ತಮ್ಮ ಆಪ್ತರ ಪಟ್ಟಿಯಲ್ಲಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದ್ದಾರಾ ?

 

ಬೆಂಗಳೂರು: ತಮ್ಮ ಆಪ್ತರ ಪಟ್ಟಿಯಲ್ಲಿ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಇದ್ದಾರಾ ? ಎಂಬ ಮಾಧ್ಯಮದ ಪ್ರಶ್ನೆಗೆ ಕೊನೆಗೂ ಉತ್ತರ ನೀಡದೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದರು.

ರಾಜ್ಯ ಸರಕಾರದ ವಿರುದ್ಧ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯನವರಿಗೆ ಈ ” ಆಪ್ತ” ಪ್ರಶ್ನೆ ಎದುರಾಯಿತು.

ನಿಮ್ಮ ಆಪ್ತ ಶಾಸಕ‌ ಜಮೀರ್ ಅಹ್ಮದ್ ವಿರುದ್ಧ ಎಸಿಬಿ ದಾಳಿ ನಡೆಸಿ ಪಿಎಸ್ ಐ ಹಗರಣ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆಯಾ? ಎಂಬ ಪ್ರಶ್ನೆಗೆ ಎಲ್ಲರೂ ನನ್ನ ಆಪ್ತರು. ಎಂದು ವೇದಿಕೆಯಲ್ಲಿ ಇದ್ದ ಎಲ್ಲರ ಹೆಸರನ್ನು ಹೇಳಿದರು. ಆದರೆ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಹೇಳಲಿಲ್ಲ.

ಇದಕ್ಕೆ ಸುದ್ದಿಗಾರರು ಶಿವಕುಮಾರ್ ನಿಮ್ಮ ಆಪ್ತರಲ್ಲವೇ? ಎಂದು ಎಷ್ಟು ಬಾರಿ ಹೇಳಿದರೂ ಉತ್ತರಿಸಲಿಲ್ಲ. ನೀವು ನನ್ನ ಆಪ್ತರು ಎಂದು ಪತ್ರಕರ್ತರಿಗೆ ಹೇಳಿದರೇ ವಿನಾ ಶಿವಕುಮಾರ್ ತಮ್ಮ ಆಪ್ತ ಎನ್ನಲಿಲ್ಲ. ಈ ಘಟನೆ ನಡೆಯುವಾಗ ಡಿ.ಕೆ.ಶಿವಕುಮಾರ್ ನಗುತ್ತಾ ಕುಳಿತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ !

Tue Jul 5 , 2022
ಹುಬ್ಬಳ್ಳಿ: ಇಂದು ನಗರದಲ್ಲಿನ ಪ್ರೆಸಿಡೆಂಟ್ ಹೋಟೆಲ್ ಬಳಿಯಲ್ಲಿ ಇಂದು ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯನ್ನು  ಚಾಕುವಿನಿಂದ ಇರಿದು ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಂದ್ರಶೇಖರ್ ಗುರೂಜಿಯನ್ನು ಅವರ ಆಪ್ತನಾಗಿದ್ದಂತ ಮಹಾಂತೇಶ್ ಎಂಬಾತನೇ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆಯಾಗುತ್ತಿದ್ದಂತೇ, ಅತ್ತ ಅವರ ಆಪ್ತ ಮಹಾಂತೇಶ್ ಶಿರೋಳ್ ಕೂಡ ನಾಪತ್ತೆಯಾಗಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿಯೇ ಹುಬ್ಬಳ್ಳಿಯ […]

Advertisement

Wordpress Social Share Plugin powered by Ultimatelysocial