ಹೊಸ ದಾರಿ ಹಿಡಿದ ಚಂದನ್‌ ಶೆಟ್ಟಿ! ಆಲ್ಬಂ ಹಾಡಿನ ಸೋಲು

ಚಂದನ್ ಶೆಟ್ಟಿ ಆಲ್ಬಂ ಹಾಡುಗಳು, ಸಂಗೀತ ನಿರ್ದೇಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಅಷ್ಟೇ ಯಾಕೆ ಪತ್ನಿ ನಿವೇದಿತಾ ಅವರ ಜೊತೆಗೆ ಸಾಕಷ್ಟು ತುಂಟಾಟದ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಚಂದನ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲೂ ಕೂಡ ಸಿಕ್ಕಾಪಟ್ಟೆ ಫೇಮಸ್.ಚಂದನ್ ಶೆಟ್ಟಿ ಸದಾ ಒಂದಲ್ಲಾ ಒಂದು ಹೊಸ ಸಾಹಸಕ್ಕೆ ಕೈ ಹಾಕುತ್ತಲಿರುತ್ತಾರೆ. ಸಿನಿಮಾ ಹಾಡುಗಳ ಸಂಗೀತ ಮತ್ತು ಆಲ್ಬಂ ಹಾಡುಗಳು ಕೂಡ ಒಂದಕ್ಕಿಂತ ಒಂದು ವಿಭಿನ್ನ. ಪತ್ನಿ ನಿವೇದಿತಾ ಅವರಿಗಾಗಿ ಪ್ರತ್ಯೇಕವಾಗಿ ಹಾಡು ಕಂಪೋಸ್ ಮಾಡಿ ಸೈ ಎನಿಸಿಕೊಂಡಿದ್ದಾರೆ ಚಂದನ್ ಶೆಟ್ಟಿ.ಇಷ್ಟು ದಿನ ತೆರೆಯ ಹಿಂದೆ ಕೆಲಸ ಮಾಡುತ್ತಿದ್ದ ಚಂದನ್ ಶೆಟ್ಟಿ ಅವರು ಈಗ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಹೌದು ಚಂದನ್ ಶೆಟ್ಟಿ ಹೀರೋ ಆಗಿ ಅದೃಷ್ಟ ಪರೀಕ್ಷೆಗೆ ಇಳಿದು ಬಿಟ್ಟಿದ್ದಾರೆ. ಅವರ ಸಿನಿಮಾ ದ ಟೈಟಲ್ ಮತ್ತು ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ.ಚಂದನ್ ಶೆಟ್ಟಿ, ಆಲ್ಬಂ ಹಾಡುಗಳನ್ನು ಮಾಡಲು ಆರಂಭಿಸಿದಾಗಿನಿಂದಲೂ ಹೊಸ ವರ್ಷಕ್ಕೆ ಒಂದಲ್ಲಾ ಒಂದು ಹಾಡು ರಿಲೀಸ್ ಮಾಡ್ತಾರೆ. ಹೊಸ ವರ್ಷದ ಪಾರ್ಟಿ ರಂಗು ಹೆಚ್ಚಿಸಲೆಂದೇ ಚಂದನ್ ಶೆಟ್ಟಿ ಹೊಸ ಹಾಡು ಮಾಡಿ ರಿಲೀಸ್ ಮಾಡ್ತಾರೆ. ಹೀಗೆ ಬಂದ ಹಲವು ಹಾಡುಗಳು ಹಿಟ್ ಆಗಿವೆ. 3 ಪೆಗ್, ಟಕೀಲಾ, ಪಾರ್ಟಿ ಫ್ರೀಕ್ ಹಾಡುಗಳು ರಿಲೀಸ್ ಆಗಿ ವೈರಲ್ ಲಿಸ್ಟ್ ಸೇರಿವೆ ಕೂಡ. ಆದರೆ ಈ ವರ್ಷದ ಹಾಡು ಚಂದನ್ ಅವರಿಗೆ ಅಷ್ಟೇನು ಖ್ಯಾತಿ ತಂದು ಕೊಡಲಿಲ್ಲ. ಹೊಸ ವರ್ಷಕ್ಕೆ ಬಂದ ಈ ಹಾಡು ಜನ ಮನಗೆಲ್ಲುವಲ್ಲಿ ವಿಫಲ ಆಗಿದೆ. ಹಾಗಾಗಿ ಚಂದನ್ ಈಗ ಹೊಸ ದಾರಿ ಹಿಡಿದಿದ್ದಾರೆ.ಹೀರೋ ಆಗ್ತಿದ್ದಾರೆ ಚಂದನ್ ಶೆಟ್ಟಿ! ಇಷ್ಟು ದಿನ ನಟನೆಯಿಂದ ದೂರ ಉಳಿದಿದ್ದ ಚಂದನ್ ಶೆಟ್ಟಿ ಈಗ ಸಿನಿಮಾದಲ್ಲಿ ನಟನೆ ಮಾಡಲು ಮುಂದಾಗಿದ್ದಾರೆ. ಚಂದನ್ ಶೆಟ್ಟಿ ಅವರು ರೆಟ್ರೋ ಲುಕ್‌ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಚಂದನ್ ಶೆಟ್ಟಿ ಅವರ ಲುಕ್‌ನ ಫೋಟೊ ರಿವೀಲ್ ಆಗಿದ್ದು, ಚಂದನ್ ವಿಭಿನ್ನವಾಗಿ ಕಾಣಿಸಕೊಂಡಿದ್ದಾರೆ. ಅವರ ಮೊದಲ ಸಿನಿಮಾದಲ್ಲಿ ಚಂದನ್ ಶೆಟ್ಟಿ ಇದೇ ಅವರತಾರದಲ್ಲಿ ಅಭಿನಯಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 .

Please follow and like us:

Leave a Reply

Your email address will not be published. Required fields are marked *

Next Post

ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಭಾಷಣ;

Mon Jan 31 , 2022
 ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್  ಅವರ ಭಾಷಣದ  ಮೂಲಕ ಈ ವರ್ಷದ ಮೊದಲ ಬಜೆಟ್ ಅಧಿವೇಶನ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಸಂಸತ್ತಿನ ಅಧಿವೇಶನ ಫೆಬ್ರುವರಿ 11ರವರೆಗೆ ನಡೆಯಲಿದೆ. ರಾಷ್ಟ್ರಪತಿಯವರ ಭಾಷಣದ  ನಂತರ ಕೇಂದ್ರ ವಿತ್ತ ಸಚಿವೆ  ನಿರ್ಮಲಾ ಸೀತಾರಾಮನ್ಆ ರ್ಥಿಕ ಸಮೀಕ್ಷೆಯನ್ನು  ಮಂಡಿಸಲಿದ್ದಾರೆ. ತಮ್ಮ ಭಾಷಣದಲ್ಲಿ ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ್ದಾರೆ. ಇಲ್ಲಿವೆ ರಾಷ್ಟ್ರಪತಿಯವರ ಭಾಷಣದ ಕೆಲ ಮುಖ್ಯಾಂಶಗಳು ತಮ್ಮ ಕರ್ತವ್ಯಗಳಿಗೆ […]

Advertisement

Wordpress Social Share Plugin powered by Ultimatelysocial