ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯದಲ್ಲಿ ಸುತ್ತಾಡಿಸಿದ ಖದೀಮರು ಅಂದರ್.

ಪ್ರವಾಸಿಗರಿಗೆ ಫಿಲ್ಮ್ ಸಿಟಿ ತೋರಿಸ್ತೇವೆಂದು ಅರಣ್ಯ ಪ್ರದೇಶ ಸುತ್ತಾಡಿಸಿದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ವಿದೇಶಿಗರು ಸೇರಿದಂತೆ ಗುವಾಹಟಿ ನಿವಾಸಿಯೊಬ್ಬರನ್ನು ಆಟೋರಿಕ್ಷಾದಲ್ಲಿ ಕೂರಿಸಿಕೊಂಡು ಅರೆ ಕಾಲೋನಿ ಅರಣ್ಯ ಪ್ರದೇಶದಲ್ಲಿ ಸುತ್ತಾಡಿಸಿದ್ದ ಇಬ್ಬರನ್ನು ಗುವಾಹಟಿ ಮೂಲದ ಉದ್ಯಮಿ ಹಿಟ್ ಫರುಕುರ್ ಫೈಜ್‌ ಉರ್ ರೆಹ್ಮಾನ್ (28) ಅವರ ದೂರಿನ ಮೇರೆಗೆ ದಿಂಡೋಶಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.ಆರೋಪಿಗಳನ್ನು ರೋಹಿತ್ ಕಸಾರೆ ಮತ್ತು ಡೆಂಜಿಲ್ ಫೆರ್ನಾಂಡಿಸ್ ಅಕಾ ಡೆಂಜೊ ಎಂದು ಗುರುತಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಗುವಾಹಟಿಯಲ್ಲಿ ವಾಸಿಸುವ ದೂರುದಾರರಾದ ಫೈಜ್‌ ಉರ್ ರೆಹ್ಮಾನ್ ಮೊದಲ ಬಾರಿಗೆ ಮುಂಬೈಗೆ ಬಂದಿದ್ದು ಅವರು ಫಿಲ್ಮ್ ಸಿಟಿ ಪ್ರದೇಶಕ್ಕೆ ಭೇಟಿ ನೀಡಲು ಬಯಸಿದ್ದರು. ಫಿಲ್ಮ್ ಸಿಟಿ ನೋಡಲು ಬಂದಿದ್ದ ಅವರನ್ನು ಫಿಲಂ ಸಿಟಿಯ ಗೇಟ್ ಬಳಿ ನಿಂತಿದ್ದ ಆರೋಪಿಗಳಾದ ರೋಹಿತ್ ಮತ್ತು ಡೆಂಜಿಲ್ ಇಬ್ಬರೂ ಫೈಜ್‌ ಉರ್ ರೆಹ್ಮಾನ್ ಅವರನ್ನು ಮಾರ್ಗದರ್ಶಿ ಪ್ರವಾಸ ( ಗೈಡ್ ಟೂರ್ ) ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಟಿವಿ ಶೋಗಳು ತಮ್ಮ ಶೂಟಿಂಗ್ ಸ್ಟುಡಿಯೋಗಳನ್ನು ಹೊಂದಿರುವ ಫಿಲ್ಮ್ ಸಿಟಿಯನ್ನು ತೋರಿಸಲು 1500 ರೂ. ಕೇಳಿ ಅವರನ್ನು ಆಟೋದಲ್ಲಿ ಕೂರಿಸಿಕೊಂಡಿದ್ದಾರೆ.ಆದರೆ ಇಬ್ಬರು ವಿದೇಶಿಗರು ಸೇರಿದಂತೆ ಫೈಜ್‌ ಉರ್ ರೆಹ್ಮಾನ್ ಅವರನ್ನು ಆಟೋದಲ್ಲಿ ಕೂರಿಸಿಕೊಂಡ ಅವರು ಆರೆ ಕಾಲೋನಿ ಅರಣ್ಯ ಪ್ರದೇಶದಲ್ಲಿ ಪ್ರವಾಸ ಮಾಡಿ ಫಿಲಂ ಸಿಟಿ ತೋರಿಸುವಂತೆ ನಟಿಸಿದ್ದಾರೆ. ನಿಜವಾದ ಫಿಲ್ಮ್ ಸಿಟಿಯನ್ನು ತೋರಿಸಲು ಫೈಜ್‌ ಉರ್ ರೆಹ್ಮಾನ್ ಆರೋಪಿಗಳನ್ನು ಕೇಳಿದಾಗ, ಆರೋಪಿಗಳು ಪ್ರತಿ ವ್ಯಕ್ತಿಗೆ 1500 ರೂ. ಹೆಚ್ಚುವರಿ ಶುಲ್ಕವನ್ನು ಕೇಳಿದ್ದಾರೆ. ವಿದೇಶಿ ಪ್ರವಾಸಿಗರು ಮತ್ತು ಗುವಾಹಟಿ ನಿವಾಸಿ ಹಣ ನೀಡಲು ನಿರಾಕರಿಸಿದ ನಂತರ, ಆರೋಪಿಗಳು ಅವರನ್ನು ಮತ್ತೆ ಫಿಲ್ಮ್ ಸಿಟಿ ಗೇಟ್‌ಗೆ ಕರೆದೊಯ್ದು ಪರಾರಿಯಾಗಿದ್ದಾರೆ.ನಂತರ ಫೈಜ್‌ ಉರ್ ರೆಹ್ಮಾನ್ ಮತ್ತು ಇಬ್ಬರು ವಿದೇಶಿಗರು ದಿಂಡೋಶಿ ಪೊಲೀಸ್ ಠಾಣೆಗೆ ಧಾವಿಸಿ ಅವರ ವಿರುದ್ಧ ವಂಚನೆ ದೂರು ದಾಖಲಿಸಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹಪಾಠಿಗೆ ಥಳಿಸಿದ ತೆಲಂಗಾಣ ಬಿಜೆಪಿ ಅಧ್ಯಕ್ಷನ ಮಗ.

Wed Jan 18 , 2023
ಹೈದರಾಬಾದ್‌: ತೆಲಂಗಾಣ ರಾಜ್ಯ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಅವರ ಪುತ್ರ ಭಗೀರಥ್‌ ಎಂಬಾತ ಸಹಪಾಠಿಯೊಬ್ಬನಿಗೆ ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈತ ಮಹೀಂದ್ರ ಯೂನಿವರ್ಸಿಟಿಯ ವಿದ್ಯಾರ್ಥಿಯಾಗಿದ್ದು, ಇದಕ್ಕೆ ಸಂಬಂಧಿಸಿ ಈತ ಹಾಗೂ ಇನ್ನಿತರ ಐವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದು ಈಗ ರಾಜಕೀಯ ವಾಗ್ಯುದ್ಧಕ್ಕೆ ಕಾರಣವಾಗಿದೆ. ಯೂನಿವರ್ಸಿಟಿ ಕ್ಯಾಂಪಸ್‌ ಒಳಗೆ ಈ ಘಟನೆ ನಡೆದಿದೆ. ಭಗೀರಥ ಮತ್ತು ಆತನ ಗೆಳೆಯರು ಈ ಥಳಿತಕ್ಕೊಳಗಾದ ವಿದ್ಯಾರ್ಥಿಯನ್ನು ರ್ಯಾಗಿಂಗ್‌ […]

Advertisement

Wordpress Social Share Plugin powered by Ultimatelysocial