ರಾಜ್ಯದಲ್ಲಿ ಹಿಜಾಬ್ ವಿವಾದ ಒಂದು ಷಡ್ಯಂತ್ರವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.

ಪಣಜಿ: ರಾಜ್ಯದಲ್ಲಿ ಹಿಜಾಬ್ ವಿವಾದ ಒಂದು ಷಡ್ಯಂತ್ರವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ. ಗೋವಾದಲ್ಲಿ ಮಾತನಾಡಿದ ಅವರು, ಕೇರಳ, ಮಹಾರಾಷ್ಟ್ರದಲ್ಲಿ ಹಿಜಾಬ್ ವಿಚಾರ ತಲೆ ಎತ್ತುತ್ತಿತ್ತು. ಆದರೆ ಆ ಎರಡು ರಾಜ್ಯಗಳಲ್ಲಿ ಹಿಜಾಭ್ ವಿವಾದ ಆಗಲಿಲ್ಲ.ರಾಜ್ಯದಲ್ಲಿ ಮಾತ್ರ ಏಕೆ ವಿವಾದ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.ಈ ಹಿಂದೆ ಸಿಎಎ ಮತ್ತು ರೈತರನ್ನು ಇಟ್ಟುಕೊಂಡು ವಿವಾದ ಮಾಡಿದ್ದರು. ಈಗ ಹಿಜಾಬ್ ವಿವಾದ ಮಾಡಲಾಗುತ್ತಿದೆ. ಇದು ಪೂರ್ವನಿಯೋಜಿತ ಅನಿಸುತ್ತಿದೆ. ಉಡುಪಿ ವಿದ್ಯಾರ್ಥಿನಿಯರ ಹಿಂದೆ ಸಿಎಫ್‌ಐ ಸಂಘಟನೆ ಇದೆ. ಕಾಂಗ್ರೆಸ್ ತನ್ನ ಮತೀಯ ವೋಟ್ ಬ್ಯಾಂಕಿಗಾಗಿ ಈ ರೀತಿ ವಿವಾದ ಮಾಡಿದೆ ಎಂದು ಆರೋಪಿಸಿದ್ದಾರೆ.ವಿಭಜನೆಯ ವಿಷ ಬೀಜದಿಂದ ಭಾರತ ವಿಭಜನೆ ಆಯಿತು. ಆಗ ಪಿತೂರಿ ಅರ್ಥ ಮಾಡಿಕೊಂಡಿದ್ದರೆ ವಿಭಜನೆ ಆಗುತ್ತಿತ್ತಾ? ಮಕ್ಕಳಲ್ಲಿ ನಾನು-ನೀನು ಬೇರೆ ಎಂಬ ವಿಷ ಬೀಜ ಬಿತ್ತುತ್ತಿದ್ದಾರೆ. ಹೀಗೇ ಇರಬೇಕು ಎನ್ನುವುದು ಮತಾಂಧತೆಯ ಪ್ರತೀಕ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಜಾಬ್ ಪ್ರತಿಭಟನೆಯ ಸಂದರ್ಭದಲ್ಲಿ 'ಅಲ್ಲಾ-ಹು-ಅಕ್ಬರ್' ಎಂದು ಕೂಗಿದ ಮುಸ್ಕಾನ್ ಖಾನ್ ಅವರ ಹೆಸರನ್ನು ಮಾಲೆಗೋನ್‌ನ ಉರ್ದು ಘರ್ ಹೆಸರಿಸಲಾಗುವುದು

Sun Feb 13 , 2022
    ಹಿಜಾಬ್ ಪ್ರತಿಭಟನೆಯ ಸಂದರ್ಭದಲ್ಲಿ ‘ಅಲ್ಲಾ-ಹು-ಅಕ್ಬರ್’ ಎಂದು ಕೂಗಿದ ಮುಸ್ಕಾನ್ ಖಾನ್ ಅವರ ಹೆಸರನ್ನು ಮಾಲೆಗೋನ್‌ನ ಉರ್ದು ಘರ್ ಹೆಸರಿಸಲಾಗುವುದು ಶಾಲೆಗಳಲ್ಲಿ ಹಿಜಾಬ್ ವಿರೋಧಿಸಿ ಹುಡುಗರ ಗುಂಪೊಂದು ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗಿದಾಗ ‘ಅಲ್ಲಾ ಹು ಅಕ್ಬರ್’ ಎಂದು ಕೂಗಿದ ಬಾಲಕಿ ಮುಸ್ಕಾನ್ ಖಾನ್ ಅವರ ಹೆಸರನ್ನು ಈಗ ಮಾಲೆಗಾಂವ್‌ನ ಉರ್ದು ಘರ್ ಎಂದು ಮರುನಾಮಕರಣ ಮಾಡಲಾಗುತ್ತದೆ. ಅವರು ಕರ್ನಾಟಕದಲ್ಲಿ ಶಾಲಾ ಮತ್ತು ಪೂರ್ವ ವಿಶ್ವವಿದ್ಯಾಲಯ […]

Advertisement

Wordpress Social Share Plugin powered by Ultimatelysocial