ಪಡಿತರ ಸಾಗಣೆ ಮಾಡುವ ವಾಹನಗಳು ಗುಣಮಟ್ಟದಲ್ಲಿ ಅಕ್ಕಿಯ ಮೇಲೆ ತಾಟಪಾಲು ಹಾಕಿ ಸಾಗಣೆ ಮಾಡಬೇಕು. ಆದರೆ ಆಹಾರ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ನಿರ್ಲಕ್ಷö್ಯದಿಂದಾಗಿ ಹತ್ತಾರು ಟನ್ ಅಕ್ಕಿ ಮಣ್ಣು ಪಾಲಾಗಿದೆ.ಮಳೆ ಬರುವ ಮುನ್ಸೂಚನೆ ಇರಲಿ ಬಿಡಲಿ ಅಕ್ಕಿಯನ್ನು ಸಾಗಣೆ ಮಾಡಬೇಕಾದರೆ ಗುತ್ತಿಗೆದಾರರು ಆಹಾರ ಇಲಾಖೆ ಅಧಿಕಾರಿಗಳು ತಾಟಪಾಲ್ ಹಾಕೊಂಡು ಸಾಗಣೆ ಮಾಡದೆ ಇರುವುದಕ್ಕೆ ಸರಕಾರದ ಅಕ್ಕಿ ಮಳೆರಾಯನ ಪಾಲಾಗಿದೆ.ಮಳೆರಾಯನ ಪಾಲಾದ ಅಕ್ಕಿ ವಾಸನೆ ಬೀರುತ್ತವೆ, ಇಂತಹ ಅಕ್ಕಿ ಬಡವರಿಗೆ ನೀಡಲಾಗುತ್ತದೆ. ಇದೆ ಅಕ್ಕಿಯನ್ನು ಬಡವರಿಗೆ ನೀಡಿ ತಿಂದು ಏನಾದರು ಆಗಿ ಸರಕಾರ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಹೇಳುವ ಮಾತಿದು, ಸರಕಾರ ಅಕ್ಕಿ ನಾಶವಾಗಲು ಆಹಾರ ಇಲಾಖೆ ಅಧಿಕಾರಿಗಳು ಕಾರಣ ಎಂದು ಹೇಳಬಹುದು.ರಾಯಚೂರು ಜಿಲ್ಲೆಯ ಆಹಾರ ಇಲಾಖೆ ಅಧಿಕಾರಿಗಳು ಮಾಡುವ ಎಡವಟ್ಟುನಿಂದಾಗಿ ಲಕ್ಷಾಂತರ ರೂ.ಮೌಲ್ಯದ ಪಡಿತರ ಭಾಗ್ಯದ ಬೀದಿ ಪಾಲಾಗಿದೆ ಎಂದು ಹೇಳಬಹದು, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಹೇಬ್ರೆ ನೋಡಿ ಸರಕಾರದ ಅಕ್ಕಿ ಸಾಗಣೆ ಮಾಡಲು ಇಷ್ಟೊಂದು ನಿರ್ಲಕ್ಷö್ಯವಿದೆ ಎಂದರೆ ಇವರು ಯಾವ ಮಟ್ಟಿಗೆ ಇದ್ದಾರೆಂದು ನೀವೆ ನೋಡಿ.ಪಡಿತರ ಭಾಗ್ಯ ಅಕ್ಕಿ ಮಳೆಯಲ್ಲಿ ಹೊದ್ದೆಯಾದರು ಮಳೆ ಸುರಿಯುತ್ತಿದ್ದನ್ನು ಕಂಡು ಗುಣಮಟ್ಟದಲ್ಲಿ ಸಾಗಣೆ ಮಾಡಲು ಗುತ್ತಿಗೆದಾರರು ಮುಂದಾಗಬೇಕಾಗಿತ್ತು. ಇವರ ದುರ್ನಡತೆ ಈ ರೀತಿಯಾಗಿ ಯಾರು ಕಾರಣ ಎಂಬುದು ತಿಳಿಯದಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada