ಜಾತ್ರೆಯಲ್ಲಿ ಸಾಧು ಸಂತರ ಗಾಂಜಾ ಘಾಟು.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರನ ಜಾತ್ರೆ ಅಂದ್ರೆ ಕೋಮು ಸೌಹಾರ್ದತೆಗೆ ಹೆಸರಾದ ಜಾತ್ರೆ. ಈ ಜಾತ್ರೆಗೆ ಹಿಂದೂ ಮುಸ್ಲಿಂರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ನಡೆಸಲಾಗುತ್ತೇ. ಪ್ರತಿ ಭಾರಿಯಂತೆ ಈ ಭಾರಿಯೂ ಐದು ದಿನಗಳ ಕಾಲ ಈ ತಿಂಥಣಿ ಮಾನೇಶ್ವರ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ. ಇನ್ನು ಈ ಜಾತ್ರೆಗೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಾಧು ಸಂತರು ಮೌನೇಶ್ವರ ದೇವಸ್ಥಾನದ ಹಿಂದುಗಡೆ ಇರುವ ಕೈಲಾಸ ಕಟ್ಟೆ ಮೇಲೆ ಕುಳಿತು ಗಾಂಜಾ ಸೇವನೆ ಮಾಡಿದ್ರೆ ಕೈಲಾಸ ಪ್ರಾಪ್ತಿಯಾಗುತ್ತೇ ಅನ್ನುವ ಪ್ರತೀತಿ ಇದೆ. ಹಾಗಾಗಿ ಇಲ್ಲಿಗೆ ವಿವಿಧ ಕಡೆಗಳಿಂದ ಆಗಮಿಸುವ ಸಾಧು ಸಂತರು ಗಾಂಜಾ ಸೇವಿಸಿ ಗುಂಗಿನಲ್ಲಿ ತೇಲಾಡಿದ್ರು. ಇವರಿಗೆ ಭಕ್ತರು ಗಾಂಜಾವನ್ನು ಚೀಟಿಯಲ್ಲಿ ತಂದು ಕೊಟ್ಟು ಭಕ್ತಿ ಪರಾಕಾಷ್ಠೆ ಮೆರೆದ್ರು. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಸಾಧು ಸಂತರು ಗಾಂಜಾ ಸೇವನೆ ಮಾಡಿ ಗಾಂಜಾ ಗುಂಗಿನಲ್ಲಿ ತೇಲಾಡಿದ್ರು. ಜಾತ್ರೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ರೂ ಸಹ ಅಧಿಕಾರಿಗಳು ನಿರ್ಬಂಧ ಹೇರದೇ ನಿರ್ಲಕ್ಷ ತಾಳಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿ. ಕೆ. ಎಸ್. ವರ್ಮಾ ಮಹಾನ್ ಕಲಾವಿದ.

Mon Feb 6 , 2023
ನಮ್ಮ ಕಾಲದ ಮಹಾನ್ ಕಲಾವಿದರಾಗಿ ಪ್ರಸಿದ್ದರಾಗಿದ್ದ ಬಿ.ಕೆ. ಎಸ್. ವರ್ಮಾ ಇಂದು ನಮ್ಮನ್ನಗಲಿದ್ದಾರೆ. ಇಂದು ಎಲ್ಲೆಲ್ಲಿಯೂ ಶೋಭಿಸುತ್ತಿರುವ ಕನ್ನಡ ಮಾತೆಯನ್ನು ಚಿತ್ರಿಸಿದವರು ಸಹಾ ಈ ಬಿ ಕೆ ಎಸ್ ವರ್ಮಾ. ಬಿ.ಕೆ. ಎಸ್ ವರ್ಮಾ 1949ರ ಸೆಪ್ಟೆಂಬರ್ 5ರಂದು ಬೆಂಗಳೂರು ಜಿಲ್ಲೆಯ ಅತ್ತಿಗುಪ್ಪೆ ಬಳಿಯಲ್ಲಿ ಜನಿಸಿದರು. ತಂದೆ ಕೃಷ್ಣಮಾಚಾರ್ಯ. ತಾಯಿ ಜಯಲಕ್ಷ್ಮಿ. ಬುಕ್ಕಸಾಗರದ ಕೃಷ್ಣಮಾಚಾರ್ಯ ಶ್ರೀನಿವಾಸ ಎಂದಾಗಬೇಕಿದ್ದವರು ಬಿ.ಕೆ.ಎಸ್. ವರ್ಮಾ ಆದದ್ದು ಕಲಾಲೋಕದ ಮಹತ್ವದ ಸಂಭವವೇ ಸರಿ. ಮೈಸೂರಿನ ಜಗನ್ಮೋಹನ […]

Advertisement

Wordpress Social Share Plugin powered by Ultimatelysocial