ಸಾಲ ತೀರಿಸಲು ಕ್ಷೇತ್ರ ಬಿಟ್ಟುಕೊಟ್ರಾ ಶಾಸಕ ಶ್ರೀನಿವಾಸಗೌಡ ? ಸಿದ್ದರಾಮಯ್ಯಗೆ ಕೋಲಾರ ಕ್ಷೇತ್ರ ಬಿಟ್ಟುಕೊಟ್ಟ ಗುಟ್ಟು ಬಹಿರಂಗ

ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರ ಹಿಂದಿನ ಗುಟ್ಟು ಬಯಲಾಗಿದೆ. ಸಾಲ ತೀರಿಸಲು ಶಾಸಕ ಶ್ರೀನೀವಾಸ ಗೌಡ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.ಶಾಸಕ ಶ್ರೀನಿವಾಸ್ ಗೌಡ ಹಾಗೂ ಮುಖಂಡರೊಬ್ಬರ ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಈ ಹಿಂದೆ ಜೆಡಿಎಸ್ ನಿಂದ ಉಚ್ಛಾಟನೆಗೊಂಡಿದ್ದ ಶ್ರೀನಿವಾಸ್ ಗೌಡ, ಕಳೆದ ಚುನಾವಣೆಯಲ್ಲಿ 17 ಕೋಟಿ ರೂಪಾಯಿ ಸಾಲ ಮಾಡಿದ್ದೆ. ಈ ಸಾಲ ತೀರಿಸಲು ಸೀಟು ಬಿಟ್ಟುಕೊಟ್ಟಿದ್ದೇನೆ ಎಂದು ಶ್ರೀನಿವಾಸಗೌಡ ಮಾತನಾಡಿದ್ದಾರೆ ಎಂಬ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಜೆಡಿಎಸ್ ಮುಖಂಡ ಚನ್ನೇಗೌಡ ಎಂಬುವವರ ಜತೆ ಶಾಸಕ ಶ್ರೀನಿವಾಸ್ ಗೌಡ ಮಾತನಾಡಿದ್ದು, ಚನ್ನೇಗೌಡ ಎಂಬುವವರು ಯಾಕೆ ಸಿದ್ದರಾಮಯ್ಯ? ನೀವೇ ಬನ್ನಿ ನಿಮ್ಮನ್ನೇ ಗೆಲ್ಲಿಸುತೇವೆ ಎಂದು ಹೇಳುತ್ತಿದ್ದಂತೆ ಕಳೆದ ಬಾರಿ 17 ಕೋಟಿ ಖರ್ಚು ಮಾಡಿ ಸಾಲ ಮಾಡಿಕೊಂಡೆ. ಇನ್ನೂ ಸಾಲ ತೀರಿಲ್ಲ. ನನ್ನ ಗತಿ ಯಾರ್ ನೋಡೋದು? 17 ಕೋಟಿ ನೀವು ಕೊಟ್ಬಿಡ್ತೀರಾ? ಸಾಧ್ಯವಾಗುತ್ತಾ? ಅದ್ಕೆ ತೀರ್ಮಾನಕ್ಕೆ ಬಂದಿದ್ದೇನೆ. ಸಿದ್ದರಾಮಯ್ಯ ಅವರನ್ನು ನೀವೆಲ್ಲ ಸೇರಿ ಗೆಲ್ಲಿಸಿ. ನನ್ನನ್ನು ಎಂ ಎಲ್ ಸಿ ಮಾಡಿ ಮಂತ್ರಿ ಮಾಡ್ತಾರೆ ಎಂದು ಹೇಳಿದ್ದಾರೆ.ಮುಖಂಡರೊಬ್ಬರ ಜೊತೆ ಶ್ರೀನಿವಾಸಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶಕ್ಕೆ ʼಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿʼ ತಂದ RRR ತಂಡಕ್ಕೆ ಮೋದಿ ಪ್ರಶಂಸೆ..!

Wed Jan 11 , 2023
ʼನಾಟು ನಾಟುʼ ಎಂಬ ಹಿಟ್ ಟ್ರ್ಯಾಕ್‌ಗಾಗಿ ರಾಜಮೌಳಿ ಆರ್‌ಆರ್‌ಆರ್‌ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಸಿನಿರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ಸಿನಿಮಾ ಆಗಿ ಆರ್‌ಆರ್‌ಆರ್‌ ಹೊರಹೊಮ್ಮಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ RRR ಚಿತ್ರತಂಡಕ್ಕೆ ಶಭಕೋರಿದ್ದಾರೆ. ಅಲ್ಲದೆ, ಇದು ಬಹಳ ವಿಶೇಷವಾದ ಸಾಧನೆ ಮತ್ತು ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial