ಪಕ್ಷ ಸಂಘಟನೆಗೆ ಗೂಂಡಾ ಶಿವಕುಮಾರ್ ಬರ್ತಾನಾ, ಅಥವಾ ಜಾತಿವಾದಿ ಸಿದ್ದರಾಮಯ್ಯ ಬರ್ತಾರಾ ಎಂದು ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ:ಪಕ್ಷ ಸಂಘಟನೆಗೆ ಗೂಂಡಾ ಶಿವಕುಮಾರ್ ಬರ್ತಾನಾ, ಅಥವಾ ಜಾತಿವಾದಿ ಸಿದ್ದರಾಮಯ್ಯ ಬರ್ತಾರಾ ಎಂದು ಶಿವಮೊಗ್ಗದಲ್ಲಿ ಸಚಿವ ಕೆ ಎಸ್ ಈಶ್ವರಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶ ಮತ್ತು ರಾಜ್ಯದಲ್ಲಿ ಪಕ್ಷ ಸಂಘಟನೆ ವಿಚಾರ ಬಂದಾಗ ಬಿಜೆಪಿ ಬಿಟ್ಟರೆ ಬೇರೆ ಪಕ್ಷಗಳಿಂದ ಒಗ್ಗಟ್ಟು ತೋರಿಸಲು ಸಾಧ್ಯವೇ, ಕಾಂಗ್ರೆಸ್ ನವರಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೇ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ.ಅವರವರ ಬಣದವರು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯ ಮತ್ತು ದೇಶದ ರಾಜಕಾರಣದಲ್ಲಿ ಬಿಜೆಪಿ ಬಿಟ್ಟರೆ ಬೇರೆ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.ದೆಹಲಿಯ ಕೆಂಪುಕೋಟೆಯಲ್ಲಿ ಮುಂದೊಂದು ದಿನ ಕೇಸರಿ ಧ್ವಜ ಹಾರಾಡಬಹುದು ಎಂದು ಹೇಳಿ ಕಾಂಗ್ರೆಸ್ ನವರ ಕೆಂಗಣ್ಣಿಗೆ ಗುರಿಯಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ನಾಯಕರು ಕಳೆದೆರಡು ದಿನಗಳಿಂದ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುರುನ್ ಇಂಡಿಯಾ ವೆಲ್ತ್ ವರದಿ: ಭಾರತದಲ್ಲಿ ಡಾಲರ್-ಮಿಲಿಯನೇರ್ ಕುಟುಂಬಗಳು 4.5 ಲಕ್ಷಕ್ಕೆ ಏರಿಕೆ

Sat Feb 19 , 2022
  ಹೊಸದಿಲ್ಲಿ: ಇತ್ತೀಚಿನ ಹುರುನ್ ಇಂಡಿಯಾ ವೆಲ್ತ್ ರಿಪೋರ್ಟ್ 2021 ರ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದಲ್ಲಿ ಡಾಲರ್-ಮಿಲಿಯನೇರ್ ಕುಟುಂಬಗಳ ಸಂಖ್ಯೆಯು 11% ರಷ್ಟು 4,58,000 ಕುಟುಂಬಗಳಿಗೆ ಹೆಚ್ಚಾಗಿದೆ. ಡಾಲರ್-ಮಿಲಿಯನೇರ್ ಕುಟುಂಬವು ಕನಿಷ್ಠ ನಿವ್ವಳ ಮೌಲ್ಯವನ್ನು ಹೊಂದಿದೆ. INR 7 ಕೋಟಿ. ವರದಿಯ ಪ್ರಕಾರ, ಭಾರತೀಯ ಡಾಲರ್-ಮಿಲಿಯನೇರ್ ಕುಟುಂಬಗಳ ಸಂಖ್ಯೆಯು ಮುಂದಿನ ಐದು ವರ್ಷಗಳಲ್ಲಿ 30% ರಷ್ಟು ಹೆಚ್ಚಾಗುತ್ತದೆ ಮತ್ತು 2026 ರ ವೇಳೆಗೆ 6,00,000 ಕುಟುಂಬಗಳನ್ನು ತಲುಪುತ್ತದೆ […]

Advertisement

Wordpress Social Share Plugin powered by Ultimatelysocial