ಚಿಕ್ಕಲ್ಲೂರು ದೇವಸ್ಥಾನ ಮಂಗಳಾರತಿ ಹಣಕ್ಕಾಗಿ ಒಡೆದಾಡಿದ ಅರ್ಚಕರು.

ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದ ಅಂತ್ರ(ತಾತಿ) ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಹಣದ ವಿಚಾರಕ್ಕೆ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಭಾನುವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಪರಸ್ಪರ ಬಡಿದಾಡಿ ಕೊಂಡಿರುವ ದೃಶ್ಯ ದೇವಾಲಯದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಈಗಾಗಲೇ ಗಲಾಟೆಯ ಈ ವಿಡಿಯೋ ವಾಟ್ಸ್ ಆಪ್ ಗಳಲ್ಲಿ ಹರಿದಾಡುತ್ತಿದ್ದು. ದೇವರ ಪೂಜೆ ಮಾಡುವ ಅರ್ಚಕರೆ ಸಾರ್ವಜನಿಕವಾಗಿ ಹೊಡೆ ದಾಡಿಕೊಡಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಶ್ರೀ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಪ್ರಮುಖ ವಾದದ್ದು ಇದೇ ತಿಂಗಳ ಜ.6 ರಿಂದ 10 ರವರೆಗೆ ಜಾತ್ರೆ ನಡೆದಿದೆ. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಭೇಟಿ ನೀಡುತ್ತಿದ್ದಾರೆ. ಜಾತ್ರೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಭಕ್ತರಿಂದ ದೇವಾಲಯಕ್ಕೆ ಹೆಚ್ಚಿನ ವರಮಾನವು ಬರುತ್ತಿದೆ. ಈ ನಡುವೆ ಹಿಂದಿನಿಂದಲೂ ಶ್ರೀ ಸಿದ್ದಪ್ಪಾಜಿ ದೇವರ ಪೂಜೆ ಮಾಡುವ ಅರ್ಚಕ ಕುಟುಂಬದ ಅಣ್ಣ-ತಮ್ಮಂದಿರೇ ಬಡಿದಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ದೀಪಾ ಭಾಸ್ಕರ್ ಮತ್ತೆ ಕಿರುತೆರೆಗೆ ಮರಳಿರುವುದು ವೀಕ್ಷಕರಿಗೆ ಖುಷಿ ನೀಡಿದೆ.

Tue Jan 17 , 2023
      ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಯುಗಾಂತರ’ ಧಾರಾವಾಹಿಯಲ್ಲಿ ದೀಪಾ ಅಗರ್ವಾಲ್ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಚೆಂದುಳ್ಳಿ ಚೆಲುವೆಯ ಹೆಸರು ದೀಪಾ ಭಾಸ್ಕರ್. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸುಬ್ಬಲಕ್ಷ್ಮಿ ಸಂಸಾರ’ ಧಾರಾವಾಹಿಯಲ್ಲಿ ನಾಯಕಿ, ಹಳ್ಳಿ ಹುಡುಗಿ ಸುಬ್ಬಲಕ್ಷ್ಮಿಯಾಗಿ ವೀಕ್ಷಕರ ಮನ ಸೆಳೆದ ದೀಪಾ ಭಾಸ್ಕರ್ ಮತ್ತೆ ಕಿರುತೆರೆಗೆ ಮರಳಿರುವುದು ವೀಕ್ಷಕರಿಗೆ ಖುಷಿ ನೀಡಿದೆ. ಬಾಲನಟಿಯಾಗಿ ನಟನಾ ಜಗತ್ತಿಗೆ ಕಾಲಿಟ್ಟ ದೀಪಾ ಭಾಸ್ಕರ್ ಮುಂದೆ ಕಿರುತೆರೆ […]

Advertisement

Wordpress Social Share Plugin powered by Ultimatelysocial