪಾಟೀಲ್ ಹೇಳಿದರು.ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿ ಎಸ್ ಯಡಿಯೂರಪ್ಪ ಅವರು ಗೋವಾ ಸರ್ಕಾರ ಪತ್ರವನ್ನು ತೋರಿಸಿ ಈ ಭಾಗದ ಜನರಿಗೆ ಮೋಸ ಮಾಡಿದ್ದರು. ಚುನಾವಣೆ ಬಂದಾಗ ಜನರ ದಾರಿ ತಪ್ಪಿಸುವ ಹುನ್ನಾರ. ಈಗ ಕಾಂಗ್ರೆಸ್ ಪಕ್ಷದ ಗಾಳಿ ಇದೆ .ಜ. 2 ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ ಅಡಗಾಲು ಹಾಕಲು ಈ ತಂತ್ರವಿದೆ. ಹೇಗಾದ್ರೂ ಮಾಡಿ ಸಮಾವೇಶ ತಢಯುವ ಹುನ್ನಾರ ಮಾಡಿದೆ. ಜನರನ್ನು ಗೊಂದಲಕ್ಕೆ ಸಿಲುಕಿಸುವ ತಂತ್ರವನ್ನು ಬಿಜೆಪಿ ಮಾಡಿದೆ. ಇದಕ್ಕೆ ಕಾಂಗ್ರೆಸ್ ಬಗ್ಗುವದಿಲ್ಲ. ಜ 2. ಸಮಾವೇಶ ಮಾಡಲಾಗುವದು ನಿಶ್ಚಿತ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…