ಹುಬ್ಬಳ್ಳಿ: ಭಾರತವನ್ನು ನಕ್ಸಲೈಟ್ ಮುಕ್ತ, ಟೆರಿರಿಸ್ಟ್ ಮುಕ್ತ ಮಾಡಿದ್ದು ಅಮಿತ್ ಶಾ. ಅಮಿತ್ ಶಾ ಉಕ್ಕಿನ ಮನುಷ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಿವ್ಹಿಬಿ ಅಮೃತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮನ್ನ ನೋಡಿದರೆ ಹೊಟ್ಟೆಕಿಚ್ಚ ಆಗತ್ತದೆ. ನಾನು ಇಲ್ಲಿ ಕುಳಿತುಕೊಳ್ಳು ಬದಲು ಮುಂದೆ ಕುಳಿತುಕೊಳ್ಳಬೇಕಿತ್ತು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಸ್ಯ ಚಟಾಕಿ ಹಾರಿಸಿದರು.
ಕ್ಯಾಂಪಸ್ ನೋಡಿದರೆ ನಾವು ಇವಾಗ ಇಲ್ಲಿ ವಿದ್ಯಾರ್ಥಿಗಳು ಆಗಬೇಕಿತ್ತು. ಕಾಲೇಜ್ ನಲ್ಲಿ ಮೊದಲು ಸಿವಿಲ್,ಮೆಕ್ಯಾನಿಕಲ್ ಬಿಟ್ಟರೆ ಅವಾಗ ಏನೂ ಇರಲಿಲ್ಲ.
ಕ್ಯಾಂಟಿನ್ ನಮ್ಮ ಫೇವರೇಟ್ ಪ್ಲೇಸ್. ಕ್ಯಾಂಟಿನ್ ನಲ್ಲಿ ಕೊಡುವ ಬೋಂಡಾ ಸೂಪ್ ನೆನಪಿಸಿಕೊಂಡ ಭಾವುಕರಾದರು.
ಭಾರತದ ನವ ನಿರ್ಮಾಣದಲ್ಲಿ ಕೆಎಲ್ಇ ಬಹಳ ಪ್ರಮುಖ ಪಾತ್ರ ವಹಿಸುತ್ತಿದೆ. ನಾವು ಎಷ್ಟೇ ದೊಡ್ಡವರಾದರೂ ಕಲಿತ ಶಾಲೆ, ಗುರುಗಳನ್ನು ಎಂದು ಮರೆಯಬಾರದು,ಇದು ನಮ್ಮ ಧರ್ಮ ಎಂದರು.
ಆರ್ಥಿಕವಾಗಿ ಒಂದು ರಾಜ್ಯ ಬೆಳೆದರೆ ,ಶೈಕ್ಷಣಿಕವಾಗಿ ರಾಜ್ಯ ಬೆಳೆಯುತ್ತದೆ. ಇಡೀ ದೇಶದಲ್ಲಿ FDI ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದೇವೆ. ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೂಡಿ ಉತ್ತಮ ಕೆಲಸ ಮಾಡುತ್ತಿದ್ದೇವೆ.ಇದು ಡಬಲ್ ಇಂಜಿನ್ ಸರ್ಕಾರ. ಅಮಿತ್ ಶಾ ಗೃಹ ಖಾತೆಯಲ್ಲಿ ಬಹಳ ಬದಲಾವಣೆ ಮಾಡಿದ್ದಾರೆ. ಇವತ್ತು ಕರ್ನಾಟಕಕ್ಕೆ ವಿಧಿ ವಿಜ್ಞಾನ ಕ್ಯಾಂಪಸ್ ಕೊಟ್ಟಿದ್ದು ಅಮಿತ್ ಶಾ. ಇದು ಮುಂದಿನ ದಿನಗಳಲ್ಲಿ ದೊಡ್ಡ ಕೊಡುಗೆಯಾಗಲಿದೆ ಎಂದು ಅವರು ಹೇಳಿದರು.
ಹೆಣ್ಣು ಮಕ್ಜಳಿಗಾಗಿ 700 ಕೋಟಿ ಹಣ ಕೊಟ್ಟಿದ್ದಾರೆ. ಅಮಿತ್ ಶಾ ಸಹಕಾರಿ ಸಚಿವರು,ಬರುವ ದಿನದಲ್ಲಿ ಸಹಕಾರ ಇಲಾಖೆಯಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಬಿವ್ಹಿಬಿ ಕಾಲೇಜ್ ಗೆ ಅಭಿನಂದನೆ ಸಲ್ಲಿಸಿದ ಸಿಎಂ
ಮತ್ತೆ ಸೆಂಚೂರಿ ಸಂಭ್ರಮದಲ್ಲಿ ಭಾಗಿಯಾಗೋಣ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
https://play.google.com/store/apps/details?id=com.speed.newskannada