ಅಣ್ಣ-ತಂಗಿಯರ ಬಾಂಧವ್ಯದ ಹಾಡು ಸೋಲ್ ಆಫ್ ಬೆಂಕಿ…ಚೈತ್ರಾ ಆಚಾರ್ ಕಂಠದಲ್ಲಿ ಕೇಳಿ ಮನಮುಟ್ಟುವ ಗೀತೆರಾಮಾರ್ಜುನ ಸಿನಿಮಾದ ನಂತರ ಅನೀಶ್‌ ತೇಜೇಶ್ವರ್‌ ನಟಿಸ್ತಿರುವ ಬೆಂಕಿ ಸಿನಿಮಾದ ಸೋಲ್ ಆಫ್ ಬೆಂಕಿ ಹಾಡು ಬಿಡುಗಡೆಯಾಗಿದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯದ ಈ ಗೀತೆಗೆ ನಟಿ ಚೈತ್ರಾ ಆಚಾರ್ ಧನ್ವಿಯಾಗಿದ್ದಾರೆ.ತಾಯಿ ಕಳೆದುಕೊಂಡ ತಂಗಿಗೆ ತಾಯಿ-ತಂದೆ ಸ್ಥಾನ ತುಂಬುವ ಅಣ್ಣ, ತಾಯಿ ತ್ಯಾಗವನ್ನು ವಿವರಿಸುವ ಈ ಹಾಡು ಏಕಾಏಕಿ ನಿಮ್ಮನ್ನು ಭಾವನಲೋಕಕ್ಕೆ ತಳ್ಳುವಂತೆ ಮಾಡುತ್ತದೆ.‌ ನಾಗಾರ್ಜುನ್ ಶರ್ಮಾ […]

ಕಳೆದ ಹದಿನೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಂಭಾಷಣೆಕಾರನಾಗಿ ಗುರುತಿಸಿಕೊಂಡಿರುವ ಯುವಧೀರ, ಗುಡ್ ಗುಡ್ಡರ್ ಗುಡೆಸ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದಿದ್ದಾರೆ. ನಿನ್ನೆ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಜೀ ಕನ್ನಡದ ಡಿಕೆಡಿ ಶೋ ವಿನ್ನರ್ ಚೈತ್ರಾಲಿ ಕ್ಲ್ಯಾಪ್ ಮಾಡಿದ್ರೆ, ಬೂಸೆ ಗೌಡ ಎಂಬ ಭರತನಾಟ್ಯದಲ್ಲಿ ನ್ಯಾಷನಲ್ ಅವಾರ್ಡ್ ಪಡೆದ ಅಂಧರೊಬ್ಬರು ಕ್ಯಾಮೆರಾಗೆ ಚಾಲನೆ ನೀಡಿದರು. ಕಳೆದ ಹದಿನೈದು ವರ್ಷಗಳಿಂದ ಸಿನಿಮಾಗಳಲ್ಲಿ ಸಂಭಾಷಣೆಕಾರನಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಮಿಂಚು, ಜಾನಿ ಜಾನಿ […]

  ಕೊರೊನಾ ಆರ್ಭಟ ಮುಗಿದ್ಮೇಲೆ ಬೆಳ್ಳಿತೆರೆಯಲ್ಲಿ ಸಿನಿಮಾಗಳ ಅಬ್ಬರ ಶುರುವಾಗಿದೆ. ವಾರಕ್ಕೆ ಏನಿಲ್ಲ ಅಂದ್ರೂ ಏಳೆಂಟು ಸಿನಿಮಾಗಳು ಥಿಯೇಟರ್ ಪ್ರವೇಶಿಸುತ್ತವೆ. ಹೀಗಿರುವಾಗ ಇಲ್ಲಿ ಉಳಿಯೋದು ಮಾತ್ರ ಬೆರಳೆಣಿಕೆ ಸಿನಿಮಾಗಳಷ್ಟೇ. ಅದ್ರಲ್ಲೂ ಸ್ಟಾರ್ಸ್ ಸಿನಿಮಾಗಳ ನಡುವೆ ತನ್ನ ಕಂಟೆಂಟು ಮತ್ತು ಕ್ವಾಲಿಟಿ ಮೂಲಕ ಗಟ್ಟಿಯಾಗಿ ನಿಲ್ಲುತ್ತವೆ ಎನ್ನುವುದಕ್ಕೆ ಕನ್ನೇರಿ ಸಿನಿಮಾ ತಾಜಾ ಉದಾಹರಣೆ. ಮೂಕಹಕ್ಕಿ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ಭತ್ತಳಿಕೆಯಿಂದ ಬಂದ ನೈಜ ಘಟನೆಯಾಧಾರಿತ ಕನ್ನೇರಿ ಸಿನಿಮಾ ಯಶಸ್ವಿಯಾಗಿ 75 […]

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರಿಯಾಲಿಟಿ ಶೋ ಎಲ್ಲರಿಗೂ ಅಚ್ಚು ಮೆಚ್ಚು. ಒಬ್ಬರಿಗಿಂತ ಒಬ್ಬರೂ ಉತ್ತಮವಾಗಿ ನೃತ್ಯ ಪ್ರದರ್ಶನ ನಿಡುತ್ತಾ ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಈ ರಿಯಾಲಿಟಿ ಶೋ ಪ್ರತಿ ಶನಿವಾರ, ಭಾನುವಾರ 9 ಗಂಟೆಗೆ ಪ್ರಸಾರವಾಗುತ್ತಿದೆ. ಮೇ 21 ರಂದು ನಡೆಯಲಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಸ್ಪೆಷಲ್ ಗೆಸ್ಟ್ ಆಗಮಿಸಿದ್ದಾರೆ. ಇದರಿಂದ ಡಾನ್ಸ್ ಕರ್ನಾಟಕ ಡಾನ್ಸ್ […]

  ಜಗ್ಗೇಶ್​ ಚಿತ್ರರಂಗದಲ್ಲಿ ಈಗಲು ಸಹ ವಿಭಿನ್ನ ಚಿತ್ರಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟೀವ್​ ಆಗಿರುವ ಇರುವ ಜೀವನದ ಸಂತಸದ ಕ್ಷಣ ಹಾಗೂ ನೋವಿನ ವಿಚಾರಗಳನ್ನು ಸಹ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಹೊಸ ಕಾರಿನ ಫೋಟೋವನ್ನು ಜಗ್ಗೇಶ್​ ತಮ್ಮ ಪೋಸ್ಟ್​ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಕಾರಿನ ಫೋಟೋ ಶೇರ್​ ಮಾಡಿರುವ ಅವರು, ರಾಯರ ಕೃಪೆಯಿಂದ […]

  ಆತ ಮೇಲ್ನೋಟಕ್ಕೆ ಸೈಲೆಂಟ್‌ ಹುಡುಗ. ಗೋವಾದಲ್ಲಿ ತಾನಾಯಿತು, ತನ್ನ ಹೋಟೆಲ್‌ ಆಯಿತು ಎಂದುಕೊಂಡಿದ್ದ ಆತನಿಗೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಅದ ಕ್ಕೆ ಕಾರಣ ಸೈಲೆಂಟ್‌ ಹುಡುಗನ ಹಿಂದಿರುವ ವೈಲೆಂಟ್‌ ಸ್ಟೋರಿ. ಅಷ್ಟಕ್ಕೂ ಆ ವೈಲೆಂಟ್‌ ಸ್ಟೋರಿ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಗರುಡ’ ನೋಡಬಹುದು. “ಗರುಡ’ ಒಂದು ಔಟ್‌ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಹಾಗೂ ಮಾಸ್‌ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾರಣ, ಇಲ್ಲಿ ಕಥೆಗಿಂತ ಸನ್ನಿವೇಶಗಳಿಗೆ ಹೆಚ್ಚಿನ […]

ಬನಿಹಾಲ್/ಜಮ್ಮು, ಮೇ 21- ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಕುಸಿತದ ನಂತರ ಅವಶೇಷಗಳಡಿ ಸಿಲುಕಿರುವ ಒಂಬತ್ತು ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಶನಿವಾರ ಮುಂಜಾನೆ ಪುನರಾರಂಭವಾಗಿದೆ. ಮೂವರನ್ನು ರಕ್ಷಿಸಲಾಗಿತ್ತು. ಸುರಂಗದ ಅವಶೇಷಗಳೊಳಗೆ ಸಿಲುಕಿರುವ 9 ಮಂದಿಯನ್ನು ರಕ್ಷಿಸುವ ಕಾರ್ಯಾಚರಣೆ ಇಂದು ಮುಂಜಾನೆ 5.30 ಕ್ಕೆ ಪ್ರಾರಂಭವಾಗಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ ಎಂದು ರಾಂಬನ್ ಜಿಲ್ಲಾಧಿಕಾರಿ ಮುಸ್ಸರತ್ ಇಸ್ಲಾಂ ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ರಾಮ್ಸು ಪೊಲೀಸ್ ಠಾಣೆಯ ಸ್ಟೇಷನ್ […]

  ಬೆಳ್ತಂಗಡಿ: ಪ್ರಕೃತಿಯಲ್ಲಿ ವಿವಿಧ ರೀತಿಯ ವಿಸ್ಮಯಗಳು ನಡೆಯುತ್ತಿರುತ್ತದೆ. ಇದಕ್ಕೆ ಪೂರಕವಾಗಿ ಮನೆಯಲ್ಲಿ ಸಾಕುವ ಕೋಳಿಯೊಂದು ಗೊಡಂಬಿಯಾಕಾರದ ರೀತಿಯಲ್ಲಿ ಕೋಳಿ ಮೊಟ್ಟೆಗಳನ್ನು ಇಡುತಿರುವುದು ಕುತೂಹಲ ಮೂಡಿಸುತ್ತಿದೆ. ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಬೇಲಾಜೆ ಎಂಬಲ್ಲಿಯ ಪ್ರಶಾಂತ್ ಎಂಬವರ ಮನೆಯಲ್ಲಿ ಸಾಕಿದ್ದ ಕೋಳಿಯೊಂದು ಕಳೆದ ಕೆಲವು ದಿನಗಳಿಂದ ಮೊಟ್ಟೆ ಇಡುತಿದ್ದು, ಇದನ್ನು ಗಮನಿಸಿದಾಗ ಗೊಡಂಬಿ ರೀತಿಯಲ್ಲಿ ಕಂಡು ಬರುತ್ತಿದೆ. ಮೊಟ್ಟೆಯ ಆಕಾರ ನೋಡಿ ಎಲ್ಲರೂ ಅಶ್ಚರ್ಯಪಡುವಂತಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

ನವದೆಹಲಿ: ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ಸ್ಯಾಂಡಲ್ ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ಪ್ರತಿಕ್ರಿಯೆ ನೀಡುವ ಮೂಲಕ ಇಬ್ಬರ ನಡುವೆ ಟ್ವಿಟರ್ ವಾಗ್ವಾದ ನಡೆದಿತ್ತು. ಇದೀಗ ಭಾಷೆಗಳ ನಡುವೆ ವಿವಾದ ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 20) ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. “ಹಿಂದಿ ಭಾಷೆಯ ಕುರಿತು ನಾನು […]

ಯಮುನೋರ್ಥಿ ಎಕ್ಸ್ ಪ್ರೆಸ್ ಹೆದ್ದಾರಿಯ ಸುರಕ್ಷಿತಾ ಗೋಡೆ ಕುಸಿದ ಪರಿಣಾಮ 10 ಸಾವಿರ ಮಂದಿ ಸಿಲುಕಿರುವ ಘಟನೆ ಉತ್ತರಾಖಂಡ್ ನಲ್ಲಿ ಶನಿವಾರ ಮುಂಜಾನೆ ಸಂಭವಿವಿಸಿದೆ. ಯಮುನೋರ್ಥಿ ಹೆದ್ದಾರಿ ಸುರಕ್ಷಿತಾ ಗೋಡೆ ಕುಸಿದ ಪರಿಣಾಮ ದೇವಸ್ಥಾನಕ್ಕೆ ತಲುಪಬೇಕಿದ್ದ ಹೆದ್ದಾರಿ ಸೇರಿದಂತೆ ವಿವಿಧೆಡೆ 10,000 ಮಂದಿ ಪ್ರಯಾಣಿಕರು ರಸ್ತೆ ಮಧ್ಯೆ ಸಿಲುಕಿದ್ದಾರೆ ಎನ್ನಲಾಗಿದೆ. ಈ ರಸ್ತೆ ಸಂಚಾರ ಮುಕ್ತಗೊಳ್ಳಲು 3 ದಿನವಾಗಲಿದ್ದು, ಜಿಲ್ಲಾಡಳಿತ ಸಂಚಾರ ಮುಕ್ತಗೊಳಿಸಲು ಶ್ರಮ ವಹಿಸುತ್ತಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial