ಲಕ್ಷ್ಮೇಶ್ವರ: ಕಳೆದ ವಾರ ಸುರಿದ ಅಕಾಲಿಕ ಮಳೆಗೆ ಹಾನಿಗೊಳಗಾದ ಮನೆಗಳಿಗೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಗೂ ನಗರ ಕಾಂಗ್ರೇಸ ಸಮಿತಿ ಅಧ್ಯಕ್ಷ ಅಂಬರೀಶ ತೆಂಬದಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಮನೆಯವರಿಗೆ ಸಮಾಧಾನ ಹೇಳಿದರು ಹಾಗೂ ಅಧಿಕಾರಿಗಳು ಸಮೀಕ್ಷೆ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ತಿಳಿಸುತ್ತೆವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬಿದರು.
ನಂತರ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಂಬರೀಶ ತೆಂಬದ ಸುರಿದ ಅಕಾಲಿಕ ಮಳೆಗೆ ರೈತರು, ಬಡವರು ತುಂಬಾ ನೋವು ಅನುಭವಿಸುವಂತಾಗಿದೆ. ತಾಲೂಕು ಸೇರಿದಂತೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಲವಾರು ಮನೆಗಳು ಬದ್ದಿದ್ದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ನಾವು ವಿಷಯ ತಿಳಿಸಿದ ಕೂಡಲೆ ಎಲ್ಲ ಹಾನಿಗೊಳಗಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಟುಂಬದವರಿಗೆ ಧೈರ್ಯ ತುಂಬಿದರು. ಸರಕಾರದಿಂದ ಸಿಗುವ ಸೌಲಭ್ಯ ಕೊಡಿಸುವ ಪ್ರಯತ್ನವನ್ನು ಅಧಿಕಾರಿಗಳು ಹಾಗೂ ಶಾಸಕರು ಅತಿ ಶೀಘ್ರದಲ್ಲಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ ಎಂದು ಹೇಳಿದರು.
ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಆರ್.ಎಸ್.ದೊಡ್ಡಮನಿ, ನಗರ ಕಾಂಗ್ರೆಸ್ ಸಮೀತಿ. ಅಧ್ಯಕ್ಷ ಅಮರೀಶ. ತೆಂಬದಮನಿ, ಹನಮಂತಪ್ಪ ಶರಸೂರಿ, ನಂದೀಶ.ಚಕ್ರಸಾಲಿ, ಮುತ್ತಣ್ಣ.ಹೇಬ್ಬಾಳ , ಮುದಕಣ್ಣ ಗದ್ದಿ, ಬಸವರಾಜ ಗೋಡಿ, ಶಿವಣ್ಣ ಕಬ್ಬೇರ, ಶಿವರಾಜ ಆದಿ, ಗೂಳಪ್ಪ ಕಡ್ಡಿಪೂಜಾರ, ಮತ್ತಿತರಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada