ಟ್ವಿಂಕಲ್‍ಗೆ ಹೇಗೆ ಬರೆಯಬೇಕು ಎಂದು ಹೇಳಿಕೊಡುತ್ತಾರಂತೆ ಅಕ್ಷಯ್ ಕುಮಾರ್!

 

ಬಾಲಿವುಡ್‍ನಲ್ಲಿ  ನಮಗೆ ತಿಳಿದಿರುವಂತೆ ಅನೇಕ ತಾರಾ ಜೋಡಿಗಳಿವೆ  , ಎಂದರೆ ಸತಿ ಪತಿಗಳಿಬ್ಬರು  ಸಿನೆಮಾ  ರಂಗದಲ್ಲಿ ನಟಿಸಿ ಹೆಸರು ಮಾಡಿದವರು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಜೋಡಿಗಳಲ್ಲಿ ತುಂಬಾನೇ ಸುದ್ದಿಯಲ್ಲಿರುವ ಒಂದು ಹಳೆಯ ಜೋಡಿ ಎಂದರೆ ಅದು ನಟ ಅಕ್ಷಯ್ ಕುಮಾರ್ಮ ತ್ತು ನಟಿ ಮತ್ತು ಲೇಖಕಿ ಟ್ವಿಂಕಲ್ ಖನ್ನಾ   ಅವರದು ಅಂತ ಹೇಳಬಹುದು.
ನಟ ಅಕ್ಷಯ್ ಸದಾ ತಾವು ಅಭಿನಯಿಸುವ ಚಿತ್ರಗಳಿಂದ ಸುದ್ದಿಯಲ್ಲಿದ್ದರೆ, ನಟಿ ಟ್ವಿಂಕಲ್ ಈಗ ತಮ್ಮ ಬರವಣಿಗೆಯ ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ ಎಂದು ಹೇಳಬಹುದು.
ಕಾಫಿ ವಿತ್ ಕರಣ್ ಶೋ ನಲ್ಲಿ ಅಕ್ಷಯ್ ಕುಮಾರ್
ಈಗ ಇಬ್ಬರು ಸುದ್ದಿಯಲ್ಲಿರುವುದು ಏಕೆ ಅಂತ ನೋಡಿ. ನಟ ಅಕ್ಷಯ್ ಕುಮಾರ್ ಕಾಫಿ ವಿತ್ ಕರಣ್ ಶೋ ನಲ್ಲಿ ಮತ್ತೊಂದು ಬಾರಿಗೆ ಕಾಣಿಸಿಕೊಳ್ಳುತ್ತಿದ್ದಂತೆ, ನಿರೂಪಕ ಕರಣ್ ಜೋಹರ್ ಅವರು ಪತ್ನಿ ಟ್ವಿಂಕಲ್ ಖನ್ನಾ ಅವರ ಕೆಲಸ ಮತ್ತು ವೃತ್ತಿಜೀವನವನ್ನು ಹೇಗೆ ಬೆಂಬಲಿಸುತ್ತೀರಿ ಎಂದು ಪ್ರಶ್ನೆಯೊಂದನ್ನು ಕೇಳಿದರು.
ಮೊದಲು ಟ್ವಿಂಕಲ್ ಒಬ್ಬ ನಟಿಯಾಗಿದ್ದಳು, ನಂತರ ಅವಳು ಒಬ್ಬ ಲೇಖಕಿಯಾಗಿ ಬದಲಾದಾಗ ವೃತ್ತಿಜೀವನದ ದೊಡ್ಡ ಬದಲಾವಣೆ ಇದಾಗಿತ್ತು. ಅಕ್ಷಯ್ ಅವರು ತಮ್ಮ ಪತ್ನಿಯನ್ನು ತುಂಬಾನೇ ಬೆಂಬಲಿಸುತ್ತಾರೆ ಆದರೆ ರಾಜಕೀಯ, ಸಾಮಾಜಿಕ ವಿಷಯಗಳ ಬಗ್ಗೆ ಆಗಾಗ್ಗೆ ವಿವಾದಾತ್ಮಕ ನಿಲುವುಗಳನ್ನು ಕಡಿಮೆ ಮಾಡಿಕೊಳ್ಳಲು ಕೇಳುತ್ತಾರೆ ಎಂದು ಅವರು ಹೇಳಿದರು.
ಟ್ವಿಂಕಲ್ ಬಗ್ಗೆ ಅಕ್ಷಯ್ ಹೇಳಿದ್ದು ಹೀಗೆ
ಅಕ್ಷಯ್ ಅವರು ಟ್ವಿಂಕಲ್ ಹೇಗೆ ಅವರ ಕೆಲಸದಲ್ಲಿ ಸಹಾಯ ಮಾಡುತ್ತಾರೆ ಎಂಬುದರ ಬಗ್ಗೆ, ಅಕ್ಷಯ್ ಶೋ ನಲ್ಲಿ ಮಾತಾಡುತ್ತಾ “ಅವಳು ಏನನ್ನಾದರೂ ಬರೆಯುವಾಗಲೆಲ್ಲಾ, ಆ ಒಂದು ‘ಗೆರೆಯನ್ನು ದಾಟಬೇಡಿ’ ಎಂದು ಅವಳಿಗೆ ಅರ್ಥವಾಗುವಂತೆ ಹೇಳಲು ಪ್ರಯತ್ನಿಸುತ್ತೇನೆ, ಅವಳ ಪಾದಗಳನ್ನು ಸ್ಪರ್ಶಿಸಿ, ಅದು ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಅವಳಿಗೆ ಅರ್ಥವಾಗುವಂತೆ ಹೇಳುತ್ತೇನೆ. ಅವಳಿಗೆ ಅರ್ಥವಾಗಲು ಸುಮಾರು ಎರಡರಿಂದ ಮೂರು ಗಂಟೆಗಳು ಬೇಕಾಗುತ್ತದೆ” ಎಂದು ಹೇಳಿದರು.
ಟ್ವಿಂಕಲ್ ಆಗ ನಿಮ್ಮ ಮಾತು ಕೇಳಿಸಿಕೊಂಡ ಮೇಲೆ ಏನು ಮಾಡುತ್ತಾರೆ ಎಂದು ಕರಣ್ ಕೇಳಿದಾಗ ಅಕ್ಷಯ್ ಮಾತಾಡುತ್ತಾ “ಆಗ ಅವಳು ಇನ್ನೂ ತನ್ನ ಬರವಣಿಗೆಯನ್ನು ‘ಮೃದು’ ಮಾಡಿಕೊಳ್ಳುತ್ತಾಳೆ” ಎಂದು ಹೇಳಿದರು. “ಬರೆದಿರುವುದನ್ನು ಅದು ಹಾಗಲ್ಲ, ಹೀಗೆ ಅಂತ ಹೇಳಿ ನಾನೇ ಅದನ್ನು ‘ಎಡಿಟ್’ ಮಾಡುತ್ತೇನೆ ಆದರೆ ಕೈಮುಗಿದು ಭಿಕ್ಷೆ ಬೇಡಿದ ನಂತರ ಅವಕಾಶ ನನಗೆ ಸಿಗುತ್ತದೆ” ಎಂದು ಒಂದು ರೀತಿಯ ಸರಸಮಯ ಭಾವನೆಯಲ್ಲಿ ಹೇಳಿದರು.
ನಟಿ ಟ್ವಿಂಕಲ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಹೇಳಿದ್ದೇನು?
ಇತ್ತೀಚೆಗೆ, ಟ್ವಿಂಕಲ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದು ನೆಟ್ಟಿಗರಿಂದ ಅನೇಕ ರೀತಿಯ ಪ್ರತಿಕ್ರಿಯೆಗಳನ್ನು ಪಡೆದಿದ್ದರು. ವಿವೇಕ್ ಅಗ್ನಿಹೋತ್ರಿ ಅವರ ಚಲನಚಿತ್ರದ ಯಶಸ್ಸನ್ನು ಅನುಕರಿಸುವ ಭರವಸೆಯಲ್ಲಿ, ಅನೇಕ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳ ಶೀರ್ಷಿಕೆಗಳಾಗಿ ವಿವಿಧ ನಗರಗಳ ಹೆಸರುಗಳನ್ನು ನೋಂದಾಯಿಸಲು ಎಷ್ಟು ಆತುರ ಪಡುತ್ತಿದ್ದಾರೆ ಎಂದು ಟ್ವಿಂಕಲ್ ‘ದಿ ಟೈಮ್ಸ್ ಆಫ್ ಇಂಡಿಯಾ’ ದ ಭಾನುವಾರದ ಅಂಕಣದಲ್ಲಿ ತಮಾಷೆಯಾಗಿ ಬರೆದಿದ್ದರು.
ನಟ ಅಕ್ಷಯ್ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಮೂರನೇ ಸಂಚಿಕೆಯಲ್ಲಿ ನಟಿ ಸಮಂತಾ ರುತ್ ಪ್ರಭು ಅವರೊಂದಿಗೆ ಕಾಣಿಸಿಕೊಂಡರು. ಹೊಸ ಸೀಸನ್ ಇಲ್ಲಿಯವರೆಗೆ ಆಲಿಯಾ ಭಟ್, ರಣವೀರ್ ಸಿಂಗ್, ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಅವರನ್ನು ಹೋಸ್ಟ್ ಮಾಡಿದೆ. ಅನನ್ಯಾ ಪಾಂಡೆ, ವಿಜಯ್ ದೇವರಕೊಂಡ, ಕೃತಿ ಸನೋನ್, ಟೈಗರ್ ಶ್ರಾಫ್, ಕಿಯಾರಾ ಅಡ್ವಾಣಿ ಮತ್ತು ಶಾಹಿದ್ ಕಪೂರ್ ಈ ಸೀಸನ್‍ನ ಶೋ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

Ejaculate Review

Sun Jul 24 , 2022
Internet dating has started to become so popular nowadays that one could discover a dating website that caters to a lot of niches. If you’d like long-distance connections with folks from a certain country, there is at least one dating website for this. If you like informal hookups without strings […]

Advertisement

Wordpress Social Share Plugin powered by Ultimatelysocial