ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು.

 

ಹೊಸಪೇಟೆ: ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಕೋರ್ಟ್ ನಿಂದ ಆದೇಶ ಬಂದ್ ಮೇಲೆ Fir ಆಯ್ತು. ಅವರ ಮನೆಯವರು ಕೋರ್ಟ್‌ ಗೆ ಹೋಗಬೇಕಾಗ ಪರಿಸ್ಥಿತಿ ಬಂತು.

ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ‌.ಪಿ ನಡ್ಡಾ ಕಾರ್ಯಕ್ರಮದ ಕೊನೆ ದಿನಕ್ಕೆ ಬರ್ತಾರೆ. ಈಗ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಆರೋಪ ಇದೆ. ಇದು ತನಿಖೆ ಆಗ್ತಾ ಇದೆ. ಈಗ ಪೋಸ್ಟ್ ಮಾರ್ಟಮ್ ಆಗಿದೆ. FSL ವರದಿ ಬರುತ್ತೆ. ಅದರ ಆದಾರದ ಮೇಲೆ ಸೈಂಟಿಫಿಕ್ ಆಗಿ ಏನ್ ನಡಿತಿದೆ ಅಂತ ಗೊತ್ತಾಗುತ್ತೆ ಎಂದರು.

ಸಿದ್ದರಾಮಯ್ಯ ಜಾರ್ಜ್ ವಿಚಾರದಲ್ಲಿ ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಎಂದು ಪ್ರಶ್ನಿಸಿದ ಅವರು, ಕೋರ್ಟ್ ನಿಂದ ಆದೇಶ ಬಂದ್ ಮೇಲೆ Fir ಆಯ್ತು. ಅವರ ಮನೆಯವರು ಕೋರ್ಟ್‌ ಗೆ ಹೋಗಬೇಕಾಗ ಪರಿಸ್ಥಿತಿ ಬಂತು. ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ. ಈ ಪ್ರಕರಣ ತನಿಖೆಯಲ್ಲಿ ಏನೆಲ್ಲ ಬರುತ್ತೆ ಅದರ ಆಧಾರದ ಮೇಲೆ ಮುಂದಿನ ಸೆಕ್ಷನ್ ಹಾಕ್ತೀನಿ ಎಂದರು.

ಕಾಂಗ್ರೆಸ್ ಅವರು ಅವರೇ ಲಾಯರ್ ಆಗಬೇಕು ಅಂತಾರೆ. ಅವರೇ ಜಡ್ಜ್ ಆಗಬೇಕು ಅಂತಾರೆ ಇದೆಲ್ಲ ನಡೆಯಲ್ಲ. ನೀವು ಏನೆಲ್ಲಾ ಮುಚ್ಚಾಕ್ಕಿದ್ದೀರಿ ಜನಕ್ಕೆ ಎಲ್ಲವೂ ಗೊತ್ತು.. ಅದರಿಂದ ಯಾವಾಗ ಯಾವ ಸೆಕ್ಷನ್ ಆಗಬೇಕು ಅಂತ ಕಾನೂನು ಪ್ರಕಾರ ಆಗುತ್ತೆ. ನಾವು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡಲ್ಲ. ನಾನೇನು ಸಡಿಲ ಬಿಟ್ಟುಕೊಟ್ಟಿಲ್ಲ. ಅವರು ಏನ್ ಬೇಕಾದರೂ ಮಾತಾಡಿದ್ರೆ ನಡೆಯುತ್ತೆ ಎಂದರು.

ಕಾಂಗ್ರೆಸ್ ನವರು ಪ್ರವಾಸ ಮಾಡ್ಲಿ ಪ್ರಶ್ನೆ ಇಲ್ಲ. ಬಹಳ ಶುದ್ಧ ಹಸ್ತದವರು ಇವ್ರು. ಪವಿತ್ರ ಹಸ್ತದವರು ಇವರು. ಕಮಿಷನ್ ಬಗ್ಗೆ ಮಾತಾಡುತ್ತಾರೆ. ಬಹಳ ಶುದ್ಧ ಹಸ್ತದವರು ಯಾತ್ರೆಗೆ ಹೊರಟಿದ್ದಾರೆ. ಈಗಾಗಲೇ ಜನಕ್ಕೆ ಗೊತ್ತಾಗಿದೆ. ಅವರ ಬೀರುನಲ್ಲಿ ಕರೆಪ್ಶನ್ ಎಷ್ಟೊಂದು ಅಸ್ಥಿ ಪಂಜರ್ ಇದೆ ಅಂತ ಲೆಕ್ಕ ಹಾಕಿಕೊಳ್ಳಲಿ. ಯಾವುದು ಕೂಡ ಜನರಿಗೆ ಪ್ರಯೋಜನ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿ.ಕೆ.ಶಿವಕುಮಾರ್ !

Sat Apr 16 , 2022
ಬೆಂಗಳೂರು,ಏ.16- ಭ್ರಷ್ಟಾಚಾರದ ಬಗ್ಗೆ ದೇಶಕ್ಕೆ ಟ್ಯೂಶನ್ ಕೊಡುವಷ್ಟು ಕಡುಭ್ರಷ್ಟ ಎನ್ನುವವರೊಬ್ಬರಿದ್ದರೆ ಅದು ಡಿ.ಕೆ.ಶಿವಕುಮಾರ್ ಮಾತ್ರ ಎಂದು ಬಿಜೆಪಿ ಲೇವಡಿ ಮಾಡಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ತಿಹಾರ್ ಜೈಲು ಸೇರಿ ಗಡ್ಡ ಬೆಳೆಸಿದ ಮಾತ್ರಕ್ಕೆ ಡಿಕೆ ಶಿವಕುಮಾರ್ ಅವರ ಪಾಪಕರ್ಮಗಳು ಬತ್ತಿ ಹೋಗುವುದೇ? ಭ್ರಷ್ಟತೆಯ ಪಾಪಕೂಪದಲ್ಲಿ ಮುಳುಗೇಳುತ್ತಿರುವವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಹಾಸ್ಯಾಸ್ಪದವಲ್ಲವೇ? ಎಂದು ಪ್ರಶ್ನಿಸಿದೆ. ಸುಮಾರು 50 ದಿನಗಳ ತಿಹಾರ್ ಜೈಲು ವಾಸ, ಜೈಲಿನಿಂದ ಬಂದ […]

Advertisement

Wordpress Social Share Plugin powered by Ultimatelysocial