ನವದೆಹಲಿ: 2002ರ ಗುಜರಾತ್ ಗಲಭೆಯಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರದ ಹಿಂದೆ ಚೀನಾ ಕೈವಾಡವಿದೆ ಎಂದು ಬಿಜೆಪಿ ಹಿರಿಯ ಸಂಸದ ಹಾಗೂ ವಕೀಲ ಮಹೇಶ್ ಜೇಠ್ಮಲಾನಿ ಗಂಭೀರ ಆರೋಪ ಮಾಡಿದ್ದಾರೆ.
ಬಿಬಿಸಿ ಹತಾಶವಾಗಿದ್ದು, ಅದಕ್ಕೆ ಹಣದ ಅಗತ್ಯವಿದೆ ಮತ್ತು ಅದನ್ನು ಚೀನಾ-ಸಂಬಂಧಿತ ಹುಆವೈ (Huawei) ಕಂಪನಿಯಿಂದ ತೆಗೆದುಕೊಳ್ಳುತ್ತಿದೆ ಎಂದು ಟ್ವೀಟ್ ಮಾಡಿರುವ ಅವರು,
ಬಿಬಿಸಿ ಏಕೆ ಭಾರತ ವಿರೋಧಿಯಾಗಿದೆ? ಏಕೆಂದರೆ ಚೀನಾದ ಸರ್ಕಾರಕ್ಕೆ ಸಂಬಂಧಿತ ಹುಆವೈನಿಂದ ಅದು ಹಣ ಪಡೆದುಕೊಳ್ಳುತ್ತಿದೆ. ಈ ಮೂಲಕ ಅದು ಬಿಬಿಸಿಗೆ ಆಪ್ತರಾದ ಕಾಮ್ರೇಡ್ ಜೈರಾಂ (ಕಾಂಗ್ರೆಸ್ಸಿಗ ಜೈರಾಂ ರಮೇಶ್) ಅವರ ಕಾರ್ಯಸೂಚಿಯನ್ನು ಪ್ರಚುರಪಡಿಸುತ್ತಿದೆ. ಇದು ಸರಳವಾದ ‘ನಗದು-ಪ್ರಚಾರ’ದ ಒಪ್ಪಂದವಾಗಿದೆ. ಬಿಬಿಸಿ ಮಾರಾಟಕ್ಕಿದೆ’ ಎಂದು ಆಪಾದಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada