ಹುಬ್ಬಳ್ಳಿಯಲ್ಲಿ ಚಾಕು, ಮಾರಕಾಸ್ತ್ರಗಳ ಹಾವಳಿ ಹೆಚ್ಚಾಗಿದ್ದು, ಕಿರಾತಕರು ಗಂಜಾ ನಶೆಯಲ್ಲಿ ಸಿನಿಮಾ ಶೈಲಿಯಲ್ಲಿ ತರಕಾರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ ನವನಗರದ ಎಪಿಎಂಸಿ ಆವರಣದಲ್ಲಿ ಈ ಘಟನೆ ನಡೆದದ್ದು,ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಸಹ ತರಕಾರಿ ವ್ಯಾಪಾರಿ ಮತ್ತು ಆತನ ಸಂಬಂಧಿಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ತರಕಾರಿ ವ್ಯಾಪಾರಿ ಅಫ್ತಾಬ್ ಮತ್ತು ಆತನ ಸಂಬಂಧಿ ಅಹ್ಮದ್ ಸಲೀಂ ಮೇಲೆ,ಸಹ ತರಕಾರಿ ವ್ಯಾಪಾರಿ ಮೌಲಾ ಮತ್ತು ತಾಜು ಜೊತೆಗೆ,ನಾಲ್ಕು ಐದು ಜನರ ಗುಂಪು ಏಕಾಏಕಿ ಚಾಕು, ಮಾರಕಾಸ್ತ್ರ, ಬಾಟಲಿಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಇನ್ನೂಹಲ್ಲೆಗೆ ಒಳಗಾದ ತರಕಾರಿ ವ್ಯಾಪಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ..ಈ ಕುರಿತು ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಗಳ ಪತ್ತೆಗೆ ಬಲೆ ಬೀಸಿದ್ದಾರೆ.
https://play.google.com/store/apps/details?id=com.speed.newskannada