ಬೆಂಗಳೂರು: ತಾಕತ್ ಇದ್ರೆ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿ ಎಂಬುದಾಗಿ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಸವಾಲ್ ಹಾಕಿದ್ದಾರೆ.
ಇಂದು ಜೆಡಿಎಸ್ ಕಚೇರಿ ಜೆ.ಪಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜಣ್ಣ ಕ್ಷಮೆ ಕೇಳ್ತಾರೆ ಅನ್ಕೊಂಡೆ.
ಆದರೆ ಇಂದು ಉಲ್ಟಾ ಮಾತಾಡಿದ್ದಾರೆ. ಸಿದ್ದರಾಮಯ್ಯ ಉತ್ಸವ ಹಾಳ್ ಮಾಡಲು ಹೀಗೆ ಮಾತನಾಡಿದ್ರು ಅಂತಾರೆ. ಜನತಾದಳ ಅಸ್ತಿತ್ವದಲ್ಲಿ ಇಲ್ಲ ಅಂತಾರೆ. ಅಂದ್ಮೇಲೆ ಜೆಡಿಎಸ್ ಪಕ್ಷದ ಮೇಲೆ ಯಾಕೆ ಭಯ..? ಎಂದರು.
ಶಿವಕುಮಾರ್ ಹಾಗೂ ಸುರೇಶ್ ರಾಜಣ್ಣ ಬಗ್ಗೆ ಏನ್ ಹೇಳಿದ್ದಾರೆ. ಅವರೆಲ್ಲಾ ನಿಮ್ಮ ಸಿದ್ದರಾಮಯ್ಯ ಸಭೆ ಹಾಳ್ ಮಾಡೋಕೆ ಹೇಳಿದ್ರಾ..? ನಾವು ಮಾಡಿದ್ರೆ ಬಿ ಟೀಮ್.. ನೀವು ಮಾಡಿದ್ರೆ ಬಿ.ಟೀಮ್ ಅಲ್ಲ. ನಾವು ದೇವೇಗೌಡರು ಜನತಾದಾಳ ಸ್ವತ್ತಲ್ಲ. ದೇವೇಗೌಡರು ಇಡೀ ದೇಶದ ಸ್ವತ್ತು. ವೇಣುಗೋಪಾಲ್ ಗೂ ಗೊತ್ತು ದೇವೇಗೌಡರ ಬಗ್ಗೆ. ಇದನ್ನು ಎಳೆದುಕೊಂಡು ಹೋಗೋದು ಬೇಡ. ಅಂದು ಸಿದ್ದರಾಮಯ್ಯಗೆ ಡೆಪ್ಯೂಟಿ ಸಿಎಂ ಸಿಎಂ ಮಾಡಿದ್ದು ಯಾರು..? ನನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಮಾಡಿದ್ದು ಯಾರು..? ಎಂದರು.
ರಾಜಣ್ಣ ಅವರಿಗೆ ದಯವಿಟ್ಟು ಕ್ಷಮೆ ಕೇಳಿ. ನಾಳೆ ರಾಜ್ಯದಲ್ಲಿ ಏನಾದರೂ ಘಟನೆ ಆಗಬಹುದು. ನಾಳೆ ನಮ್ಮ ಮೇಲೆ ಗೂಬೆಕೂರಿಸಬೇಡಿ. ರಾಜಣ್ಣಗೆ ಸಿ.ಎಮ್ ಇಬ್ರಾಹಿಂ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಜೆಡಿಎಸ್ ಪಕ್ಷ ಕಂಡರೆ ಭಯ ಯಾಕೆ..? ರಾಜಣ್ಣನವರ ಬಗ್ಗೆ ನಾವು ಹೇಳಿದ್ದಲ್ಲ. ರಾಜಣ್ಣನವರು ಕ್ಷಮೆ ಕೇಳಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆಶಿ,ಸಂಸದ ಡಿಕೆ ಸುರೇಶ್ ಹೇಳಿದ್ದಾರೆ. ಗುಬ್ಬಿ ವಾಸುವನ್ನು ಕಾಂಗ್ರೆಸ್ಗೆ ರಾಜಣ್ಣನವರು ಕರೆದುಕೊಂಡು ಹೋಗಿದ್ದಾರೆ. ವೋಟ್ ಹಾಕಿಸಿಕೊಂಡಿದ್ದಿರಾ..! ನೀವು ನಮಗೆ ಜಾತ್ಯತೀತಾದ ಬಗ್ಗೆ ಮಾತನಾಡ್ತಿರಾ. ಕಾಂಗ್ರೆಸ್ ಬಿಜೆಪಿ ಬಿ ಟೀಂ ಆಗಿ ಕೆಲಸ ಮಾಡ್ತಿರೋದು ಎಂದರು.
ದೇವೆಗೌಡರ ಜನತಾದಳದ, ಜಾತಿಯ ಸ್ವತ್ತಲ್ಲ. ದೇವೆಗೌಡರು ದೇಶದ ಮಾಜಿ ಪ್ರಧಾನಿ ಅವ್ರು ಬಗ್ಗೆ ಅನೇಕರು ಗೌರವ ಇಟ್ಡುಕೊಂಡಿದ್ದಾರೆ. ರಾಜಣ್ಣನವರು ಇದನ್ನು ಮತ್ತೆ ಎಳೆದಾಡಿಕೊಂಡು ಹೋಗೊದು ಬೇಡ ಎಂದರು.
ಇದುವರೆಗೆ ಕಾಂಗ್ರೆಸ್ ನವ್ರು ಸಿಎಂ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ ಯಾಕೆ..? ಬಿಜೆಪಿ ಯವರು ಕೂಡ ಸಿಎಂ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ಇನ್ನೂ ನಾವು ಹೇಳಿದ್ದೇವೆ, ಕುಮಾರಸ್ವಾಮಿ ಸಿಎಂ ಅಭ್ಯರ್ಥಿ ಅಂತಾ.? ನಿಮಗೆ ತಾಕತ್ ಇದ್ರೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದ ಸಿ.ಎಂ ಇಬ್ರಾಹಿಂ ಸವಾಲ್ ಹಾಕಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada