ಬಿಜೆಪಿ ಪಕ್ಷದ ಸದಸ್ಯರು ಇಂದು ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆ ಮಾಡಿದರು. ನಗರದ ರಂಗ ಮಂದಿರದ ಹತ್ತಿರ ಇರುವ ಶ್ರೀ ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಚೇರಿಯ ಉದ್ಘಾಟನೆ ಮಾಡಿದ್ದಾರೆ. ಉದ್ಘಾಟನೆ ಸಮಾರಂಭ ತುಂಬಾ ಅದ್ದೂರಿಯಾಗಿ ನಡೆಯಿತು, ನಂತರ ಬಿಜೆಪಿ (BJP )ಮುಖಂಡರು ಮಾದ್ಯಮ ಮಿತ್ರರ ಜೊತೆ ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರು ಆದ ಶ್ರಿ ಏನ್ ರವಿಕುಮಾರ್,ಬೀ ಜಿ ಪಾಟೀಲ್,ಮಾಜಿ ವಿಧಾನ ಪರಿಷತ್ ಸದಸ್ಯರು ಆದ ಶ್ರಿ ಅಮರನಾಥ್ ಪಾಟೀಲ್, ಕಲಬುರ್ಗಿ ದಕ್ಷಿಣ ಶಾಸಕ ಶ್ರಿ ಅಪ್ಪು ಗೌಡ,ಉತ್ತರ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಉಪ ಮೇಯರ್ ಶಿವಾನಂದ್ ಪೀಸ್ತಿ,ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್ ಹಾಗೂ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.
https://play.google.com/store/apps/details?id=com.speed.newskannada