ಬಂಡೀಪುರ ಅಭಯಾರಣ್ಯದಲ್ಲಿ ಸೋಂಕಿನಿಂದ ಹೆಣ್ಣಾನೆ ಸಾವು

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಲೇಸ್ಮೇನಿಯಾ ಸೋಂಕಿನಿಂದ ಸುಮಾರು 35 ವರ್ಷದ ಹೆಣ್ಣಾನೆ ಸಾವನ್ನಪ್ಪಿರುವ ಘಟನೆ ನಡೆದಿದ್ದು,ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಗೋಪಾಲಸ್ವಾಮಿಬೆಟ್ಟ  ವಲಯದ ಗೋಪಾಲಪುರ ಗಸ್ತಿನ ಮಾದಪ್ಪನ‌ ಪ್ರದೇಶದಲ್ಲಿ ಹೆಣ್ಣಾನೆಯು ಹೊಟ್ಟೆಭಾಗದಲ್ಲಿನ ಲೇಸ್ಮೇನಿಯಾ ಸೋಂಕಿನಿಂದ ತೊಂದರೆಗೆ ಒಳಗಾಗಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎಸಿಎಫ್  ಪರಮೇಶ,ಆರ್.ಎಫ.ಒ. ನವೀನ್ ಕುಮಾರ್, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಸಿಬ್ಬಂಧಿಗಳು ಭೇಟಿ ನೀಡಿ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಿದರು,ನಂತರ ಮೃತ ಹೆಣ್ಣಾನೆಯನ್ನು ಸುಡಲಾಗಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಹತ್ಯೆ ಸಂಚು ಬಯಲು

Tue Jan 11 , 2022
ಅಮೆರಿಕದ ಮಾಜಿ ಅಧ್ಯಕ್ಷ ರಾಗಿರುವ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ 72 ವರ್ಷದ ಥಾಮಸ್ ವೆಲ್ನಿಕ್ ಎಂಬ ವ್ಯಕ್ತಿಯನ್ನು ‌ ಬಂಧಿಸಿದ್ದಾರೆ. ಟ್ರಂಪ್‌ 2020 ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಅಧಿಕಾರ ತೊರೆಯಲು ನಿರಾಕರಿಸಿದ್ದಾಗ  ಟ್ರಂಪ್ ಅವರನ್ನು ಅಪಹರಿಸಿ ಹತ್ಯೆ ನಡೆಸುವುದಾಗಿ ಆತ ಬೆದರಿಕೆ ಒಡ್ಡಿದ್ದ. ಕಳೆದ ವರ್ಷ ಜನವರಿಯಲ್ಲಿ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಸೀಕ್ರೆಟ್ ಸರ್ವೀಸ್‌ನ ಕಛೇರಿಗೆ ಎರಡು ವಾಯ್ಸ್‌ ಮೇಲ್ ಸಂದೇಶ ಕಳುಹಿಸಿದ್ದ […]

Advertisement

Wordpress Social Share Plugin powered by Ultimatelysocial