ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮಾಗಡಿ ತಾಲ್ಲೂಕು ಸೋಲೂರಿನ ಪಾಲನಹಳ್ಳಿ ಮಠಕ್ಕೆ ಭಾನುವಾರ ಭೇಟಿ ನೀಡಿ, ಶ್ರೀ ಸಿದ್ದರಾಜು ಸ್ವಾಮೀಜಿ ಸೇರಿದಂತೆ ಮಾದಿಗ ಸಮಾಜದ ನಾನಾ ಸ್ವಾಮೀಜಿಗಳ ಜತೆ ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದರು.
ಇದೇ ಸಂದರ್ಭದಲ್ಲಿ ಆಷಾಢ ಮಾಸದ ಚೌಡೇಶ್ವರಿ ದೇವಿಯ ಧೂಳು ಉತ್ಸವದಲ್ಲಿ ಭಾಗವಹಿಸಿ, ಶನೇಶ್ವರ ದೇವರ ದರ್ಶನ ಪಡೆದರು. ಮಾಜಿ ಸಚಿವರಾದ ಎಚ್ ಎಂ ರೇವಣ್ಣ, ಎಚ್ ಆಂಜನೇಯ ಜತೆಗಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: