ಒಂದೇ ದಿನ 541 ಜನ ಮಹಾಮಾರಿಗೆ ಬಲಿ; ಕೊರೊನಾ ಸೋಂಕಿತರ ಸಂಖ್ಯೆ ಕೊಂಚ ಏರಿಕೆ; ಸಾವಿನ ಸಂಖ್ಯೆಯಲ್ಲಿಯೂ ಮತ್ತೆ ಹೆಚ್ಚಳ;

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕುಸಿತವಾಗಿದ್ದರೂ ಇಂದು ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ 30,757 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆಯಾಗಿದ್ದು, 24 ಗಂಟೆಯಲ್ಲಿ 541 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಈ ಮೂಲಕ ದೇಶದಲ್ಲಿ ಈವರೆಗೆ ಕೋವಿಡ್ ಗೆ ಬಲಿಯಾದವರ ಸಂಖ್ಯೆ 5,10,413ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ 3,32,918 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 24 ಗಂಟೆಯಲ್ಲಿ 67,538 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಈವರೆಗೆ 4,19,10,984 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.

ನಿನ್ನೆ 34,75,951 ಜನರಿಗೆ ವ್ಯಾಕ್ಸಿನ್ ನೀಡಲಾಗಿದ್ದು, ದೇಶದಲ್ಲಿ ಈವರೆಗೆ 1,74,24,36,288 ಜನರಿಗೆ ಲಸಿಕೆ ಹಾಕಲಾಗಿದೆ. ನಿನ್ನೆ 11,79,705 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಮನ್ ಹೆಮ್ಮಾಡಿ ಎಂಬ ಹೆಸರಿನ ಕನ್ನಡಿಗರ ಮಗಳಾದ ಸುಮನ್ ಕಲ್ಯಾಣ್ಪುರ್!

Thu Feb 17 , 2022
ಸುಮನ್ ಹೆಮ್ಮಾಡಿ ಎಂಬ ಹೆಸರಿನ ಕನ್ನಡಿಗರ ಮಗಳಾದ ಸುಮನ್ ಕಲ್ಯಾಣ್ಪುರ್ ಭಾರತೀಯ ಚಿತ್ರರಂಗ ಕಂಡ ಮಹಾನ್ ಹಿನ್ನೆಲೆ ಗಾಯಕಿ. ಬಹುತೇಕವಾಗಿ ಲತಾ ಮಂಗೇಶ್ಕರ್ ಅವರ ಧ್ವನಿಯನ್ನು ಹೋಲುತ್ತಿದ್ದ ಅವರ ಧ್ವನಿಯಲ್ಲಿ ಮೂಡಿದ ಅನೇಕ ಹಾಡುಗಳನ್ನು ಜನ ಲತಾ ಹಾಡಿದ್ದು ಎಂದೇ ಕಲ್ಪಿಸುವುದಿದೆ.1960-70ರ ದಶಕದ ಪ್ರಸಿದ್ಧ ಹಿನ್ನೆಲೆ ಗಾಯಕಿಯಾಗಿದ್ದ ಸುಮನ್ ಕಲ್ಯಾಣ್ಪುರ್ ಅವರ ಸಾಧನೆ ಚಿತ್ರರಂಗದ ಶ್ರೇಷ್ಠ ಹಿನ್ನೆಲೆಗಾಯಕರ ಸಾಲಿನದ್ದೆಂದು ಗೌರವ ಪಡೆದಿದೆ. ಹಿಂದೀ, ಕನ್ನಡ, ಮರಾಠಿ, ಕೊಂಕಣಿ, ಭಾಷೆಗಳೇ ಅಲ್ಲದೆ […]

Advertisement

Wordpress Social Share Plugin powered by Ultimatelysocial