ಸಿನಿಮಾ ಬಿಟ್ಟು ಅಬ್ಬಾಸ್‌ ಮಾಡ್ತಿರೋದೇನು?

ಕೆಲವು ದಿನಗಳ ಕಾಲ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿದೆ. ನೈಟ್‌ ಶಿಫ್ಟ್‌ ಕೂಡಾ ಮಾಡಿದ್ದೆ, ಅಲ್ಲಿ ಬಾತ್‌ರೂಮ್‌ ತೊಳೆದಿದ್ದೆ. ಆ ಕೆಲಸ ಬೋರ್‌ ಎನಿಸಿತ್ತು. ಕೆಲವೊಮ್ಮೆ ನನಗೆ ಸೂಸೈಡ್‌ ಯೋಚನೆ ಕೂಡಾ ಬಂದಿತ್ತು. ಆದರೆ ನಂತರದ ದಿನಗಳಲ್ಲಿ ಆ ಎಲ್ಲಾ ನೆಗೆಟಿವ್‌ ಯೋಚನೆಗಳಿಂದ ಹೊರ ಬಂದೆ.ಚಿತ್ರರಂಗ ಅನ್ನೋದು ಮಾಯಾಲೋಕ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಏನೂ ಇಲ್ಲದೆ ಇಲ್ಲಿಗೆ ಬಂದವರು ಕೋಟ್ಯಾಧಿಪತಿಗಳಾಗಿದ್ದಾರೆ. ಎಲ್ಲಾ ಇರುವವರು ಬಣ್ಣದ ಬದುಕನ್ನು ನಂಬಿ ಎಲ್ಲವನ್ನೂ ಕಳೆದುಕೊಂಡ ಉದಾಹರಣೆಗಳು ಕೂಡಾ ಇದೆ. ಒಂದು ಕಾಲದಲ್ಲಿ ಅಭಿಮಾನಿಗಳ ಮೆಚ್ಚಿನ ಕಲಾವಿದರಾಗಿ ಹೆಸರು ಮಾಡಿದ್ದ ಬಹಳಷ್ಟು ಕಲಾವಿದರು ಇಂದು ಚಿತ್ರರಂಗದಿಂದ ಸಂಪೂರ್ಣ ದೂರಾಗಿದ್ದಾರೆ.ಅಬ್ಬಾಸ್‌ ಅಲಿ, ನಿಮಗೆ ನೆನಪಿರಬಹುದು ಕನ್ನಡದಲ್ಲಿ ಹಲೋ, ಅಪ್ಪು ಅಂಡ್‌ ಪಪ್ಪು, ಶಾಂತಿ ಶಾಂತಿ ಶಾಂತಿ, ಸವಾರಿ 2 ಸಿನಿಮಾಗಳಲ್ಲಿ ನಟಿಸಿದ್ದ ನಟ. ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಸೇರಿ 5 ಭಾಷೆಗಳಲ್ಲೂ ಅಬ್ಬಾಸ್‌ ನಟಿಸಿದ್ದಾರೆ. ಅಬ್ಬಾಸ್‌, ತಂದೆ ಮಿರ್ಜಾ ಅಬ್ಬಾಸ್‌ ಅಲಿ ಕೂಡಾ ನಟರು. 1975ರಲ್ಲಿ ಪಶ್ಚಿಮ ಬಂಗಾಳದಲ್ಲಿ ಜನಿಸಿದ ಅಬ್ಬಾಸ್‌ಗೆ ಬಾಲ್ಯದಿಂದಲೇ ನಟನೆಯಲ್ಲಿ ಬಹಳ ಆಸಕ್ತಿ. 1996ರಲ್ಲಿ ತಮಿಳಿನ ‘ಕಾದಲ್‌ ದೇಶಮ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಅಬ್ಬಾಸ್‌ಗೆ ಆ ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತು. ಈ ಸಿನಿಮಾ ಹಾಡುಗಳು ಇಂದಿಗೂ ಬಹಳ ಫೇಮಸ್.‌ ಇದಾದ ನಂತರ ವಿಐಪಿ, ಜಾಲಿ, ಪಡಯಪ್ಪ, ಮಲ್‌ಬಾರ್‌ ಪೊಲೀಸ್‌, ಡ್ರೀಮ್ಸ್‌, ಆನಂದಮ್‌, ಕಾದಲ್‌ ವೈರಸ್‌, ಜಿಂದಾ ದಿಲ್‌ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಅಬ್ಬಾಸ್‌, 2015 ರಲ್ಲಿ ತೆರೆ ಕಂಡ ಮಲಯಾಳಂನ ‘ಪಚಕ್ಕಲಂ’ ಎಂಬ ಚಿತ್ರದ ನಂತರ ಮತ್ತೆ ಯಾವ ಸಿನಿಮಾಗಳಲ್ಲೂ ನಟಿಸಲಿಲ್ಲ.ಅಬ್ಬಾಸ್‌ ಎಲ್ಲಿ ಹೋದ್ರು..? ಸಿನಿಮಾಗಳಲ್ಲಿ ಏಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಲೇ ಇತ್ತು. ಕೊನೆಗೆ, ಅಬ್ಬಾಸ್‌ ವಿದೇಶದಲ್ಲಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಾಗಿದೆ. ಇದೀಗ ಅಬ್ಬಾಸ್‌, ಬಹಳ ದಿನಗಳ ನಂತರ ಕ್ಯಾಮರಾ ಮುಂದೆ ಬಂದು ತಾವು ಇಷ್ಟು ದಿನ ಏನು ಕೆಲಸ ಮಾಡುತ್ತಿದ್ದೆ? ಎಲ್ಲಿದ್ದೆ? ಎಷ್ಟು ಕಷ್ಟಪಟ್ಟೆ? ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ದಿ ಫೆಡರಲ್‌’ ಎಂಬ ಯೂಟ್ಯೂಬ್‌ ನಿರೂಪಕರೊಂದಿಗೆ ನ್ಯೂಜಿಲೆಂಡ್‌ನಿಂದಲೇ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ಅಬ್ಬಾಸ್‌, ಸದ್ಯಕ್ಕೆ ನಾನು ಸಿನಿಮಾಗಳಿಂದ ದೂರ ಉಳಿದು ನ್ಯೂಜಿಲ್ಯಾಂಡ್‌ನ ಆಕ್‌ಲ್ಯಾಂಡ್‌ ಎಂಬಲ್ಲಿ ನೆಲೆಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ನನ್ನ ತಂದೆ ತಾಯಿಗೆ ಸಿಆರ್‌ಪಿಎಫ್‌ ಯೋಧರು ಕಿರುಕುಳ ನೀಡಿದ್ದಾರೆ

Wed Dec 28 , 2022
ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗಳಾಗಿ ಅವರ ಕರ್ತವ್ಯ ಅವರು ಮಾಡಿದ್ದಾರೆ. ಸಾಮಾನ್ಯ ಜನರು, ಸೆಲೆಬ್ರಿಟಿಗಳು ಎಂದು ನೋಡದೆ ಎಲ್ಲರನ್ನೂ ಅವರು ಸೆಕ್ಯೂರಿಟಿ ಉದ್ದೇಶಕ್ಕಾಗಿ ಎಲ್ಲರನ್ನೂ ಇದೇ ರೀತಿ ಪರಿಶೀಲನೆ ಮಾಡುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.ತಮಿಳು ನಟ ಸಿದ್ದಾರ್ಥ್‌ ತೆಲುಗು, ಹಿಂದಿ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ಬ್ಯುಸಿ ಇರುವ ಸಿದ್ದಾರ್ಥ್‌ ಈಗ ಸಿಆರ್‌ಪಿಎಫ್‌ ಯೋಧರ ಮೇಲೆ ಒಂದು ಆರೋಪ ಮಾಡಿದ್ದಾರೆ. ನನ್ನ ತಂದೆ ತಾಯಿಗೆ ವಿಮಾನ […]

Advertisement

Wordpress Social Share Plugin powered by Ultimatelysocial