ಸಿನಿಮಾ ನಟ ನರೇಶ್ ತಮ್ಮನ್ನು ಟ್ರೋಲ್ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪದೇ ಪದೇ ಟ್ರೋಲ್ ಮಾಡಿ ತಮ್ಮ ವಿರುದ್ಧ ಕೆಟ್ಟ ಪ್ರಚಾರ ಮಾಡುತ್ತಿರುವ ಕೆಲ ಮಾಧ್ಯಮ ಸಂಸ್ಥೆಗಳ ವಿರುದ್ಧ ಸಿಸಿಎಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಕ್ಕೂ ಮುನ್ನ ತಮ್ಮ ಜೀವನಕ್ಕೆ ಹೊಸದಾಗಿ ಬಂದ ಪವಿತ್ರ ಲೋಕೇಶ್ ಸಂಬಂಧಕ್ಕೆ ಅಡ್ಡಿಪಡಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ನರೇಶ್ ಮತ್ತೊಮ್ಮೆ ಹೈದರಾಬಾದ್ ಸೈಬರ್ ಕ್ರೈಂ ಪಿಎಸ್ ಗೆ ತೆರಳಿ ತಮ್ಮ ದೂರಿನ ಬಗ್ಗೆ ಚರ್ಚಿಸಿದ್ದಾರೆ.
ಕೆಲವು ಮಾಧ್ಯಮ ಸಂಸ್ಥೆಗಳು, ಊರು ಹೆಸರಿಲ್ಲದ ಚಾನೆಲ್ಗಳು ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಟ್ಟುಕೊಂಡು ತಮ್ಮ ಹಾಗೂ ಪವಿತ್ರಾ ಲೋಕೇಶ್ರನ್ನು ಮನಸೋ ಇಚ್ಛೆ ಟ್ರೋಲ್ ಮಾಡುತ್ತಿವೆ ಎಂದು ನರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಮಾನಹಾನಿ ಮಾಡುತ್ತಿರುವ ಕೆಲವು ಟ್ರೋಲರ್ಗಳು ಮತ್ತು ಮೆಮರ್ಗಳು ಯಾರೆಂದು ಗುರುತಿಸಿ ಪೊಲೀಸರಿಗೆ ದೃಢವಾದ ಸಾಕ್ಷ್ಯವನ್ನು ನೀಡಿದ್ದಾರೆ ಎಂದು ಹೇಳಿದರು. ಮುಂದಿನ ಕ್ರಮಗಳ ಬಗ್ಗೆಯೂ ನರೇಶ್ ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ.
ವೈಯಕ್ತಿಕ ವಿಷಯಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದು, ಅದರ ಮಧ್ಯೆ ಮೂಗುತೂರಿಸಿ ಅಡ್ಡಿಪಡಿಸಿ ಹಣ ಗಳಿಸುತ್ತಿದ್ದಾರೆ ಎಂದು ನರೇಶ್ ಹೇಳಿದರು. ಸಾಮಾಜಿಕ ಕಾರ್ಯಕರ್ತ, ಚಲನಚಿತ್ರ ವಿಮರ್ಶಕರ ಮುಖವಾಡ ಧರಿಸಿ ತಮ್ಮ ಸಂಬಂಧದ ಬಗ್ಗೆ ಅಗ್ಗವಾಗಿ ಮಾತನಾಡುವುದು ಸೂಕ್ತವಲ್ಲ ಎಂದು ಅವರು ಹೇಳಿದರು.
ಸಿಸಿಎಸ್ ಪೊಲೀಸರೊಂದಿಗೆ ಮಾತನಾಡಿದ ನರೇಶ್, ತನಗೆ ಅಗೌರವ ತೋರುವ ಕೆಲವು ಮಾಧ್ಯಮಗಳನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ನರೇಶ್ ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ಕಮೆಂಟ್ ಮಾಡಿದ್ದು, ಅವರ ವೈಯುಕ್ತಿಕ ಬದುಕನ್ನು ಕದ್ದು ನೋಡುವುದು ಪತ್ರಿಕೋದ್ಯಮ ಅಲ್ಲ. ಪ್ರಶ್ನೆ ಕೇಳುವ ಹಕ್ಕು ಮಾತ್ರ ಅವರಿಗಿದೆ ಎಂದಿದ್ದಾರೆ.
ನಟ ನರೇಶ್ ಅವರ ಬಹುಪತ್ನಿತ್ವದ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇದೆ. ಈ ವಿಚಾರವಾಗಿ ನೆಟ್ಟಿಗರು ಮತ್ತು ಟ್ರೋಲರ್ಗಳು ಫೋಟೋಗಳನ್ನು ಟ್ಯಾಗ್ ಮಾಡುವ ಮೂಲಕ ಮತ್ತು ಕಮೆಂಟ್ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ತಮಗೆ ಬೆದರಿಕೆ ಕರೆಗಳು ಬರುತ್ತಿದ್ದು, ಜೀವಕ್ಕೆ ಅಪಾಯವಿದೆ ಎಂದು ನರೇಶ್ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. ದುರು ಕೊಟ್ಟರೂ ನರೇಶ್ ಅವರಿಗೆ ಟ್ರೋಲ್ಗಳ ಕಾಟ ತಪ್ಪಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada