ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ಇಬ್ಬರು ವಿದ್ಯಾರ್ಥಿಗಳು ಮೈಸೂರಿನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ.ಮೈಸೂರು: ಕಾರು ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಮೈಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.ಮಂಗಳವಾರ ತಡರಾತ್ರಿ ಕಾರು ಹಾಗೂ ಟ್ರಕ್ ನಡುವೆ ಅಪಘಾತ ಸಂಭವಿಸಿದ್ದು, ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಮೌಳೇಶ್ವರ ರೆಡ್ಡಿ, […]

ಕಾರವಾರ: ‘ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಸ್ವ-ರಕ್ಷಣೆಗಾಗಿ ರಾಜ್ಯದಾದ್ಯಂತ ಕರಾಟೆ ತರಬೇತಿಯ ಯೋಜನೆ ರೂಪಿಸಲಾಗಿದೆ. ಓಬವ್ವ ಆತ್ಮರಕ್ಷಣೆ ಕಲೆ ಎಂದು ಹೆಸರಿಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆ.7ರಂದು ವಿಧಾನಸೌಧದ ಮುಂದೆ ಉದ್ಘಾಟಿಸಲಿದ್ದಾರೆ’ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘1,702 ವಸತಿಯುತ ಶಾಲೆಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ, 800ಕ್ಕೂ ಅಧಿಕ ವಸತಿಯುತ ಶಿಕ್ಷಣ ಸಂಸ್ಥೆಗಳಲ್ಲಿ […]

ಸಂಜೆ ವೇಳೆಗೆ ಯುವಕರ ತಂಡ ಮತ್ತೆ ಇಲ್ಲಿಗೆ ಬಂದು ದಾಂಧಲೆ ಎಬ್ಬಿಸಿದೆ. ಈ ಸಂದರ್ಭದಲ್ಲಿ ಓರ್ವ ವ್ಯಕ್ತಿ ಮಾರಕಾಸ್ತ್ರಗಳನ್ನು ಹಿಡಿದಿದ್ದು, ವಿದ್ಯಾರ್ಥಿಗಳು ಇದನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಮಂಗಳೂರು : ಮಂಗಳೂರಿನ ಬಲ್ಲಾಳ್ ಭಾಗ್ ಬಳಿ ಇರುವ ಖಾಸಗಿ ಕಾಲೇಜಿನ ಬಳಿ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಒಂದು ತಂಡದಲ್ಲಿದ್ದ ವ್ಯಕ್ತಿ ಮಾರಾಕಾಸ್ತ್ರಗಳೊಂದಿಗೆ […]

ನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸೋದರ ಮಾವನೇ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನದ ಜಾಲೋರ್​ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿ ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಜಸ್ಥಾನ್​/ಜಾಲೋರ್: ನಾಲ್ಕು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಸೋದರ ಮಾವನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ರಾಜಸ್ಥಾನದ ಜಾಲೋರ್​ನಲ್ಲಿ ನಡೆದಿದೆ.ಆರೋಪಿ ನಾರಾಯಣ ಜಿಲ್ಲೆಯ ಲೇಟಾ ಗ್ರಾಮದ ನಿವಾಸಿಯಾಗಿದ್ದು, ಬಾಲಕಿಗೆ ಸೋದರ ಮಾವನಾಗಬೇಕು.ಬುಧವಾರ ಸಂಬಂಧಿಕರ ಮನೆಗೆ ಬಂದ ಆರೋಪಿ, ಮಧ್ಯಾಹ್ನ ಬಾಲಕಿಯ […]

ಮುಂಬಯಿ : 2022 ರಲ್ಲಿ ಹಿಂದಿ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿರುವ ನಟಿ ದೀಪಿಕಾ ಪಡುಕೋಣೆ , ಖಾಲಿ ಹಾಳೆ ಮತ್ತು ತಮ್ಮ ಕೌಶಲ್ಯಗಳ ಬಗ್ಗೆ ಖಚಿತವಾಗಿರುವವರ ನಡುವೆ, ನಾನು ಎರಡರ ಮಿಶ್ರಣವಾಗಲು ಬಯಸುತ್ತೇನೆ ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.ಮಾಡೆಲಿಂಗ್ ಮೂಲಕ ವೃತ್ತಿ ಜೀವನ ಆರಂಭಿಸಿದ ದೀಪಿಕಾ 2006 ರಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ ಕನ್ನಡ ಚಲನಚಿತ್ರ “ಐಶ್ವರ್ಯ” ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.2007 ರ […]

ಉತ್ತರ ಕೊರಿಯಾ(North Korea) ಈ ದುರಾದೃಷ್ಟ ದೇಶದ(Country) ಹೆಸರು ಕೇಳಿದ್ರೆ ಎಲ್ಲರಿಗೆ ಮೊದಲು ನೆನಪಿಗೆ ಬರೋದು ಅಲ್ಲಿನ ಹುಚ್ಚು ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್(Kim Jong Un)​.ಆನೆ(Elephant) ನಡೆದಿದ್ದೆ ದಾರಿ ಎನ್ನುವಂತೆ,ತಾನು ಮಾಡಿದ್ದೇ ಕಾನೂನು(Law) ತಾನು ನಡೆದಿದ್ದೇ ದಾರಿ(Road) ಎನ್ನೂವ ಕಿಮ್​, ತನ್ನ ದೇಶದಲ್ಲಿ ಯಾರೂ ಕೂಡ ತಾನು ವಿಧಿಸಿದ ನಿಯಮಗಳನ್ನ(Rules) ಮೀರಿ ನಡೆಯಬಾರದು ಎಂದು ಬಯಸುತ್ತಾನೆ. ತನಗೆ ಬೇಕಾದ ಚಿತ್ರ ವಿಚಿತ್ರ ಕಾನೂನುಗಳನ್ನ ಜಾರಿಗೆ ತರುವ ಕಿಮ್​ ತಾನು […]

ಮುಂಬೈನ ಏಷ್ಯನ್ ಹಾರ್ಟ ಇನ್ಸ್ಟಿಟ್ಯೂಟ್ ​ಆಸ್ಪತ್ರೆಗೆ ಸುನಿಲ್​ ಅವರನ್ನು ಅಡ್ಮಿಟ್​ ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆ ಅಭಿಮಾನಿಗಳು ಆತಂಕ ಹೊರ ಹಾಕೋಕೆ ಆರಂಭಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು.ತಮ್ಮ ಹಾಸ್ಯ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆಯುತ್ತಾರೆ ನಟ ಸುನಿಲ್​ ಗ್ರೋವರ್  ಬುಧವಾರ  ಫೆಬ್ರವರಿ 2  ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅವರಿಗೆ ಹೃದಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾದರು. ಸುನಿಲ್​ […]

  ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ರಾತ್ರಿ ಮಲಗುವ ಮೊದಲು ಎರಡು ಲವಂಗವನ್ನು ನೀರಿನ ಜೊತೆ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು ದೂರ ಓಡುತ್ತವೆ.ಲವಂಗದ ಸೇವನೆಯಿಂದ ಯಕೃತ್ತಿನ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಯಕೃತ್ತಿನಲ್ಲಿ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ. ಹಾಗೆ ಅದು ಆರೋಗ್ಯಕರವಾಗಿ ಕೆಲಸ ಮಾಡಲು ಲವಂಗ ನೆರವಾಗುತ್ತದೆ.ಲವಂಗವನ್ನು […]

ಪಂಚವೃಕ್ಷಗಳಲ್ಲಿ ಒಂದೆಂದು ಹೆಸರು ಪಡೆದಿರುವ ಪಾರಿಜಾತ ಸುಗಂಧಿತ ಪುಷ್ಪಗಳ ಸಾಲಿನಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ರಾತ್ರಿ ವೇಳೆ ಅರಳುವ ಈ ಹೂವಿನ ಕಂಪು ಮೂಗಿಗೆ ಹಿತ.ಜಾಂಡೀಸ್ ಮತ್ತು ಮಲಬದ್ಧತೆ ಸಮಸ್ಯೆಗೆ ಪಾರಿಜಾತ ಎಲೆಯ ಔಷಧ ಬಳಸುತ್ತಾರೆ. ಕೀಲುನೋವು, ತಲೆಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರಗಳಿಗೆ ಪಾರಿಜಾತವನ್ನು ಔಷಧವಾಗಿ ಬಳಸುತ್ತಾರೆ.6-7 ಎಲೆಗಳನ್ನು ತೆಗೆದು ಜಜ್ಜಿ ಕುದಿಸಿ ಕಷಾಯ ರೂಪದಲ್ಲಿ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ನಿರ್ವಹಿಸುತ್ತದೆ. ಇದರ ಬೀಜದ ಪುಡಿಯನ್ನು […]

ಬೆಂಗಳೂರು ಫೆಬ್ರವರಿ 03: ತಮ್ಮ ಕರೆ ಸ್ವೀಕರಿಸದ್ದಕ್ಕೆ ಶಾಸಕ ಸೋಮಶೇಖರ ರೆಡ್ಡಿ ಆಕ್ರೋಶಗೊಂಡ ಬೆನ್ನಲ್ಲೆ ಇಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಮಶೇಖರ್ ರೆಡ್ಡಿ ಅವರು ಆರೋಗ್ಯ ಸರಿ ಇಲ್ಲದ ಸಮಯದಲ್ಲಿ ನನಗೆ ಕರೆ ಮಾಡಿದ್ದರು.ಅವರು ನನ್ನ ಆತ್ಮೀಯ ಸ್ನೇಹಿತರು ಎಂದು ಸುಧಾಕರ್ ಹೇಳಿದ್ದಾರೆ.ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಕೆ ಸುಧಾಕರ್, ‘ಸೋಮಶೇಖರ್ ರೆಡ್ಡಿ ನನಗೆ ಕರೆ ಮಾಡಿದ್ದರು. ಆಗ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ […]

Advertisement

Wordpress Social Share Plugin powered by Ultimatelysocial