ಜನಾರ್ದನ ರೆಡ್ಡಿ ಬೆಂಬಲಿಸಿ ಬಿಜೆಪಿ ಮುಖಂಡರಿಂದ ರಾಜೀನಾಮೆ ಪರ್ವ

ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿ ಗಂಗಾವತಿಯಿಂದ ಸ್ಪರ್ಧೆ ಮಾಡಲು ನಿರ್ಧರಿಸಿದಾಗಿನಿಂದ ಗಂಗಾವತಿ ಸೇರಿ ವಿವಿಧ ನಗರಗಳ ಬಿಜೆಪಿ ಮುಖಂಡರು ಗಾಲಿ ಜನಾರ್ದನರೆಡ್ಡಿಯನ್ನು ಬೆಂಬಲಿಸಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದಾರೆ.ಗಂಗಾವತಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಸರಕಾರದ ವಿವಿಧ ಹುದ್ದೆಗೆ ನಾಮನಿರ್ದೇಶನಗೊಂಡಿದ್ದ ಕೆಲವರು ಸೇರಿ ಹತ್ತಕ್ಕೂ ಹೆಚ್ಚು ಬಿಜೆಪಿ ಪ್ರಮುಖರು ಮಂಗಳವಾರ ಗಾಲಿ ಜನಾರ್ದನರೆಡ್ಡಿ ಸಮ್ಮುಖದಲ್ಲಿ ರೆಡ್ಡಿ ಪಕ್ಷವನ್ನು ಸೇರ್ಪಡಗೊಂಡರು.ನಗರಯೋಜನಾ ಪ್ರಾಧಿಕಾರದ ಸದಸ್ಯ ಮನೋಹರಗೌಡ, ವಿರೇಶ ಸುಳೆಕಲ್,ವೀರೇಶ ಬಲ್ಕುಂದಿ,ಹೊಸಮಲಿ ರಮೇಶ ನಾಯಕ, ಚಳಗೇರಿ ನಾಗರಾಜ, ಆದೋನಿ ಶಿವು, ಚನ್ನವೀರನಗೌಡ ಕೋರಿ,ಯಮನೂರ ಚೌಡ್ಕಿ, ದುರುಗಪ್ಪ ಆಗೋಲಿ ಸೇರಿ ವಿವಿಧ ಸಂಘಟನೆಗಳ ಅಧ್ಯಕ್ಷರು ಕಾರ್ಯಕರ್ತರು ರೆಡ್ಡಿ ಬೆಂಬಲಿಸಿ ಪಕ್ಷ ಸೇರ್ಪಡೆಗೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರೀತಮ್ ಗೌಡರ ಸವಾಲು ಸ್ವೀಕರಿಸಿ ಹಾಸನ ಕ್ಷೇತ್ರದ ಗುಟ್ಟು ಬಿಚ್ಚಿಟ್ಟ ಸಂಸದ ಪ್ರಜ್ವಲ್​ ರೇವಣ್ಣ

Tue Jan 10 , 2023
ಬಿಜೆಪಿ ಶಾಸಕ ಪ್ರೀತಮ್ ಗೌಡ ಮಾಡಿರುವ ಸವಾಲನ್ನು ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರ ಕುಟುಂಬ ಸ್ವೀಕರಿಸಿದ್ದು, ಹಾಸನ ಕ್ಷೇತ್ರದ ಗುಟ್ಟನ್ನು ಸಂಸದ ಪ್ರಜ್ವಲ್ ರೇವಣ್ಣ ಕೊನೆಗೂ ಬಿಟ್ಟುಕೊಟ್ಟಿದ್ದಾರೆ. ಹಾಸನಕ್ಕೆ ರೇವಣ್ಣ ಕುಟುಂಬದ ಸದಸ್ಯರೇ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದಾರೆ.ಇಂದು (ಜ.10) ವರದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್​ ರೇವಣ್ಣ, ನಾವು ಯಾವಾಗ ತಾನೇ ಸವಾಲಿಗೆ ತಯಾರಿಲ್ಲ ಅಂತ ಹೇಳಿದ್ದೀವಿ. ನಾವು ಸವಾಲಿಗೆ ನೂರಕ್ಕೆ ನೂರು ತಯಾರಿದ್ದೇವೆ. ಎಲ್ಲಾದ್ರೂ ನಾವು ಸವಾಲನ್ನು ಬಿಡ್ತಿವಾ? ರೇವಣ್ಣ […]

Advertisement

Wordpress Social Share Plugin powered by Ultimatelysocial