ಹೊಸಪೇಟೆ: ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಕೋರ್ಟ್ ನಿಂದ ಆದೇಶ ಬಂದ್ ಮೇಲೆ Fir ಆಯ್ತು. ಅವರ ಮನೆಯವರು ಕೋರ್ಟ್ ಗೆ ಹೋಗಬೇಕಾಗ ಪರಿಸ್ಥಿತಿ ಬಂತು.
ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಪಿ ನಡ್ಡಾ ಕಾರ್ಯಕ್ರಮದ ಕೊನೆ ದಿನಕ್ಕೆ ಬರ್ತಾರೆ. ಈಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಆರೋಪ ಇದೆ. ಇದು ತನಿಖೆ ಆಗ್ತಾ ಇದೆ. ಈಗ ಪೋಸ್ಟ್ ಮಾರ್ಟಮ್ ಆಗಿದೆ. FSL ವರದಿ ಬರುತ್ತೆ. ಅದರ ಆದಾರದ ಮೇಲೆ ಸೈಂಟಿಫಿಕ್ ಆಗಿ ಏನ್ ನಡಿತಿದೆ ಅಂತ ಗೊತ್ತಾಗುತ್ತೆ ಎಂದರು.
ಸಿದ್ದರಾಮಯ್ಯ ಜಾರ್ಜ್ ವಿಚಾರದಲ್ಲಿ ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಎಂದು ಪ್ರಶ್ನಿಸಿದ ಅವರು, ಕೋರ್ಟ್ ನಿಂದ ಆದೇಶ ಬಂದ್ ಮೇಲೆ Fir ಆಯ್ತು. ಅವರ ಮನೆಯವರು ಕೋರ್ಟ್ ಗೆ ಹೋಗಬೇಕಾಗ ಪರಿಸ್ಥಿತಿ ಬಂತು. ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತೆ ಅದರ ಆಧಾರದ ಮೇಲೆ ಮುಂದಿನ ಸೆಕ್ಷನ್ ಹಾಕ್ತೀನಿ ಎಂದರು.
ಕಾಂಗ್ರೆಸ್ ಅವರು ಅವರೇ ಲಾಯರ್ ಆಗಬೇಕು ಅಂತಾರೆ. ಅವರೇ ಜಡ್ಜ್ ಆಗಬೇಕು ಅಂತಾರೆ ಇದೆಲ್ಲ ನಡೆಯಲ್ಲ. ನೀವು ಏನೆಲ್ಲಾ ಮುಚ್ಚಾಕ್ಕಿದ್ದೀರಿ ಜನಕ್ಕೆ ಎಲ್ಲವೂ ಗೊತ್ತು.. ಅದರಿಂದ ಯಾವಾಗ ಯಾವ ಸೆಕ್ಷನ್ ಆಗಬೇಕು ಅಂತ ಕಾನೂನು ಪ್ರಕಾರ ಆಗುತ್ತೆ. ನಾವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲ್ಲ. ನಾನೇನು ಸಡಿಲ ಬಿಟ್ಟುಕೊಟ್ಟಿಲ್ಲ. ಅವರು ಏನ್ ಬೇಕಾದರೂ ಮಾತಾಡಿದ್ರೆ ನಡೆಯುತ್ತೆ ಎಂದರು.
ಕಾಂಗ್ರೆಸ್ ನವರು ಪ್ರವಾಸ ಮಾಡ್ಲಿ ಪ್ರಶ್ನೆ ಇಲ್ಲ. ಬಹಳ ಶುದ್ಧ ಹಸ್ತದವರು ಇವ್ರು. ಪವಿತ್ರ ಹಸ್ತದವರು ಇವರು. ಕಮಿಷನ್ ಬಗ್ಗೆ ಮಾತಾಡುತ್ತಾರೆ. ಬಹಳ ಶುದ್ಧ ಹಸ್ತದವರು ಯಾತ್ರೆಗೆ ಹೊರಟಿದ್ದಾರೆ. ಈಗಾಗಲೇ ಜನಕ್ಕೆ ಗೊತ್ತಾಗಿದೆ. ಅವರ ಬೀರುನಲ್ಲಿ ಕರೆಪ್ಶನ್ ಎಷ್ಟೊಂದು ಅಸ್ಥಿ ಪಂಜರ್ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ. ಯಾವುದು ಕೂಡ ಜನರಿಗೆ ಪ್ರಯೋಜನ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada