ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರನ ಜಾತ್ರೆ ಅಂದ್ರೆ ಕೋಮು ಸೌಹಾರ್ದತೆಗೆ ಹೆಸರಾದ ಜಾತ್ರೆ. ಈ ಜಾತ್ರೆಗೆ ಹಿಂದೂ ಮುಸ್ಲಿಂರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಅದ್ದೂರಿಯಾಗಿ ನಡೆಸಲಾಗುತ್ತೇ. ಪ್ರತಿ ಭಾರಿಯಂತೆ ಈ ಭಾರಿಯೂ ಐದು ದಿನಗಳ ಕಾಲ ಈ ತಿಂಥಣಿ ಮಾನೇಶ್ವರ ಜಾತ್ರೆಯು ಅದ್ದೂರಿಯಾಗಿ ನಡೆಯುತ್ತಿದೆ. ಇನ್ನು ಈ ಜಾತ್ರೆಗೆ ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಸಾಧು ಸಂತರು ಮೌನೇಶ್ವರ ದೇವಸ್ಥಾನದ ಹಿಂದುಗಡೆ ಇರುವ ಕೈಲಾಸ ಕಟ್ಟೆ ಮೇಲೆ ಕುಳಿತು ಗಾಂಜಾ ಸೇವನೆ ಮಾಡಿದ್ರೆ ಕೈಲಾಸ ಪ್ರಾಪ್ತಿಯಾಗುತ್ತೇ ಅನ್ನುವ ಪ್ರತೀತಿ ಇದೆ. ಹಾಗಾಗಿ ಇಲ್ಲಿಗೆ ವಿವಿಧ ಕಡೆಗಳಿಂದ ಆಗಮಿಸುವ ಸಾಧು ಸಂತರು ಗಾಂಜಾ ಸೇವಿಸಿ ಗುಂಗಿನಲ್ಲಿ ತೇಲಾಡಿದ್ರು. ಇವರಿಗೆ ಭಕ್ತರು ಗಾಂಜಾವನ್ನು ಚೀಟಿಯಲ್ಲಿ ತಂದು ಕೊಟ್ಟು ಭಕ್ತಿ ಪರಾಕಾಷ್ಠೆ ಮೆರೆದ್ರು. ಐದು ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಸಾಧು ಸಂತರು ಗಾಂಜಾ ಸೇವನೆ ಮಾಡಿ ಗಾಂಜಾ ಗುಂಗಿನಲ್ಲಿ ತೇಲಾಡಿದ್ರು. ಜಾತ್ರೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ರೂ ಸಹ ಅಧಿಕಾರಿಗಳು ನಿರ್ಬಂಧ ಹೇರದೇ ನಿರ್ಲಕ್ಷ ತಾಳಿರುವುದು ಪ್ರಜ್ಞಾವಂತರ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada