ನವದೆಹಲಿ,ಜು.8: ಭ್ರಷ್ಟಾಚಾರದ ಆರೋಪ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ಪ್ರಮುಖ ಬುಲೆಟ್ ರೈಲು ಯೋಜನೆಯ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿಯನ್ನು ಗುರುವಾರ ವಜಾಗೊಳಿಸಿದೆ.
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ಹೊರಡಿಸಿದ ಆದೇಶದ ಪ್ರಕಾರ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸತೀಶ್ ಅಗ್ನಿಹೋತ್ರಿಯನ್ನು ಸೇವೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕೊನೆಗೊಳಿಸಲಾಗಿದೆ.
ಪ್ರಾಜೆಕ್ಟ್ಗಳ ನಿರ್ದೇಶಕ ರಾಜೇಂದ್ರ ಪ್ರಸಾದ್ ಸಿಎಂಡಿ ಜವಾಬ್ದಾರಿಯನ್ನು ವಹಿಸಿಕೊಂಡ ದಿನಾಂಕದಿಂದ ಮೂರು ತಿಂಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅದನ್ನು ನೋಡಿಕೊಳ್ಳುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ಸತೀಶ್ ಅಗ್ನಿಹೋತ್ರಿ ರೈಲ್ವೆ ಸಚಿವಾಲಯದ ಅಡಿಯಲ್ಲಿ ‘ಎ’ ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿಪಿಎಸ್ಇ) ರೈಲ್ ವಿಕಾಸ್ ನಿಗಮ್ ಲಿಮಿಟೆಡ್ನಲ್ಲಿದ್ದಾಗ 2011 ರಿಂದಲೇ ಭ್ರಷ್ಟಾಚಾರ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ರೈಲ್ವೆಯ ಅಧಿಕಾರಿಯೊಬ್ಬರು ಅಗ್ನಿಹೋತ್ರಿಯ ಮಗ ಕೆಲಸ ಮಾಡುವ ಸಂಸ್ಥೆಗೆ ಗುತ್ತಿಗೆಯನ್ನು ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲಾ ಆರೋಪಗಳನ್ನು ಅಗ್ನಿಹೋತ್ರಿ ನಿರಾಕರಿಸಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.
ಯಾರು ಅಗ್ನಿಹೋತ್ರಿ?; ಸತೀಶ್ ಅಗ್ನಿಹೋತ್ರಿ 1982 ಬ್ಯಾಚ್ನ ಐಆರ್ಎಸ್ಇ ಅಧಿಕಾರಿ. ಕಳೆದ ವರ್ಷ ಜುಲೈನಲ್ಲಿ ಎನ್ಎಚ್ಎಸ್ಆರ್ಸಿಎಲ್ನ ಸಿಎಂಡಿ ಆಗಿ ನೇಮಕಗೊಂಡಿದ್ದರು. ಈಗ ಸಿಬಿಐ ಹಲವಾರು ದೂರುಗಳನ್ನು ದಾಖಲು ಮಾಡಿಕೊಂಡ ಬಳಿಕ, ಲೋಕಪಾಲ್ಗೆ ವರದಿ ಮಾಡಿದ ನಂತರ ಸತೀಶ್ ಅಗ್ನಿಹೋತ್ರಿ ವಜಾಗೊಳಿಸಲಾಗಿದೆ.
ದೂರುದಾರರು ಸತೀಶ್ ಅಗ್ನಿಹೋತ್ರಿ ಬ್ಯಾಚ್ಮೇಟ್ ಆಗಿದ್ದು, ಅಗ್ನಿಹೋತ್ರಿ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ನಲ್ಲಿದ್ದಾಗ, ತಮ್ಮ ಮಗ ಕೆಲಸ ಮಾಡುವ ಕಂಪನಿಗೆ ಗುತ್ತಿಗೆಯನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.
ನಿವೃತ್ತಿಯ ನಂತರ ಅಗ್ನಿಹೋತ್ರಿ ಕೂಲಿಂಗ್ ಅವಧಿಗೆ ಮುನ್ನ ಖಾಸಗಿ ಕಂಪನಿಗೆ ಸೇರಿಕೊಂಡರು ಎಂದು ದೂರುದಾರರು ಆರೋಪಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann