ಡಿಬಾಸ್ ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ.

ಬೆಂಗಳೂರು: ಸ್ಯಾಂಡಲ್ ವುಡ್ ಸಿನಿ ರಸಿಕರ ಪಾಲಿನ ಡಿಬಾಸ್ ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. ‘ಮೆಜೆಸ್ಟಿಕ್’ ಚಿತ್ರಕ್ಕೆ 20 ವರ್ಷದಶಕಗಳ ಹಿಂದೆ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದ್ದ ‘ಮೆಜೆಸ್ಟಿಕ್’ ಸಿನಿಮಾವನ್ನು ರೀ ರಿಲೀಸ್‌(Majestic Re-Release) ಮಾಡಲು ನಿರ್ಮಾಪಕ ಎಂ.ಜಿ.ರಾಮಮೂರ್ತಿ ಮುಂದಾಗಿದ್ದಾರೆ. ದರ್ಶನ್‌ ನಾಯಕನಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾ ‘ಮೆಜೆಸ್ಟಿಕ್’ ದೊಡ್ಡ ಹಿಟ್‌ ಕಂಡಿತ್ತು. ಮಾಸ್‌ ಲುಕ್‌ನಲ್ಲಿ ದರ್ಶನ್‌ ಮಿಂಚಿದ್ದರು. ಫೆಬ್ರವರಿ 8ಕ್ಕೆ ‘ಮೆಜೆಸ್ಟಿಕ್’ ಸಿನಿಮಾ 20 ವರ್ಷ ಪೂರೈಸಿದೆ. ಮತ್ತೊಂದ್ಕಡೆ ಫೆಬ್ರವರಿ 16ರಂದು ದರ್ಶನ್‌ ಹುಟ್ಟುಹಬ್ಬವಿದ್ದು, ಈ ಬಾರಿ ಡಿ ಬಾಸ್‌ ಬರ್ತ್‌ಡೇಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಕಾರಣಕ್ಕೆ ‘ಮೆಜೆಸ್ಟಿಕ್’ ಸಿನಿಮಾ ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ರಾರಾಜಿಸಲಿದೆ.ನಟ ದರ್ಶನ್‌ ಅವರಿಗೆ ಮೊದಲ ಸಿನಿಮಾ ದಲ್ಲಿಯೇ ಅದ್ಭುತ ಯಶಸ್ಸು ತಂದು ಕೊಟ್ಟಿತ್ತು ‘ಮೆಜೆಸ್ಟಿಕ್’. ಈ ಚಿತ್ರ ಅಂದುಕೊಂಡ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿ ಸೆಂಚ್ಯೂರಿ ಭಾರಿಸಿತ್ತು. 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಅಭಿಮಾನಿಗಳ ಮನ ಗೆದ್ದಿತ್ತು. ಇಂತಹ ಅದ್ಭುತ ಸಿನಿಮಾವನ್ನು ಮತ್ತೊಮ್ಮೆ ಚಿತ್ರ ಮಂದಿರಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.ಅಷ್ಟಕ್ಕೂ ಚಿತ್ರ ಮಂದಿರಗಳಲ್ಲಿ 100 ಪರ್ಸೆಂಟ್‌ ಆಕ್ಯುಪೆನ್ಸಿ ಸಿಕ್ಕು ಕೆಲವೇ ದಿನಗಳಾಗಿವೆ. ಈ ಹಿನ್ನೆಲೆಯಲ್ಲಿ ಇದೇ ವಾರ 6 ಸಿನಿಮಾ, ಮುಂದಿನ ವಾರ 3 ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ಹೊತ್ತಲ್ಲೇ ‘ಮೆಜೆಸ್ಟಿಕ್'(Majestic) ರೀ ರಿಲೀಸ್‌ ಆಗ್ತಿರೋದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಡಿ ಬಾಸ್‌ ಹುಟ್ಟು ಹಬ್ಬದ ದಿನ ಚಿತ್ರ ಮಂದಿರಗಳ ಬಳಿ ಹಬ್ಬದ ವಾತಾವರಣ ನಿರ್ಮಾಣವಾಗೋದು ಪಕ್ಕಾ ಆಗಿದೆ.ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್  ಭಾವುಕರಾದರು.’ಮೆಜೆಸ್ಟಿಕ್’ ಚಿತ್ರ ಕ್ಕೂ ಮುನ್ನ ಇದ್ದ ಪರಿಸ್ಥಿತಿ ನೆನೆದು, ತಮಗೆ ಮೊದಲ ಅವಕಾಶ ನೀಡಿದ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಅಂದಿನ ತಮ್ಮ ಪರಿಸ್ಥಿತಿ ಬಗ್ಗೆ ದರ್ಶನ್ ಭಾವುಕರಾಗಿ ಮಾತನಾಡಿದ್ದು ಅಭಿಮಾನಿಗಳ ಕಣ್ಣು ಒದ್ದೆಯಾಗಿಸಿತು. ‘ಮೆಜೆಸ್ಟಿಕ್’ ಚಿತ್ರದ ನಿರ್ದೇಶಕ ಪಿ.ಎನ್. ಸತ್ಯ ಅವರನ್ನು ನೆನೆದ ದರ್ಶನ್, ಆವತ್ತು ಸತ್ಯ ಅವರು ನೀಡಿದ ಬೆಂಬಲ ಇಂದಿಗೂ ನನ್ನ ಸ್ಯಾಂಡಲ್ ವುಡ್(Sandalwood)ನಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದೆ ಎಂದರು. ಹಾಗೇ ತಮ್ಮ ಮೊದಲ ಸಿನಿಮಾಗೆ ಬಂಡವಾಳ ಹೂಡಿದ ನಿರ್ಮಾಪಕರ ಬಗ್ಗೆಯೂ ಹೆಮ್ಮೆಯ ಮಾತುಗಳನ್ನು ಆಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: ಚಿಂತಿಸಬೇಡಿ ನಾನು ಕ್ರೀಸ್‌ನಲ್ಲಿದ್ದೇನೆ-ರಾಜಸ್ಥಾನ್ ರಾಯಲ್ಸ್ ಅಶ್ವಿನ್ ಅವರನ್ನು ಹರಾಜಿನಲ್ಲಿ ಖರೀದಿಸಿದ ನಂತರ ಜೋಸ್ ಬಟ್ಲರ್ ಪ್ರತಿಕ್ರಿಯಿಸಿದರು

Sun Feb 13 , 2022
  ಇಂಗ್ಲೆಂಡ್ ವಿಕೆಟ್‌ಕೀಪರ್-ಬ್ಯಾಟರ್ ಜೋಸ್ ಬಟ್ಲರ್ ಅವರು ಮುಂಬರುವ ಐಪಿಎಲ್ 2022 ರ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರ್ ಅಶ್ವಿನ್ ಅವರನ್ನು ಸ್ವಾಗತಿಸಿದರು, ಆದರೆ ಅನುಭವಿ ಭಾರತೀಯ ಆಫ್ ಸ್ಪಿನ್ನರ್ ಅವರು ಕ್ರೀಸ್‌ನಲ್ಲಿ ಉಳಿಯುವುದರಿಂದ ಚಿಂತಿಸಬೇಕಾಗಿಲ್ಲ ಎಂದು ತಮಾಷೆ ಮಾಡಿದರು. ಮೆಗಾ ಹರಾಜಿನ ಮೊದಲು ಬಟ್ಲರ್ ಅವರನ್ನು ರಾಜಸ್ಥಾನ್ ರಾಯಲ್ಸ್ (RR) ಉಳಿಸಿಕೊಂಡರೆ, ಅಶ್ವಿನ್ ಅವರನ್ನು ರಾಯಲ್ಸ್ INR 5 ಕೋಟಿಗೆ ಖರೀದಿಸಿತು. ಗಮನಾರ್ಹವಾಗಿ, ರಾಜಸ್ಥಾನ ಮತ್ತು ಕಿಂಗ್ಸ್ ಇಲೆವೆನ್ […]

Advertisement

Wordpress Social Share Plugin powered by Ultimatelysocial