́ಕಾಸ್ಟಿಂಗ್‌ ಕೌಚ್‌ ʼ ನಿಂದ ಎದುರಿಸಿದ ಸಮಸ್ಯೆಗಳನ್ನು ಹೇಳಿದ ದಿವ್ಯಾಂಕ ತಿವಾರಿ.

ಮುಂಬೈ : ಹಿಂದಿ ಕಿರುತೆರೆ ನಟಿ ದಿವ್ಯಾಂಕ  ತಿಪಾಠಿ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಕಾಸ್ಟಿಂಗ್ ಕೌಚ್‍ನಿಂದ ತಾವು ಎದುರಿಸಿದ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಖತ್ರೋನ್ ಕೆ ಕಿಲಾಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ದಿವ್ಯಾಂಕಾ ಹಿಂದಿ ಕಿರುತೆರೆಯ ಜನಪ್ರಿಯ ನಟಿಯರಲ್ಲಿ ಒಬ್ಬರು.ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತಮ್ಮ ವೃತ್ತಿ ಜೀವನ ಆರಂಭಿಸಿದಾಗ ಕೆಲವು ನಿರ್ದೇಶಕರು ತಮ್ಮ ಜೊತೆ ಸಮಯ ಕಳೆಯುವಂತೆ ಕೇಳಿರುವುದಾಗಿ ಬಹಿರಂಗಪಡಿಸಿದ್ದಾರೆ.ಇಂತಹವರು ಕಾಸ್ಟಿಂಗ್ ಕೌಚ್ ಸರ್ವೇಸಾಮಾನ್ಯ ಹಾಗೂ ಇಂಡಸ್ಟ್ರಿಯಲ್ಲಿ ಎಲ್ಲರೂ ಅದನ್ನು ಮಾಡುತ್ತಾರೆ ಎಂದು ನಿಮ್ಮನ್ನು ನಂಬಿಸ ಲು ಪ್ರಯತ್ನಿಸುತ್ತಾರೆ. ಕೆಲಸ ಮುಗಿದ ನಂತರ ಮತ್ತೆ ನಿಮಗೆ ಸಮಸ್ಯೆಗಳು ಆರಂಭವಾಗುತ್ತದೆ. ನನ್ನ ಬಳಿ ಹಣವೇ ಇಲ್ಲದ ಕಾಲವೊಂ ದಿತ್ತು. ಆದರೂ ನನ್ನ ಬಿಲ್‍ಗಳು, ಇಎಂಐಗಳನ್ನು ಇತ್ಯಾದಿಗಳನ್ನು ಪಾವತಿಸಬೇಕಾಗಿತ್ತು. ನನಗೆ ಸಾಕಷ್ಟು ಒತ್ತಡವಿತ್ತು. ಆಗ ನನ ಗೊಂದು ಬಿಗ್ ಆಫರ್ ಬಂತು.ನೀವು ಈ ನಿರ್ದೇಶಕರ ಜೊತೆ ಇದ್ದರೆ, ನಿಮಗೆ ದೊಡ್ಡ ಬ್ರೇಕ್ ಸಿಗುತ್ತದೆ ಎಂದರು. ಆದರೆ ನಾನು ಯಾಕೆ ಇರಬೇಕು? ಎಂದು ಪ್ರಶ್ನಿಸಿ ಕೊಂಡೆ. ಇದರಿಂದ ನನ್ನ ಜೀವನ ಆಗುತ್ತದೆ ಎಂಬುವುದು ಸುಳ್ಳು, ಹಾಗೆ ನಾನು ಮಾಡಿದರೆ ನನ್ನ ಜೀವನವನ್ನು ಮಾರಾಟ ಮಾಡಿಕೊಂ ಡಂತೆ. ನಾನು ಯಾವಾಗಲೂ ತನ್ನ ಪ್ರತಿಭೆಯನ್ನು ನಂಬುತ್ತೇನೆ ಮತ್ತು ನನ್ನ ಸಾಮರ್ಥ್ಯದ ಆಧಾರದ ಮೇಲೆ ಹೊಸ ಪ್ರಾಜೆಕ್ಟ್‌ಗಳನ್ನು ಮಾಡುತ್ತೇನೆ ಹೊರತು ನಿರ್ದೇಶಕನೊಂದಿಗೆ ಅಲ್ಲ ಎಂದು ಅರಿತುಕೊಂಡಿರುವುದಾಗಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ವಿಜಯ್‌ ರಾಘವೇಂದ್ರ:ಹೇಳಿದ ಮಾತು ತಾಳ್ಮೆ ವಹಿಸೋಣ,ಒಳ್ಳೆಯ ದಿನ ಮುಂದಿದೆ.

Mon Jan 31 , 2022
ಚಿತ್ರಮಂದಿರಗಳ ಮೇಲೆ ಸರ್ಕಾರ ಹೇರಿರುವ 50% ಆಕ್ಯುಪೆನ್ಸಿ ನಿಯಮ ಹಿಂದೆಗೆದುಕೊಳ್ಳದೇ ಇರುವ ಬಗ್ಗೆ ಚಿತ್ರರಂಗದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ವಿಜಯ್ ರಾಘವೇಂದ್ರ ಕಾದು ನೋಡುವ ತಂತ್ರ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ರಾಘವೇಂದ್ರ, ”ಸರ್ಕಾರ ಏನೇ ಮಾಡಿದರೂ ಅದರ ಹಿಂದೊಂದು ಉದ್ದೇಶ, ಅರ್ಥ ಇರುತ್ತದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರದ ಮೇಲೆ ಹೇರಲಾಗಿರುವ ನಿಯಮ ಸಡಿಲಿಸಬಹುದು ತಾಳ್ಮೆಯಿಂದ ಇರೋಣ. ಚಿತ್ರರಂಗಕ್ಕೂ ಒಳ್ಳೆಯದಾಗುತ್ತದೆ” ಎಂದಿದ್ದಾರೆ.”ಈ […]

Advertisement

Wordpress Social Share Plugin powered by Ultimatelysocial