ಪುತ್ರನಿಗಾಗಿ 1400 ಕಿಮೀ ಸ್ಕೂಟಿ ರೈಡ್​ ಮಾಡಿದ್ದ ತಾಯಿಗೆ ಇದೀಗ ಮತ್ತೊಂದು ಸಂಕಷ್ಟ..!

 

 

2020 ರಲ್ಲಿ ಮೊದಲ ಬಾರಿಗೆ ಕೊರೊನಾ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತಾಯಿಯೊಬ್ಬರು ತಮ್ಮ ಮಗನನ್ನು ಮನೆಗೆ ಕರೆತರಲು ಬರೋಬ್ಬರಿ 1400 ಕಿಲೋಮೀಟರ್​ ದೂರದವರೆಗೆ ಸ್ಕೂಟಿಯನ್ನು ತೆಗೆದುಕೊಂಡು ಹೋಗಿದ್ದರು, ಇದೀಗ ಇದೇ ತಾಯಿ ಉಕ್ರೇನ್​ನಲ್ಲಿ ಸಿಲುಕಿರುವ ತನ್ನ 19 ವರ್ಷದ ಮಗನ ಬಗ್ಗೆ ಆತಂಕ ಹೊಂದಿದ್ದಾರೆ. ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿರುವ ರಜಿಯಾ ಬೇಗಂ ತನ್ನ ಪುತ್ರ ನಿಜಾಮುದ್ದೀನ್​ ಅಮಾನ್​ ಉಕ್ರೇನ್​​ನಿಂದ ಸುರಕ್ಷಿತವಾಗಿ ಮರಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಿಜಾಮುದ್ದೀನ್​ ಎಂಬಿಬಿಎಸ್​ ಶಿಕ್ಷಣಕ್ಕಾಗಿ ಉಕ್ರೇನ್​​ನಲ್ಲಿದ್ದಾರೆ.ಸುಮಿಯಲ್ಲಿ ನಿಜಾಮುದ್ದೀನ್​ ಇದ್ದಾರೆ ಎನ್ನಲಾಗಿದ್ದು ಇದು ರಷ್ಯಾದ ಗಡಿಗೆ ತುಂಬಾನೇ ಹತ್ತಿರದಲ್ಲಿದೆ. ಅಲ್ಲದೇ ಭಾರತದ ಸಾಕಷ್ಟು ವಿದ್ಯಾರ್ಥಿಗಳು ಇದೇ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.ನಿಜಾಮುದ್ದೀನ್​ ಪ್ರಸ್ತುತ ಬಂಕರ್​ನಲ್ಲಿದ್ದು, ಫೋನ್​ ಮೂಲಕ ತಾಯಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ನನ್ನ ಪುತ್ರ ನನಗೆ ಫೋನ್ ಮಾಡಿ ಏನೂ ತಲೆಕೆಡಿಸಿಕೊಳ್ಳದಂತೆ ಹೇಳಿದ್ದಾನೆ. ಆದರೂ ಪ್ರಧಾನಿ ಮೋದಿ, ಸಿಎಂ ಕೆಸಿ ರಾವ್​ ಹಾಗೂ ಗೃಹ ಸಚಿವ ಮೊಹಮ್ಮದ್​ ಮಹಮೂದ್​ ಅಲಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ಯಾನ್​ ಇಂಡಿಯಾ ಸ್ಟಾರ್​ ಆದ್ರೂ ಪ್ರಭಾಸ್​ಗೆ ಇದೆ ಭಾಷೆ ಸಮಸ್ಯೆ; ಹೌದೆಂದು ಒಪ್ಪಿಕೊಂಡ ನಟ

Sat Mar 5 , 2022
‘ಸಾಹೋ’ ಬಿಡುಗಡೆ ಸಂದರ್ಭದಲ್ಲಿ ಪ್ರಭಾಸ್​ ಅವರ ಹಿಂದಿ ಉಚ್ಛಾರಣೆಯನ್ನು ಕೇಳಿ ಅನೇಕರು ಟ್ರೋಲ್​ ಮಾಡಿದ್ದರು. ಹಾಗಂತ ಪ್ರಭಾಸ್​ ಅವರು ತಮ್ಮ ಪ್ರಯತ್ನದಿಂದ ಹಿಂದೆ ಸರಿದಿಲ್ಲ.ನಟ ಪ್ರಭಾಸ್​ (Prabhas) ಅವರಿಗೆ ಇರುವ ಜನಪ್ರಿಯತೆ ಸಣ್ಣದೇನಲ್ಲ. ಅವರನ್ನು ಇಷ್ಟಪಡುವ ಅಭಿಮಾನಿಗಳು ದೇಶಾದ್ಯಂತ ಇದ್ದಾರೆ. ‘ಬಾಹುಬಲಿ’ ಸಿನಿಮಾದ ಯಶಸ್ಸಿನ ಬಳಿಕ ಪ್ರಭಾಸ್​ ಇಮೇಜ್​ ಬದಲಾಯಿತು. ಅವರ ಪ್ಯಾನ್​ ಇಂಡಿಯಾ ಹೀರೋ (Pan India Hero) ಆಗಿ ಗುರುತಿಸಿಕೊಂಡಿದ್ದಾರೆ. ಉತ್ತರ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಪ್ರಭಾಸ್​ ಹೊಂದಿದ್ದಾರೆ. ಆದರೂ ಕೂಡ […]

Related posts

Advertisement

Wordpress Social Share Plugin powered by Ultimatelysocial