ಡಿ.ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಪಟ್ಟವರು ಉತ್ತರ ನೀಡಲಿ-ಪ್ರತಾಪ್‌ ಸಿಂಹ.

ಐಪಿಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ.ರೂಪ ಅವರು ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ. ಇದಕ್ಕೆ ರೋಹಿಣಿ ಸಿಂಧೂರಿ ಮತ್ತು ಸಂಬಂಧಪಟ್ಟವರು ಉತ್ತರ ಕೊಡಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಒತ್ತಾಯಿಸಿದರು.ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸಾವಿಗೀಡಾದರು. ಚಾಮರಾಜಪೇಟೆಗೆ ಆಕ್ಸಿಜನ್‌ ಪೂರೈಸುವ ಜವಾಬ್ದಾರಿ ಮೈಸೂರು ಜಿಲ್ಲಾಡಳಿತಕ್ಕಿತ್ತು. ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಗಿದ್ದರು. ಆದರೆ, ಆ ಬಗ್ಗೆ ಯಾರೂ ಪ್ರಶ್ನೆ ಮಾಡಲಿಲ್ಲ. ಮಾತ್ರವಲ್ಲದೇ ಮೈಸೂರಲ್ಲಿ 2021ರ ವೇಳೆ ಸಂಭವಿಸಿದ ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚಿದ್ದವು. ಹೀಗೆ ಹತ್ತು ಹಲವು ವಿಚಾರದ ಬಗ್ಗೆ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಬೇಕು ಎಂದರು.ಸದ್ಯ ಐಡಿಪಿ ಡಿ.ರೂಪ ಅವರು ಕೇಳಿರುವ ಎಲ್ಲಾ ಪ್ರಶ್ನೆಗಳು ನೈತಿಕವಾಗಿಯೇ ಇವೆ. ಪ್ರಮುಖ ವಿಚಾರಗಳ ಕುರಿತು ಸರ್ಕಾರದ ಕಣ್ಣು ತೆರೆಸುವ ಕೆಲಸವಾಗಬೇಕಿದೆ. ಅಗತ್ಯ ತನಿಖೆಗಳು ನಡೆಯಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಆಗ್ರಹಿಸಿದರು.ಸರ್ವೀಸ್ ರಸ್ತೆ ಮಾಡದೆ ದಶಪಥ ರಸ್ತೆ ಉದ್ಘಾಟನೆ ಮಾಡಲು ಬಿಡಲ್ಲ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. “ಈಗಲಾದರೂ ಡಿಕೆ ಶಿವಕುಮಾರ್ ಅವರಿಗೆ ಬಡವರ ಬಗ್ಗೆ ಕಾಳಜಿ ಬಂತಲ್ಲ. ನಾವು ಸರ್ವೀಸ್ ರಸ್ತೆ ಕೊಟ್ಟ ಬಳಿಕವೇ ಓಡಾಟಕ್ಕೆ ಅವಕಾಶ ನೀಡುತ್ತೇವೆ. ಅಲ್ಲಿಯವರೆಗೂ ಮೈಸೂರಿಗೆ ಗುಂಡ್ಲುಪೇಟೆ ಮಾರ್ಗವಾಗಿ ಹೋಗುತ್ತೇವೆ. ಅಲ್ಲಿ ಸರ್ವೀಸ್ ರಸ್ತೆಯೇ ಇಲ್ಲ. ಇದು ಸಿದ್ದರಾಮಯ್ಯನವರ ಸರ್ಕಾರದಲ್ಲೇ ಆಗಿದ್ದು ಆ ವೇಳೆ ಯಾಕೆ ಆಗಿಲ್ಲ. ನಿಮ್ಮ ಹೇಳಿಕೆ ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಆ ಮೂಲಕ ನಿಮ್ಮ ಮಾತನ್ನ ನಾವು ಪರಿಗಣಿಸುತ್ತೇವೆ. ಪ್ರಶ್ನೆ ಮಾಡುವ ಮೊದಲು ತಾವು ಏನು ಮಾಡಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಡಿಕೆ ಶಿವಕುಮಾರ್‌ಗೆ ತಿರುಗೇಟು ನೀಡಿದರು.ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಚಾಮರಾಜನಗರ- ನಂಜನಗೂಡು 4 ಲೈನ್ ರಸ್ತೆಗೆ ಯಾಕೆ ಸರ್ವಿಸ್ ರೋಡ್ ಬಿಟ್ಟಿಲ್ಲ? ಅಂದು ಬಡವರು ಡಿಕೆಶಿ ಕಣ್ಣಿಗೆ ಕಾಣಲಿಲ್ಲವೆ? ಇಲ್ಲಿಯವರೆ ಸಿಎಂ, ಪಿಡಬ್ಲ್ಯೂಡಿ ಸಚಿವರಾಗಿದ್ದರು. ಅಂದು ಯಾಕೆ ಈ ಬಗ್ಗೆ ಮಾತನಾಡಲಿಲ್ಲ. ಡಿಕೆಶಿ ಅವರ ಹೇಳಿಕೆಯನ್ನ ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ಸರ್ವಿಸ್ ರೋಡ್ ನಿರ್ಮಾಣದ ಬಳಿಕವೇ ಉದ್ಘಾಟನೆ ಆಗಲಿದೆ. ದ್ವಿಚಕ್ರವಹನ, ಸಣ್ಣಪುಟ್ಟ ವಾಹನಗಳಿಗೆ ಸರ್ವಿಸ್ ರೋಡ್ ಇರಲಿದೆ. ಡಿಕೆ ಶಿವಕುಮಾರ್ ಮೊದಲು ನೆನೆಗುದಿಗೆ ಬಿದ್ದಿರುವ ಮಳವಳ್ಳಿ ಬೆಂಗಳೂರು ಮಾರ್ಗ ಸರಿಪಡಿಸಲಿ. ಹಾಸನ-ಬೆಂಗಳೂರು ರಸ್ತೆ ನಿರ್ಮಾಣ ಮಾಡಿದಾಗಲು ಸರ್ವೀಸ್ ರೋಡ್ ಮಾಡಿರಲಿಲ್ಲ. ಅಂದು ಯಾಕೆ ಡಿಕೆಶಿಗೆ ಬಡವರ ಪರ ಕಾಳಜಿ ಇರಲಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನೆ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಟೆಗಟ್ಟಲೆ ಇಯರ್​ಫೋನ್ ಬಳಕೆ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ!

Mon Feb 20 , 2023
ಮೊದಮೊದಲು ಯಾವ ಪ್ರದೇಶದಲ್ಲಿ ಹೆಚ್ಚು ಶಬ್ದವಿರುತ್ತದೋ ಅಲ್ಲಿ ಮಾತುಗಳು ಸುಲಭವಾಗಿ ಕೇಳುವಂತೆ ಮಾಡಲು ಇಯರ್ ಫೋನ್ ಬಳಕೆ ಮಾಡುತ್ತಿದ್ದರು.ಮೊದಮೊದಲು ಯಾವ ಪ್ರದೇಶದಲ್ಲಿ ಹೆಚ್ಚು ಶಬ್ದವಿರುತ್ತದೋ ಅಲ್ಲಿ ಮಾತುಗಳು ಸುಲಭವಾಗಿ ಕೇಳುವಂತೆ ಮಾಡಲು ಇಯರ್ ಫೋನ್ ಬಳಕೆ ಮಾಡುತ್ತಿದ್ದರು. ದಿನದಿಂದ ದಿನಕ್ಕೆ ಕೇವಲ ಮಾತನಾಡುವುದಷ್ಟೇ ಅಲ್ಲದೆ, ಹಾಡುಗಳನ್ನು ಕೇಳಲು ಕೂಡ ಬಳಕೆ ಮಾಡಿದರು, ಈಗ ಸಿನಿಮಾ ನೋಡಲು, ವಿಡಿಯೋ, ರೀಲ್ಸ್ ನೋಡಲು, ದಾರಾವಾಹಿಗಳು ವೀಕ್ಷಿಸಲು ಒಟ್ಟಿನಲ್ಲಿ ಎಲ್ಲಾ ಸಂದರ್ಭದಲ್ಲಿಯೂ ಇಯರ್​ಫೋನ್​ ಅನ್ನು […]

Advertisement

Wordpress Social Share Plugin powered by Ultimatelysocial