40 ಸೀಟ್ ಗೆದ್ದೋರಿಗೆ ಆಸೆ ಇರಬೇಕಾದರೇ 80 ಸೀಟ್ ಗೆದ್ದೋರಿಗೆ ಇನ್ನಷ್ಟು ಆಸೆ ಇರಬೇಕು: ಎಚ್ಡಿಕೆಗೆ ಡಿಕೆಶಿ ಗುದ್ದು

ಚಾಮರಾಜನಗರ: 40 ಸೀಟ್ ಗೆದ್ದೋರಿಗೆ ಅಸ್ಟ್ ಆಸೆ ಇರಬೇಕಾದರೇ 80 ಸೀಟ್ ಗೆದ್ದವರಿಗೆ ಇನ್ಮೆಷ್ಟು ಆಸೆ ಇರಬೇಕೆಂದು ಮಾಜಿ ಸಿಎಂ ಎಚ್ಡಿಕೆಗೆ ಡಿಕೆಶಿ ತಿರುಗೇಟು ಕೊಟ್ಟರು.

ಗುಂಡ್ಲುಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಜೆಡಿಎಸ್ ಗೆ ಅಧಿಕಾರ, ಒಕ್ಕಲಿಗ ಸಮುದಾಯ ದಳದೊಟ್ಟಿಗೇ ಇದೇ ಕಾಂಗ್ರೆಸ್ ಗೆ ಅಧಿಕಾರವಿಲ್ಲ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ “40 ಸೀಟ್ ಗೆದ್ದೋರಿಗೆ ಅಷ್ಟು ಆಸೆ ಇದೆ,‌80 ಸೀಟ್ ಗೆದ್ದೋರಿಗೆ ಇನ್ನೆಷ್ಟು ಆಸೆ ಇರಬೇಕು, ಅವರಿಗೆ ಒಳ್ಳೆಯದಾಗಲಿ ಎಂದು ತಿವಿದರು.

ಇನ್ನು, ಸಿಎಂ ಆಗುವ ಆಸೆ ಇತ್ತೀಚೆಗೆ ಉತ್ಕಟವಾಗಿದೆಯಲ್ಲಾ ಎಂಬ ಪ್ರಶ್ನೆಗೆ ಗರಂ ಆದ ಡಿಕೆಶಿ, ಕಾಂಗ್ರೆಸ್ ಇತಿಹಾಸ ಗೊತ್ತಾ, ನಾನು ಎಷ್ಟು ಸೀನಿಯರ್ ಇದೀನಿ ಗೊತ್ತಾ, ನಾನು ಯಾರಾ ವಿರುದ್ಧ ಗೆದ್ದಿದ್ದೀನಿ- ಸೋತಿದ್ದೀನಿ ಗೊತ್ತಾ ನಾನು ಸೀನಿಯರ್ ಇದೀನಿ, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಗಿದ್ದೀನಿ, ನನ್ನ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ತರಬೇಕೆಂಬುದು ನನ್ನ ಅಜೆಂಡಾ ಎನ್ನುವ ಮೂಲಕ ಸಿಎಂ ಆಗುವ ಆಸೆ ಪರೋಕ್ಷವಾಗಿ ಹೊರಹಾಕಿದರು‌‌‌.

ಭ್ರಷ್ಟಾಚಾರದ ರಾಜಧಾನಿ: ಕರ್ನಾಟಕ ದೇಶದ ಭ್ರಷ್ಟಾಚಾರದ ರಾಜಧಾನಿಯಾಗಿದೆ, ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. 40% ಹೊರತಾಗಿಯೂ ನೀರಾವರಿ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದ್ದು, ರಾಜ್ಯದ ಗೌರವವನ್ನು ಉಳಿಸುವ ಕಾರ್ಯ ಆಗಬೇಕಿದೆ, ಜನರಿಗೆ ಈ ವಿಚಾರ ಮುಟ್ಟಿಸುತ್ತೇವೆ ಎಂದರು.

ಇನ್ನು,ಸಿದ್ದರಾಮಯ್ಯ ಸಿಎಂ- ಡಿಕೆಶಿ ಸಿಎಂ ಎಂಬ ಘೋಷಣೆಗಳಿಂದ ಪಕ್ಷಕ್ಕೆ ಹೊಡೆತವಲ್ಲವೇ ಎಂಬುದಕ್ಕೆ ಉತ್ತರಿಸಿ, ಅವರವರ ಆಸೆ ಅವರು ಹೇಳುತ್ತಾರೆ, ನಾನು ಎಷ್ಟು ಅಂತಾ ಬೈಯ್ಯಲಿ, ಎಷ್ಟು ಅಂತಾ ಬುದ್ಧಿವಾದ ಹೇಳಲಿ,ಅಭಿಮಾನಿಗಳಿಗೆ ಒಂದೊಂದು ಆಸೆ ಇರತ್ತೆ, ಹೇಳ್ಕೊತ್ತಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿ ಮೇಲೆ ಅಸಮಾಧಾನ

Wed Jul 20 , 2022
ಬೀದಿ ಬದಿ ವ್ಯಾಪಾರಿಗಳನ್ನು ಮುಖ್ಯ ರಸ್ತೆಯಿಂದ ತೆರವು ವಿಚಾರ ಬೀದಿ ಬದಿ ವ್ಯಾಪಾರಿಗಳಿಂದ ಬಿಬಿಎಂಪಿ ಮೇಲೆ ಅಸಮಾಧಾನ ಈಗಾಗಲೇ ನಾನಾ ಸಮಸ್ಯೆಗಳಿಂದ ಬೀದಿ ಬದಿ ವ್ಯಾಪಾರಿಗಳು ಸಂಷ್ಟದಲ್ಲಿ ಇದ್ದಾರೆ ನಗರದಲ್ಲಿ ಸುಮಾರು 70 ಸಾವಿರ ಬೀದಿ‌ಬದಿ ವ್ಯಾಪಾರಿಗಳು ಇದ್ದಾರೆ ಹೀಗಾಗಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಅವಕಾಶ ಮಾಡಿಕೊಡಬೇಕು ಬಿಬಿಎಂಪಿ ತನ್ನ ಎಲ್ಲಾ ವಲಯಗಳ ವಾರ್ಡ್ ಮಟ್ಟದಲ್ಲಿ ವೆಂಡಿಂಗ್ ಝೋನ್ ನಿರ್ಮಾಣ ಮಾಡಬೇಕು ಪಾಲಿಕೆ‌ ಗುರುತಿನ ಚೀಟಿ ನೀಡಿ ಅಲ್ಲೇ ವ್ಯಾಪಾರ […]

Advertisement

Wordpress Social Share Plugin powered by Ultimatelysocial