ಬೆಂಗಳೂರು: ಬಹಳ ವರ್ಷಗಳ ಹಿಂದೆ ವಸತಿ ಯೋಜನೆಯ ಫಲಾನುಭವಿಯಾಗಿ, ವಿವಿಧ ಕಾರಣಕ್ಕೆ ಮನೆಯನ್ನೂ ಪೂರ್ತಿ ಮಾಡಿಕೊಳ್ಳಲಾಗದೆ, ಹೊಸ ಯೋಜನೆಗೂ ಫಲಾನುಭವಿಯಾಗಲು ಸಾಧ್ಯವಾಗದೆ ಪರಿತಪಿಸುತ್ತಿದ್ದ ಎರಡು ಲಕ್ಷ ಕುಟುಂಬಕ್ಕೆ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ನೀಡಿದೆ.
ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆದಿದ್ದು, ತ್ರಿಶಂಕುವಾಗಿದ್ದ ಫಲಾನುಭವಿಗಳಿಗೆ ಸಂಕಷ್ಟದಿಂದ ಮುಕ್ತಿ ನೀಡಲು ನಿರ್ಣಯಿಸಲಾಯಿತು. ಈ ಹಿಂದೆ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಯಾಗಿ, ಸರ್ಕಾರದಿಂದ ಮನೆ ಹಂಚಿಕೆಯಾಗಿದ್ದರೂ ಎರಡು ಲಕ್ಷದಷ್ಟು ಫಲಾನುಭವಿಗಳು ಪೋರ್ಟಲ್ನಲ್ಲಿ ಸೂಕ್ತ ಮಾಹಿತಿ ಅಪ್ಲೋಡ್ ಮಾಡದೆ ಅನುದಾನ ಪಡೆದಿರಲಿಲ್ಲ. ಇನ್ನು ಕೆಲವರು ಮನೆಗಳನ್ನೇ ಆರಂಭಿಸದೆ ಯೋಜನೆ ಲಾಭ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂತಹವರ ಫಲಾನುಭವಿತ್ವವನ್ನು ರದ್ದು ಮಾಡಿ, ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿಶ್ಚಯಿಸಲಾಗಿದೆ. ಈ ರೀತಿ ತ್ರಿಶಂಕು ಸ್ಥಿತಿಯಲ್ಲಿದ್ದ 2 ಲಕ್ಷ ಕುಟುಂಬಕ್ಕೆ ಈವರೆಗೆ ಹೊಸ ವಸತಿ ಯೋಜನೆಗಳಿಗೆ ಪುನಾ ಅರ್ಜಿ ಸಲ್ಲಿಸಲು ಅವಕಾಶವೇ ಇರಲಿಲ್ಲ.
ಒಂದೇ ಪ್ರಕರಣಕ್ಕೆ ಒಂದೇ ಕೇಸ್:ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕವನ್ನು ಶಾಸನಸಭೆ ಯಲ್ಲಿ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಲವು ಪ್ರಕರಣಗಳಲ್ಲಿ 5-6, ಅದಕ್ಕಿಂತ ಎಫ್ಐಆರ್ ಆಗುತ್ತಿತ್ತು, ಅದನ್ನೆಲ್ಲ ಸೇರಿಸಿ ಒಂದೇ ಕೇಸ್ ನಡೆಸಲು ಕಾನೂನು ತಿದ್ದುಪಡಿ ಅವಶ್ಯಕತೆ ಇದೆ. ಹಣಕಾಸು ವಿಷಯದಲ್ಲಿ ಒಂದೇ ಪ್ರಕರಣದಲ್ಲಿ ಬೇರೆ ಬೇರೆ ಎಫ್ಐಆರ್ ದಾಖಲಾಗಿದ್ದರೆ, ಅದನ್ನೆಲ್ಲ ಸೇರಿಸಿ ಒಂದೇ ಕ್ರೖೆಮ್ ನಂಬರ್ನಡಿ ನಡೆಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ.
ಇಂದಿರಾ ಕ್ಯಾಂಟೀನ್ ಶಿಫ್ಟ್:ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಕುರಿತು ಸಮಗ್ರ ಅಧ್ಯಯನ ನಡೆಸಿ, ಎಲ್ಲೆಲ್ಲಿ ಕ್ಯಾಂಟೀನ್ ಅಗತ್ಯ ಇಲ್ಲವೋ ಅದನ್ನು ಗುರುತಿಸಿ, ಜನನಿಬಿಡ ಪ್ರದೇಶಗಳಿಗೆ ವರ್ಗಾಯಿಸಲು ಸರ್ಕಾರ ಬಯಸಿದೆ. ಸ್ಥಳೀಯ ಸಂಸ್ಥೆಗಳು ಈ ಯೋಜನೆಗೆ ತಮ್ಮ ಪಾಲಿನ ಶೇ.30-40 ಅನುದಾನ ಕೊಡಲು ಶಕ್ತಿ ಇಲ್ಲ ಎಂದಿದ್ದವು. ಸರ್ಕಾರವೇ ಅನುದಾನ ಕೊಡಬೇಕೆಂದರೆ ಸ್ಥಳ ಬದಲಿಸಿ, ಹೆಚ್ಚಿನ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಮಾಡಿ ಎಂದು ಸೂಚಿಸಿದೆ.
ಮುಖ್ಯಾಂಶ
- ರಾಜ್ಯಕ್ಕೊಂದು ದತ್ತಾಂಶ ನೀತಿ ಕೇಂದ್ರ ಸ್ಥಾಪನೆಗೆ ಅನುಮತಿ ನೀಡಿದ್ದು, ಎಲ್ಲರಿಗೂ ಡೇಟಾ ಸಂಗ್ರಹ, ಬಳಕೆಗೆ ಅನುಕೂಲವಾಗಲಿದೆ. ಇದಕ್ಕೆ 100 ಕೋಟಿ ರೂ.
- ಪುತ್ತೂರಿನಲ್ಲಿ ಒಂದು ಪಶು ಕಾಲೇಜು ನಿರ್ವಿುಸುತ್ತಿದ್ದು, ಅದಕ್ಕೆ 136 ಕೋಟಿ ರೂ. ಅನುಮೋದನೆ.
- ಶಿಗ್ಗಾವಿಯಲ್ಲಿ ಜವಳಿ ಪಾರ್ಕ್ ನಿರ್ವಿುಸಲು 25 ಕೋಟಿ ರೂ. ಅನುದಾನಕ್ಕೆ ಅನುಮೋದನೆ.
- ಕೀಟ ನಿರ್ವಹಣಾ ಕೇಂದ್ರ (ಸಿಪಿಐಎಂಸಿ) ನೀಡಿದ್ದ ಜಮೀನು ಗುತ್ತಿಗೆ ಅವಧಿ ಮುಗಿದತ್ತು, ಈಗ 1.27ಎಕರೆೆ ಜಮೀನು ನೀಡಲು ಸಮ್ಮತಿ.
- ಲೋಕಾಯುಕ್ತದಿಂದ ಇಬ್ಬರು ಇಂಜಿನಿಯರ್ಗಳ ವಿರುದ್ಧ ನಡೆದಿರುವ ತನಿಖೆ ರದ್ದು.
- ಎಲೆವೇಟೆಡ್ ಕಾರಿಡಾರ್ ಕೆಲಸವನ್ನು ಮಾಡದ ಸಿಂಪ್ಲೆಕ್ಸ್ ಇನ್ ಫ್ರಾನ ಗುತ್ತಿಗೆ ರದ್ದು, ಹೊಸದಾಗಿ ಟೆಂಡರ್ ಕರೆಯಲು ನಿರ್ಧಾರ
-
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada