365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ

365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ

ಮೈಸೂರು: ದೇಶದಲ್ಲಿ ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ ವೆಂಕಟಕೃಷ್ಣಯ್ಯ (ತಾತಯ್ಯ) ಜಯಂತೋತ್ಸವ ಹಾಗೂ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮಾತನಾಡಿ, ಕ್ರಿಪ್ಟೋ-  ಕ್ರಿಶ್ಚಿಯನ್ನರು ಹಿಂದು ಧರ್ಮದ ಆಚರಣೆ ಅಳವಡಿಸಿಕೊಂಡು ಅಮಾಯಕರನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು.

ಈಗ ಕ್ರಿಸ್ತನಿಗೆ ಅಷ್ಟ್ರೋತ್ತರ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್‌ ಮುಂದೆ ಗರುಡಗಂಬ ಸ್ಥಾಪಿಸಲಾಗುತ್ತಿದೆ.

ರಥೋತ್ಸವ, ಉರುಳುಸೇವೆ ಸೇರಿ ನಾನಾ ಪದ್ಧತಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಇದೆಲ್ಲ ಗಮನಿಸಿದರೆ 365 ಕೋಟಿ ಹಿಂದು ದೇವತೆಗಳಲ್ಲಿ ಕ್ರೈಸ್ತ ಕೂಡ ಒಬ್ಬನಾಗುವ ಕಾಲ ಸನ್ನಿಹಿತವಾಗಿದೆ ಎನ್ನಿಸುತ್ತಿದೆ. ಈ ಮೂಲಕ ಅಮಾಯಕರನ್ನು ಕ್ರೈಸ್ತ ಮತಕ್ಕೆ ಆಕರ್ಷಿಸಲಾಗುತ್ತಿದೆ.

ಇದರ ತಡೆಗೆ ಮತಾಂತರ ನಿಷೇಧ ಕಾಯಿದೆ ಅವಶ್ಯಕ ಎಂದರು. ಈ ನಾಡಿನಲ್ಲಿ ಕ್ರಿಪ್ಟೋ ಕ್ರಿಶ್ಚಿಯನ್‌ಗಳು ಸೇರಿಕೊಂಡಿದ್ದಾರೆ.ಅವರು ಮೇಲ್ನೋಟಕ್ಕೆ ಹಿಂದು ಗಳಾಗಿದ್ದು, ಹಿಂದು ಗಳಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮೇಲಿಂದ ಮೇಲೆ 3 ಬಾರಿ ಸಲ್ಮಾನ್ ಖಾನ್ ಗೆ ಕಚ್ಚಿದ ಹಾವು

Mon Dec 27 , 2021
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್, ನಟ ಸಲ್ಮಾನ್ ಖಾನ್ ಹಾವು ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಹಾವು ನನ್ನ ತೋಟದ ಮನೆಗೆ ಪ್ರವೇಶಿಸಿತ್ತು. ನಾನು ಅದನ್ನು ಕೋಲಿನಿಂದ ಹೊರಗೆ ತೆಗೆದುಕೊಂಡೆ. ಕ್ರಮೇಣ ಅದು ನನ್ನ ಕೈ ಸೇರಿತು. ನಾನು ಅದನ್ನು ಬಿಡಿಸಲು ಹಿಡಿದುಕೊಂಡಾಗಅದು ನನ್ನನ್ನು ಮೂರು ಬಾರಿ ಕಚ್ಚಿದೆ. ಅದೊಂದು ರೀತಿಯ ವಿಷಪೂರಿತ ಹಾವಾಗಿದ್ದು, 6 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದೆ. ಈಗ ಆರೋಗ್ಯವಾಗಿದ್ದೇನೆ ಎಂದು ಹಾವು ಕಡಿತದ ಬಗ್ಗೆ ನಟ […]

Advertisement

Wordpress Social Share Plugin powered by Ultimatelysocial