ಗಂಜಾ ನಶೆಯಲ್ಲಿ ಮಾರಣಾಂತಿಕ ಹಲ್ಲೆ.

ಹುಬ್ಬಳ್ಳಿಯಲ್ಲಿ ಚಾಕು, ಮಾರಕಾಸ್ತ್ರಗಳ ಹಾವಳಿ ಹೆಚ್ಚಾಗಿದ್ದು, ಕಿರಾತಕರು ಗಂಜಾ ನಶೆಯಲ್ಲಿ ಸಿನಿಮಾ ಶೈಲಿಯಲ್ಲಿ ತರಕಾರಿ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ನಡೆದಿದೆ ನವನಗರದ ಎಪಿಎಂಸಿ ಆವರಣದಲ್ಲಿ ಈ ಘಟನೆ ನಡೆದದ್ದು,ತರಕಾರಿ ಮಾರುತಿದ್ದವರ ಮೇಲೆ ಕ್ಷುಲಕ ಕಾರಣಕ್ಕೆ ಸಹ ತರಕಾರಿ ವ್ಯಾಪಾರಿ ಮತ್ತು ಆತನ ಸಂಬಂಧಿಕರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ತರಕಾರಿ ವ್ಯಾಪಾರಿ ಅಫ್ತಾಬ್ ಮತ್ತು ಆತನ ಸಂಬಂಧಿ ಅಹ್ಮದ್ ಸಲೀಂ ಮೇಲೆ,ಸಹ ತರಕಾರಿ ವ್ಯಾಪಾರಿ ಮೌಲಾ ಮತ್ತು ತಾಜು ಜೊತೆಗೆ,ನಾಲ್ಕು ಐದು ಜನರ ಗುಂಪು ಏಕಾಏಕಿ ಚಾಕು, ಮಾರಕಾಸ್ತ್ರ, ಬಾಟಲಿಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಇನ್ನೂಹಲ್ಲೆಗೆ ಒಳಗಾದ ತರಕಾರಿ ವ್ಯಾಪಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ..ಈ ಕುರಿತು ನವನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜವಳಿ ಅಂಗಡಿಗಳಲ್ಲಿ ಮನುಷ್ಯಾಕೃತಿ ಮುಖ ಮುಚ್ಚಲು ತಾಲಿಬಾನ್ ಆದೇಶ.

Sun Jan 22 , 2023
ಅಫ್ಘಾನಿಸ್ತಾನದ ಜವಳಿ ಅಂಗಡಿಗಳಲ್ಲಿ ಹೆಣ್ಣು ಮನುಷ್ಯಾಕೃತಿಗಳ ಮುಖವನ್ನು ಮುಚ್ಚಲು ತಾಲಿಬಾನಿಗಳ ನೇತೃತ್ವದ ಸರ್ಕಾರ ವಿಶೇಷ ಕಟ್ಟಪ್ಪಣೆ ಹೊರಡಿಸಿದೆ. ಪಾಲಿಥಿನ್ ಬ್ಯಾಗ್‌ಗಳು, ಸ್ಕಾರ್ಫ್‌ಗಳು ಮತ್ತು ಫಾಯಿಲ್‌ನಿಂದ ಬಟ್ಟೆಗಳನ್ನು ಧರಿಸಿರುವ ಹೆಣ್ಣು ಮನುಷ್ಯಾಕೃತಿಗಳ ಮುಖವನ್ನು ಮುಚ್ಚಲು ಅಂಗಡಿ ಮಾಲಿಕರಿಗೆ ತಾಲಿಬಾನಿಗಳು ಸೂಚನೆ ನೀಡಿದ್ದಾರೆ. ೨೦೨೧ರ ಆಗಸ್ಟ್ ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರವನ್ನು ವಶಕ್ಕೆ ಪಡದ ದಿನದಿಂದ ಒಂದಿಲ್ಲೊಂದು ಕಾನೂನು ಮಾಡುತ್ತಿದ್ದಾರೆ. ಇದು ಅಲ್ಲಿಯ ನಾಗರಿಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಫಘಾನಿಸ್ತಾನದಲ್ಲಿ ವಿಶೇಷವಾಗಿ ದೇಶದ […]

Advertisement

Wordpress Social Share Plugin powered by Ultimatelysocial