ನಗರಸಭೆಯ 2023 -24ನೇ ಸಾಲಿನ ಆಯವ್ಯಯ ಮಂಡನೆ.

ನಂಜನಗೂಡು ನಗರಸಭೆಯಲ್ಲಿ 2023- 24ನೇ ಸಾಲಿಗೆ ಎರಡು ಕೋಟಿ 3, ಲಕ್ಷದ 12,ಸಾವಿರ ಉಳಿತಾಯ ಬಜೆಟ್ ಮಂಡನೆ ಮಾಡಲಾಯಿತು .ನಗರಸಭಾ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಮಹದೇವಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆ .
ಸುಮಾರು ಎರಡು ಕೋಟಿ ಮೂರು ಲಕ್ಷಕ್ಕೂ ಹೆಚ್ಚು ಉಳಿತಾಯ ಬಜೆಟ್ ಮಂಡನೆ ಮಂಡಿಸಿದ ನಗರಸಭಾ ಅಧ್ಯಕ್ಷರು
ಮೂರನೇ ವರ್ಷದ ಹ್ಯಾಟ್ರಿಕ್ ಬಜೆಟ್ ಮಂಡನೆ ಮಾಡಿದ ನಗರಸಭಾಧ್ಯಕ್ಷ ಮಹಾದೇವಸ್ವಾಮಿ.ಕಳೆದ ಸಾಲಿನಲ್ಲಿ 50 ಕೋಟಿ ಮಂಡಿಸಿದ್ದ ನಗರಸಭೆಯಲ್ಲಿ ಈ ಬಾರಿ ಅದು 77 ಕೋಟಿ 38 ಲಕ್ಷದ ಅರವತ್ತೆಂಟು ಸಾವಿರಕ್ಕೆ ಏರಿಕೆಯಾಗಿದೆ . ಪ್ರಾರಂಭಿಕ ಶಿಲ್ಕು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿದಂತೆ ವಿವಿಧ ಮೂಲಗಳಿಂದ ಬಂದ ಜಮಾ ಸೇರಿ ಒಟ್ಟು 77 ಕೋಟಿ 38 ಲಕ್ಷದ ಮೂವತ್ತು ಸಾವಿರ ಬಜೆಟ್ಟನ್ನು ಓದುವ ಮೂಲಕ ಅಧ್ಯಕ್ಷರು ಸಭೆಗೆ ಪರಿಚಯಿಸಿದರು .ಎಲ್ಲಾ ಸದಸ್ಯರು ಚಪ್ಪಾಳೆ ತಟ್ಟುವ ಮೂಲಕ ಬಜೆಟ್ ಮಂಡನೆಯನ್ನು ಸ್ವಾಗತಿಸಿದರು .ಸದಸ್ಯರುಗಳಾದ ಚಂದ್ರಶೇಖರ್ ಮತ್ತು ಗಾಯತ್ರಿ ಮೋಹನ್ ಮಾತನಾಡಿ ಬಜೆಟ್ ಪರ ಹಾಗೂ ವಿರುದ್ಧ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಅಧ್ಯಕ್ಷರಿಗೆ ತಮ್ಮ ಅಭಿನಂದನೆ ಸಲ್ಲಿಸಿದರು.ಇದೇ ಸಂದರ್ಭ ನಗರಸಭಾ ಅಧ್ಯಕ್ಷರು,ಸೇರಿದಂತೆ ಎಲ್ಲಾ ಸದಸ್ಯರುಗಳನ್ನು ನಗರಸಭ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು .ಬಳಿಕ ನಗರಸಭೆ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ ಬಜೆಟ್ ಮಂಡನೆಯ ಬಗ್ಗೆ ವಿವರಿಸಿದರು.ನಗರಸಭೆ ಉಪಾಧ್ಯಕ್ಷೆ ನಾಗಮಣಿ ಶಂಕರಪ್ಪ ,ಆಯುಕ್ತರಾದ ರಾಜಣ್ಣ A E E ಶ್ರೀನಿವಾಸ್ ಆರೋಗ್ಯ ಅಧಿಕಾರಿ ಮಧುರ ಸೇರಿದಂತೆ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಪತ್ನಿ ಕಣ್ತಪ್ಪಿಸಿ ಮದುವೆ ಆಗಿದ್ದ ವ್ಯಕ್ತಿಯ ಎರಡನೇ ಪತ್ನಿ ಸೀಮಂತ ಕಾರ್ಯಕ್ರಮ.

Thu Feb 9 , 2023
ಮೊದಲ ಪತ್ನಿ ಕಣ್ತಪ್ಪಿಸಿ ಮದುವೆ ಆಗಿದ್ದ ವ್ಯಕ್ತಿಯ ಎರಡನೇ ಪತ್ನಿ ಸೀಮಂತ ಕಾರ್ಯಕ್ರಮದ ವೇಳೆ ಮಾರಾಮಾರಿ ನಡೆದಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.ಬೆಂಗಳೂರಿನ ಚಂದ್ರ ಲೇ ಔಟ್ ನ ತೇಜಸ್ ಎಂಬಾತ ಮೊದಲ ಪತ್ನಿ ಚೈತ್ರ ಕಣ್ತಪ್ಪಿಸಿ ಎರಡನೇ ಮದುವೆ ಆಗಿದ್ದನು. ಇಂದು ಎರಡನೇ ಪತ್ನಿ ಸೀಮಂತ ಕಾರ್ಯಕ್ರಮ ಬೆಂಗಳೂರಿನ ಚಂದ್ರ. ಲೇ ಔಟ್ ನಲ್ಲಿ ನಡೆಯುತ್ತಿತ್ತು. ಈ ವಿಚಾರ ಹೇಗೊ ಮೊದಲ ಪತ್ನಿಗೆ ತಿಳಿಯಿತು. ತೇಜಸ್ ನ […]

Advertisement

Wordpress Social Share Plugin powered by Ultimatelysocial