ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿ ಮೇಲೆ ಇಂದು ಸಂಜೆ ದಾಳಿ ಮಾಡಿದ್ದಾರೆ.

 

ಕೊಪ್ಪಳದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿ ಕಚೇರಿಯ ಮೇಲೆ ಇಂದು ಲೋಕಾಯುಕ್ತರು ದಾಳಿ ಮಾಡಿದ್ದು, ಇಲಾಖೆಯ ಇಇ, ತುಂಡು ಗುತ್ತಿಗೆದಾರನ ಬಳಿ ಹಣ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಹೌದು! ಕೊಪ್ಪಳದ ತರಕಾರಿ ಮಾರುಕಟ್ಟೆ ಬಳಿ ಇರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಕಚೇರಿ ಮೇಲೆ ಇಂದು ಸಂಜೆ ದಾಳಿ ಮಾಡಿದ್ದಾರೆ. ಇದರಿಂದ ಇಡಿ ಕಚೇರಿ ಸಿಬ್ಬಂದಿಯ ಮುಖದಲ್ಲಿ ಸಂತೋಷ ಮನೆ ಮಾಡಿತ್ತು. ಕಾರಣ ಈ ಇಲಾಖೆಯ ಇಇ ಸೈಯದ್ ಫಸಲ್ ಮಹುಮುದ್ ಹಣಕ್ಕಾಗಿ ತುಂಡು ಗುತ್ತಿಗೆದಾರರಿಗೆ ಪೀಡಿಸುತ್ತಿದ್ದನಂತೆ. ಮಾತ್ನಾಡಿದ್ರೆ ಹಣಕ್ಕೆ ಬೇಡಿಕೆ ಇಡುತ್ತಿದ್ದನಂತೆ, ಹಾಗಾಗಿ ಬೇಸತ್ತ ಕೊಪ್ಪಳದ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ತುಂಡು ಗುತ್ತಿಗೆದಾರ ಮುತ್ತಣ್ಣ ಮಂಗಳೂರು ಲೋಕಾಯುಕ್ತರಿಗೆ ದೂರು ನೀಡಿದ್ದರಂತೆ. ರಸ್ತೆ, ಕಂಪೌಡ್ ನಿರ್ಮಾಣ ಕಾಮಗಾರಿಯ 9.50 ಲಕ್ಷ ರೂ ಬಿಲ್ ಗೆ ಸಂಬಂಧಿಸಿದಂತೆ 25 ಸಾವಿರ ಲಂಚ ಬೇಡಿಕೆಯನ್ನು ಸೈಯದ್ ಫಸಲ್ ಮಹುಮುದ್, ಮುತ್ತಣ್ಣನ ಬಳಿ ಬೇಡಿಕೆಯಿಟ್ಟದ್ದರಂತೆ. ಈ ಹಿನ್ನೆಲೆ ಮುಂಗಡವಾಗಿ 15 ಸಾವಿರ ಹಣವನ್ನು ಮುತ್ತಣ್ಣ ಬಳಿ ಇಇ ಸೈಯದ್ ಫಸಲ್ ಸ್ವೀಕಾರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬೆಲೆಗೆ ಬಿದ್ದಿದ್ದಾನೆ. ಲೋಕಾಯುಕ್ತರು ಹಣವನ್ನು ಜಪ್ತಿ‌ ಮಾಡಿದ್ದು, ಕಚೇರಿಯಲ್ಲಿ ಪರಿಶೀಲನೆ ನಡೆಸಿ ವಿಚಾರಣೆ ನಡೆಸಿದ್ದಾರೆ. ಒಟ್ಟಾರೆ ಪಂಚಾಯತ್ ರಾಜ್ ಇಂಜಿನಿಯರ್ ಇಲಾಖೆಯಲ್ಲಿ ಇಇ ಸೈಯದ್ ಫಸಲ್ ಹಣಕ್ಕಾಗಿ ಪೀಡಿಸುವ ಒಬ್ಬ ಭ್ರಷ್ಟ ಅಧಿಕಾರಿ ಎನ್ನುವುದು ದೂರುದಾರ ಮುತ್ತಣ್ಣ ಆರೋಪಿಸಿದ್ದಾರೆ‌.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

7ನೇ ವೇತನ ಆಯೋಗ ಜಾರಿಗಾಗಿ ಸಿಡಿದೆದ್ದ 'ರಾಜ್ಯ ಸರ್ಕಾರಿ ನೌಕರ'ರು:

Tue Feb 28 , 2023
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ 7ನೇ ವೇತನ ಆಯೋಗದ ವರದಿ ಜಾರಿಗೆ ಹಾಗೂ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ, ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನಾಳೆ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತಿರುವ ನೌಕರರು, ಎಲ್ಲಾ ಸರ್ಕಾರಿ ಕಚೇರಿಯನ್ನು ಬಂದ್ ಮಾಡಿ ಅನಿರ್ಧಿಷ್ಟಾವಧಿಯ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ, ನಾಳೆ ಸಾಮೂಹಿಕವಾಗಿ ಸರ್ಕಾರಿ ನೌಕರರು […]

Advertisement

Wordpress Social Share Plugin powered by Ultimatelysocial