ಜುಲೈ ತಿಂಗಳಲ್ಲೇ ಕಾವೇರಿ ವ್ಯಾಪ್ತಿಯ ಎಲ್ಲಾ ಡ್ಯಾಂಗಳು ಭರ್ತಿ.
ಇದು ಶುಭ ಸೂಚನೆ.
ರೈತರು ಸಂತಸದಿಂದ ಕೃಷಿ ಮಾಡ್ತಿದ್ದಾರೆ.
ಕುಡಿಯುವ ನೀರಿಗೂ ಅಭಾವ ಇಲ್ಲ.
ನೈಸರ್ಗಿಕ ಸಂಪತ್ತು ಇವತ್ತು ಕಲುಷಿತ ಆಗ್ತಿವೆ.
ಮನುಷ್ಯನ ದುರಾಸೆಗೆ ಕೆರೆಕಟ್ಟೆಗಳು ನಾಲೆಗಳು ಒತ್ತುವರಿ ಆಗ್ತಿವೆ.
ನೈಸರ್ಗಿಕ ಸಂಪತ್ತು ಉಳಿಸುವ ಕೆಲಸವನ್ನ ನಾವೆಲ್ಲ ಮಾಡಬೇಕು.
80 ವರ್ಷದ ಹಿಂದೆ ಕಟ್ಟಿದ ಅಣೆಕಟ್ಟು ಇದು.
ನಾಲೆಗಳ ಆಧುನೀಕರಣ ಕಾಮಗಾರಿ ನಡೀತ್ತಿದೆ.
KRS ಗೇಟ್ ಗಳ ಬದಲಾವಣೆ ಪ್ರಗತಿಯಲ್ಲಿದೆ.
ನೀರು ಸೋರಿಕೆ ತಡೆಗಟ್ಟುವ ದೃಷ್ಟಿಯಿಂದ ಗೇಟ್ ಗಳ ಬದಲಾವಣೆ.
ಡ್ಯಾಂ ಸೇಫ್ಟಿಗೂ ಆದ್ಯತೆ ಕೊಡಲಾಗ್ತಿದೆ.
ಕೊನೆ ಭಾಗದ ರೈತರಿಗೂ ನೀರು ತಲುಪಬೇಕು ಎಂಬುದೇ ನಮ್ಮ ಆಶಯ.
ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಗೋವಿಂದ ಕಾರಜೋಳ ಹೇಳಿಕೆ.
ಶಾಸಕ ರವೀಂದ್ರ ಶ್ರೀಕಂಠಯ್ಯ ಭಾಷಣ.
ಶ್ರೀರಂಗಪಟ್ಟಣದಿಂದ KRS ರಸ್ತೆ ತುಂಬಾ ಹಾಳಾಗಿತ್ತು.
ಅದರ ಅಭಿವೃದ್ಧಿಗೆ 9.50 ಕೋಟಿ ಅನುದಾನ ಕೊಟ್ಟಿದ್ದಾರೆ.
ಅವರಿಗೆ ಧನ್ಯವಾದ ಅರ್ಪಿಸುವೆ.
ತಾವು ಕೊಟ್ಟ ಏತ ನೀರಾವರಿ ಯೋಜನೆ ಸಾಕಷ್ಟು ಉಪಯುಕ್ತವಾಗಿದೆ.
ಆ ಭೂಮಿಯನ್ನ KIADB ಭೂಸ್ವಾಧೀನ ಮಾಡ್ತಿದೆ.
ದಯವಿಟ್ಟು ಅದನ್ನ ಕೈಬಿಡುವಂತೆ ಕೋರುತ್ತೇನೆ.
ಬಾಗಿನ ಸಮರ್ಪಣೆ ಸಮಾರಂಭದಲ್ಲಿ ರವೀಂದ್ರ ಶ್ರೀಕಂಠಯ್ಯ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: