ಕಟಾವು ಮಾಡಲು ಹಾಕಿದ್ದ ಅಲಸಂದಿ ಬೆಳೆ ಸುಟ್ಟು ಭಸ್ಮವಾದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ ನಡೆದಿದೆ. ರೈತ ಫಕೀರಸ್ವಾಮಿ ಕಡ್ಲಿ ಎಂಬುವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಬೆಂಕಿಗಾಹುತಿಯಾಗಿದೆ.
ಜಮೀನಿನಲ್ಲಿ ಕಟಾವು ಮಾಡಿದ್ದ ಅಲಸಂದಿ ಬೆಳೆಯನ್ನು, ರಾಶಿ ಮಾಡಲು ರಸ್ತೆಯ ಮೇಲೆ ತಂದು ಗೂಡು ಹಾಕಲಾಗಿತ್ತು. ರಾಶಿ ಮಷಿನ್ ಗಾಗಿ ಹುಡುಕಾಟ ಕೂಡಾ ನಡೆಸಿದ್ದ. ಇನ್ನೆರಡು ದಿನಗಳಲ್ಲಿ ಮಷಿನ್ ಗೆ ಹಾಕಿ ರಾಶಿ ಮಾಡಲು ರೈತ ಫಕ್ಕೀರಸ್ವಾಮಿ ಎಲ್ಲಾ ಸಿದ್ದತೆಯಲ್ಲಿ ಇದ್ರು. ಆಕಸ್ಮಿಕವಾಗಿ ಬೆಳೆಗೆ ಬೆಂಕಿ ತಗುಲಿ ಬೆಳೆ ಹಾನಿ ಯಾಗಿದೆ. ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಪ್ರೀತಿಸಿದ ಹುಡುಗಿ ಬೇರೆ ಮದುವೆ ಸಿದ್ಧತೆ ಹಿನ್ನೆಲೆ