ಕೊಪ್ಪಳದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿ ಕಚೇರಿಯ ಮೇಲೆ ಇಂದು ಲೋಕಾಯುಕ್ತರು ದಾಳಿ ಮಾಡಿದ್ದು, ಇಲಾಖೆಯ ಇಇ, ತುಂಡು ಗುತ್ತಿಗೆದಾರನ ಬಳಿ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹೌದು! ಕೊಪ್ಪಳದ ತರಕಾರಿ ಮಾರುಕಟ್ಟೆ ಬಳಿ ಇರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿ ಮೇಲೆ ಇಂದು ಸಂಜೆ ದಾಳಿ ಮಾಡಿದ್ದಾರೆ. ಇದರಿಂದ ಇಡಿ ಕಚೇರಿ ಸಿಬ್ಬಂದಿಯ ಮುಖದಲ್ಲಿ ಸಂತೋಷ ಮನೆ ಮಾಡಿತ್ತು. ಕಾರಣ ಈ ಇಲಾಖೆಯ ಇಇ ಸೈಯದ್ ಫಸಲ್ ಮಹುಮುದ್ ಹಣಕ್ಕಾಗಿ ತುಂಡು ಗುತ್ತಿಗೆದಾರರಿಗೆ ಪೀಡಿಸುತ್ತಿದ್ದನಂತೆ. ಮಾತ್ನಾಡಿದ್ರೆ ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ, ಹಾಗಾಗಿ ಬೇಸತ್ತ ಕೊಪ್ಪಳದ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ತುಂಡು ಗುತ್ತಿಗೆದಾರ ಮುತ್ತಣ್ಣ ಮಂಗಳೂರು ಲೋಕಾಯುಕ್ತರಿಗೆ ದೂರು ನೀಡಿದ್ದರಂತೆ. ರಸ್ತೆ, ಕಂಪೌಡ್ ನಿರ್ಮಾಣ ಕಾಮಗಾರಿಯ 9.50 ಲಕ್ಷ ರೂ ಬಿಲ್ ಗೆ ಸಂಬಂಧಿಸಿದಂತೆ 25 ಸಾವಿರ ಲಂಚ ಬೇಡಿಕೆಯನ್ನು ಸೈಯದ್ ಫಸಲ್ ಮಹುಮುದ್, ಮುತ್ತಣ್ಣನ ಬಳಿ ಬೇಡಿಕೆಯಿಟ್ಟದ್ದರಂತೆ. ಈ ಹಿನ್ನೆಲೆ ಮುಂಗಡವಾಗಿ 15 ಸಾವಿರ ಹಣವನ್ನು ಮುತ್ತಣ್ಣ ಬಳಿ ಇಇ ಸೈಯದ್ ಫಸಲ್ ಸ್ವೀಕಾರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬೆಲೆಗೆ ಬಿದ್ದಿದ್ದಾನೆ. ಲೋಕಾಯುಕ್ತರು ಹಣವನ್ನು ಜಪ್ತಿ ಮಾಡಿದ್ದು, ಕಚೇರಿಯಲ್ಲಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ್ದಾರೆ. ಒಟ್ಟಾರೆ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯಲ್ಲಿ ಇಇ ಸೈಯದ್ ಫಸಲ್ ಹಣಕ್ಕಾಗಿ ಪೀಡಿಸುವ ಒಬ್ಬ ಭ್ರಷ್ಟ ಅಧಿಕಾರಿ ಎನ್ನುವುದು ದೂರುದಾರ ಮುತ್ತಣ್ಣ ಆರೋಪಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada