ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸುಂಕೇಶ್ವರ ಗ್ರಾಮದ ಹುತಾತ್ಮ ಯೋಧ ರಾಮು ನಾಯಕ ಅವರ ಕುಟುಂಬಕ್ಕೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ವೈಯಕ್ತಿಕ ಪರಿಹಾರ ಧನ ನೀಡುವ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಮೃತ ಯೋಧ ಪತ್ನಿ ಗೀತಾ ರಾಮಲಿಂಗ ನಾಯಕ ಮತ್ತು ಮಗ ಧನುಷ್ ಅವರಿಗೆ ಸಾಂತ್ವನ ತಿಳಿಸಿ ದುಃಖವನ್ನು ಭರಿಸುವ ಶಕ್ತಿ ಆದೇವರು ನಿಮ್ಮ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ. ಸರ್ಕಾರದ ವತಿಯಿಂದ ನೀಡಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲೇ 5 ಎಕರೆ ಜಮೀನು ಮತ್ತು ಇತರ ಸೌಲಭ್ಯಗಳನ್ನು ಕುಟುಂಬಸ್ಥರಿಗೆ ಒದಗಿಸಿಕೊಡುವ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಶಾಸಕ ಬಸನಗೌಡ ದದ್ದಲ್, ವೈಯಕ್ತಿಕ ಒಂದು ಲಕ್ಷ ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿ ಸಾಂತ್ವಾನ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada