Diganth @ Murdeshwara :ನೇತ್ರಾಣಿಯಲ್ಲಿ ಸ್ಕೂಬಾ ಡೈವ್ ಮಾಡಿದ ನಮ್ಮ ದೂಧ್ ಪೇಡಾ

 

ಜಗದ್ವಿಖ್ಯಾತ ಮುರುಡೇಶ್ವರಕ್ಕೆ ಸ್ಯಾಂಡಲ್‌ವುಡ್‌ ನಟ ದೂದ್‌ಪೇಡ ದಿಗಂತ್ ಭೇಟಿ ನೀಡಿ  ಸಮೀಪದ ನೇತ್ರಾಣಿಯಲ್ಲಿ  ಸ್ಕೂಬಾ ಡೈವಿಂಗ್ ಮಾಡಿದರು. ಸುಮಾರು 2 ಗಂಟೆಗಳ ಕಾಲ ಸ್ಕೂಬಾ ಡೈವಿಂಗ್ ಮಾಡಿ ಸಂಭ್ರಮಿಸಿದ ಅವರು .ತಂದೆ – ತಾಯಿಯ ಜತೆ ಮುರುಡೇಶ್ವರಕ್ಕೆ ಆಗಮಿಸಿದ್ದರು, ನೇತ್ರಾಣಿ ಅಡ್ವೆಂಚರ್ಸ್‌ನ ಡೈವರ್​​​ಗಳೊಂದಿಗೆ ನೇತ್ರಾಣಿ ನಡುಗಡ್ಡೆಗೆ ತೆರಳಿ ಸ್ಕೂಬಾ ಡೈವಿಂಗ್ ಮಾಡಿ ನಂಭ್ರಮೀಸಿದ್ದರು

ನೇತ್ರಾಣಿ ಅಡ್ವೆಂಚರ್ಸ್ನ ನ  ಮಾಲೀಕರಾದ  ಗಣೇಶ್ ಹರಿಕಂತ್ರ ದಿಗಂತ್ ಗೆ   ಸ್ಕೂಬಾ ಡೈವ್ ಮಾಡಲು ಮಾರ್ಗದರ್ಶನ ಮಾಡಿದರು. ಈ ವೇಳೆ ಕಡಲಾಳದಲ್ಲಿನ ಅಚ್ಚರಿಗಳನ್ನ ಕಣ್ತುಂಬಿಕೊಂಡ ಅವರು  ಹವಳದ ದಿಬ್ಬಗಳು, ಅಪರೂಪದ ಬಣ್ಣ ಬಣ್ಣದ ಮೀನುಗಳನ್ನ ನೋಡಿ ಖುಷಿ ಪಟ್ಟರು.ಮಾಲ್ಡೀವ್ಸ್​​​ನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ಅನುಭವ ಹೊಂದಿದ್ದ ದಿಗಂತ್, ಎಸ್‌ಎಸ್‌ಐ ಸರ್ಟಿಫಿಕೇಟ್​​ ಸಹ  ಹೊಂದಿದ್ದಾರೆ.

ಮೊದಲ ಬಾರಿಗೆ  ಸುಮಾರು 18 ಮೀ. ಆಳದಲ್ಲಿ 28 ನಿಮಿಷಗಳ ಕಾಲ ದಿಗಂತ್ ಡೈವಿಂಗ್ ಮಾಡಿದರು.  ಇದಾದ  2ನೇ ಬಾರಿ ಮತ್ತೆ 18 ಮೀ. ಆಳದಲ್ಲಿ 53 ನಿಮಿಷಗಳ ಕಾಲ ಡೈವಿಂಗ್ ಮಾಡಿದರು. ಹಾಗು ಸ್ಕೂಬಾ ಡೈವಿಂಗ್‌ನ ಬಳಿಕ ನೇತ್ರಾಣಿ ಅಡ್ವೆಂಚರ್ಸ್‌ ಗಳೊಂದಿಗೆ ಮಾತನಾಡಿದ ದಿಗಂತ್, ಸ್ಕೂಬಾ ಡೈವಿಂಗ್ ಮಾಡಿದ ಬಗ್ಗೆ ಖುಷಿಯನ್ನ ಹಂಚಿಕೊಂಡರು. ಅಲ್ಲದೇ ಫೆಬ್ರವರಿಯಲ್ಲಿ ಮತ್ತೆ  ಬರುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಘೋಷಣೆ - ಜ.12ರಿಂದ 'ನೀಟ್ ಪಿಜಿ ಕೌನ್ಸಿಲಿಂಗ್'

Sun Jan 9 , 2022
ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ 2021-22ನೇ ಸಾಲಿನ ನೀಟ್ ಪಿಜಿ ಕೌನ್ಸಿಲಿಂಗ್  ಜನವರಿ 12ರಿಂದ ಆರಂಭಿಸುತ್ತಿರೋದಾಗಿ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಇಂದು ಮಾಹಿತಿ ನೀಡಿದ ಅವರು, 2021-2022ರ ನೀಟ್-ಪಿಜಿ ಕೌನ್ಸಿಲಿಂಗ್ ಅನ್ನು ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು  ತಿಳಿಸಿದರು ಅಖಿಲ ಭಾರತ ಕೋಟಾ ಸ್ಥಾನಗಳಲ್ಲಿ ಅಸ್ತಿತ್ವದಲ್ಲಿರುವ ಶೇಕಡಾ 27 ಒಬಿಸಿ ಮತ್ತು ಶೇಕಡಾ 10 ಇಡಬ್ಲ್ಯುಎಸ್ ಮೀಸಲಾತಿಗಳ ಆಧಾರದ ಮೇಲೆ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್ […]

Advertisement

Wordpress Social Share Plugin powered by Ultimatelysocial