ನಡು ರಸ್ತೆಯಲ್ಲೇ ಧಗಧಗ ಹೊತ್ತಿ ಉರಿದ ಬಿಎಂಟಿಸಿ ಬಸ್: ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಇತ್ತೀಚಿಗೆ ಚಾಮರಾಜಪೇಟೆಯ ಮಕ್ಕಳ ಕೂಟದ ಬಳಿಯಲ್ಲಿ ಬಿಎಂಟಿಸಿ ಬಸ್ ಧಗಧಗಿಸಿ ಹೊತ್ತಿ ಉರಿದಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಬಿಎಂಟಿಸಿ ಬಸ್ ಧಗಧಗಿಸಿ ಹೊತ್ತಿ ಉರಿದಿರುವ   ಘಟನೆ ನಡೆದಿದೆ.ಅಲ್ಲದೇ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಬಸ್ ನಲ್ಲಿದ್ದಂತ 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಂಗಳೂರಿನ ಜಯನಗರ ಸೌತ್ ಎಂಡ್ ಸರ್ಕಲ್ ಬಳಿಯ ಮೆಟ್ರೋ ಫ್ಲೈ ಓವರ್ ಕೆಳಗೆ ಇಂದು ಸುಮಾರು 30 ಪ್ರಯಾಣಿಕರಿದ್ದಂತ ಬಿಎಂಟಿಸಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದಂತ ಚಾಲಕ, ಕೂಡಲೇ ಬಸ್ ರಸ್ತೆಯಲ್ಲೇ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ.ಬಸ್ಸಿನಿಂದ ಪ್ರಾಯಣಿಕರನ್ನು ಕೆಳಗೆ ಇಳಿಸುತ್ತಿದ್ದಂತೆ ನೋಡ ನೋಡುತ್ತಿದ್ದಂತೆ ಬಸ್ಸು ಸಂಪೂರ್ಣವಾಗಿ ಧಗಧಗಿಸಿ ಹೊತ್ತಿ ಉರಿದಿದೆ. ಚಾಲಕ ಅಗ್ನಿಶಾಮಕ ಸಿಬ್ಬಂದಿಗೆ ಕರೆಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಬಸ್ಸಿನಲ್ಲಿ ಬೆಂಕಿ ತಾಂತ್ರಿಕ ಕಾರಣದಿಂದ ಉಂಟಾಗಿರಬಹುದು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

covid:ಪ್ರಸ್ತುತ ಕೋವಿಡ್ ಲಸಿಕೆಗಳು ಓಮಿಕ್ರಾನ್ ವಿರುದ್ಧ ಸೆಲ್ಯುಲಾರ್ ಪ್ರತಿರಕ್ಷೆ;

Tue Feb 1 , 2022
ಸೋಮವಾರ ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು, ಲಸಿಕೆಗಳು ಸೆಲ್ಯುಲಾರ್ ಇಮ್ಯುನಿಟಿ ಅಥವಾ ಕೊಲೆಗಾರ ಮತ್ತು ಮೆಮೊರಿ ಕೋಶಗಳಂತಹ ರಕ್ಷಣಾತ್ಮಕ ಪ್ರತಿರಕ್ಷಣಾ ಕೋಶಗಳ ಉತ್ಪಾದನೆಯ ಮೂಲಕ ಈ ರಕ್ಷಣೆಯನ್ನು ಪ್ರೇರೇಪಿಸುತ್ತವೆ ಎಂದು ತೋರಿಸಿದೆ. ತಟಸ್ಥಗೊಳಿಸುವ ಪ್ರತಿಕಾಯಗಳಿಂದ ಓಮಿಕ್ರಾನ್ ರೂಪಾಂತರದ ತಪ್ಪಿಸಿಕೊಳ್ಳುವಿಕೆಯ ಹೊರತಾಗಿಯೂ ಸೆಲ್ಯುಲಾರ್ ಪ್ರತಿರಕ್ಷೆಯು ತೀವ್ರವಾದ COVID-19 ಕಾಯಿಲೆಯಿಂದ ರಕ್ಷಿಸುವುದನ್ನು ಮುಂದುವರೆಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಸ್ರೇಲ್‌ನಲ್ಲಿರುವ ಬೆತ್ ಇಸ್ರೇಲ್ ಡೀಕಾನೆಸ್ ಮೆಡಿಕಲ್ ಸೆಂಟರ್ (BIDMC) ತಂಡವು ಜಾನ್ಸನ್ ಮತ್ತು ಜಾನ್ಸನ್ […]

Advertisement

Wordpress Social Share Plugin powered by Ultimatelysocial