ಕಾರಿನೊಳಗೆ ಆಟವಾಡುತ್ತಿದ್ದಾಗ ಡೋರ್‌ ಲಾಕ್‌: ಉಸಿರುಗಟ್ಟಿ ಮೂವರು ಮಕ್ಕಳು ಸಾವು

 

ತಮಿಳುನಾಡು: ಮಕ್ಕಳು ಕಾರಿನೊಳಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಡೋರ್‌ ಲಾಕ್‌ ಆದ ಪರಿಣಾಮ ಬಾಲಕಿ ಸೇರಿ ಮೂರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಶನಿವಾರ ತಮಿಳುನಾಡಿನ ತಿರುನಲ್ವೇಲಿಯಲ್ಲಿ ನಡೆದಿದೆ.ಮೃತ ಮಕ್ಕಳನ್ನು ನಿತೀಶ್ (7), ಆತನ ಸಹೋದರಿ ನಿತೀಶಾ (5) ಮತ್ತು ಕಪಿಚಂದ್ (4) ಎಂಉ ಗುರುತಿಸಲಾಗಿದೆ. ನಿತೀಶ್ ಮತ್ತು ನಿತೀಶಾ ಇಬ್ಬರೂ ನಾಗರಾಜ ಎಂಬುವರ ಮಕ್ಳಾಗಿದ್ದಾರೆ. ಇನ್ನೂ, ಕಪಿಚಂದ್ ಸುಧಾಕರ್ ಎಂಬುವರ ಮಗ ಎನ್ನಲಾಗಿದೆ.ಇವರು ತಿರುನೆಲ್ವೇಲಿ ಜಿಲ್ಲೆಯ ಪಾನಕುಡಿ ಸಮೀಪದ ವಸತಿ ಪ್ರದೇಶದಲ್ಲಿ ನಾಗರಾಜನ ಸಹೋದರ ಮಣಿಕಂದನ್‌ಗೆ ಸೇರಿದ ಕಾರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಕಾರಿನ ಡೋರ್‌ ಲಾಕ್‌ ಆಗಿದ್ದರಿಂದ ಹೊರಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಪೋಷಕರು ತಮ್ಮ ಮಕ್ಕಳು ಎಷ್ಟು ಸಮಯವಾದರೂ ಕಾಣದ್ದರಿಂದ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದ್ರೆ, ಕೊನೆಗೆ ಮಕ್ಕಳು ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಪಣಕುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠ್ಯ ಪುಸ್ತಕ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರ ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ಪ್ರತಿಭಟನೆ

Sun Jun 5 , 2022
ಸತ್ಯವನ್ನರಿಯದ ಪಠ್ಯ ಪುಸ್ತಕ ರಚನಾಕಾರರು ಬಸವಣ್ಣನವರ ಆಶಯಕ್ಕೆ ಅಪಚಾರ ಎಸಗಿದ್ದಾರೆ ಎಂದು ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ  ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾಸಭಾ ತಾಲೂಕಾ ಘಟಕ ಹಾಗೂ ತಾಲೂಕಿನ ಲಿಂಗಾಯತ ಸಂಘಟನೆಗಳಿಂದ ಪ್ರತಿ ಭಟನೆ  ನಡೆಸುತ್ತಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ  ಸಮಿತಿಯಿಂದ 2022-23ನೇ ಸಾಲಿನ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಅಳವಡಿಸಿದ ಬಸವಣ್ಣನವರ ಕುರಿತು ಒಂದು ಪುಟದ ಕಿರು ಬರಹದಲ್ಲಿ ಅವರ ಚರಿತ್ರೆ ಮತ್ತು ಚಾರಿತ್ರೆಗಳಿಗೆ ದಕ್ಕೆತರುತ್ತಿದ್ದಾರೆ […]

Advertisement

Wordpress Social Share Plugin powered by Ultimatelysocial