ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳಿಗೆ ದಾಖಲಾತಿಗಳು ಇಲ್ಲದೇ ಮುಚ್ಚಲಾಗುತ್ತಿದೆ ಆದರೇ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಬೀಡಗಾನಹಳ್ಳಿ ಎಂಬ ಪುಟ್ಟಗ್ರಾಮದ ಸರ್ಕಾರಿ ಶಾಲೆಯಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಲೇಬೇಕು ಎಂಬ ನಿಟ್ಟಿನಲ್ಲಿ ನೆಲವಂಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೌತಮಿ ಮುನಿರಾಜು ಹಾಗೂ ಗ್ರಾಮದ ಸೋಮು ಹಾಗೂ ರಾಮಕೃಷ್ಣ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲಾ ಎಂಬಂತೆ ವ್ಯವಸ್ಥಿತವಾಗಿ ಮಾದರಿ ಶಾಲೆಯನ್ನಾಗಿ ಮಾರ್ಪಡು ಮಾಡಲಾಗಿದೆ ಹಚ್ಚಹಸಿರಿನಿಂದ ತುಂಬಿರುವ ಆವರಣ,ಹೈಟೆಕ್ ಶೌಚಾಲಯ, ವ್ಯವಸ್ಥಿತವಾದಂತ ಕಾಂಪೌಂಡ್, ಮಕ್ಕಳು ಆಟವಾಡಳು ಆಟೋಪಕರಣಗಳನ್ನು ನಿರ್ಮಾಣ ಮಾಡಲಾಗಿದ್ದು ಕಾರ್ಯಕ್ರಮವನ್ನು ಟೇಪ್ ಕತ್ತರಿಸುವುದರ ಮೂಲಕ ಹಾಗೂ ಗಿಡವನ್ನು ನೆಡುವುದರ ಮೂಲಕ ತಾಲ್ಲೂಕಿನ ಹಾಲಿ ಶಾಸಕರಾದ ಕೆ ಆರ್ ರಮೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ಶಾಸಕರು ಶಾಲೆಯ ಆವರಣವನ್ನು ಸ್ವಚ್ಛತೆಯಿಂದ ಕಾಪಾಡಿ ಶಾಲಾ ಆವರಣದಲ್ಲಿ ಪ್ರಾಣಿ -ಪಕ್ಷಿಗಳಿಗೆ ಅನುಕೂಲವಾಗುವಂತಹ ಗಿಡಗಳನ್ನು ನೆಟ್ಟು ಮಕ್ಕಳಿಗೆ ಒಳ್ಳೆಯ ವಾತಾವರಣ ಸೃಷ್ಟಿಸಿ ಎಂದು ಸಲಹೆ ಕೊಟ್ಟರು.
https://play.google.com/store/apps/details?id=com.speed.newskannada