ಬೆಂಗಳೂರು,ಡಿ.27- ಬೆಂಗಾವಲು ವಾಹನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಕೋವಿಡ್ ಮೃತರಿಗೆ ಪರಿಹಾರ ಕಾರ್ಯಕ್ರಮಕ್ಕೆ ತೆರಳಬೇಕಿದ್ದ ಸಿಎಂ ಬೊಮ್ಮಾಯಿ ಅವರು ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ ವಿಳಂಬವಾಗಿ ತಲುಪಿದ ಪ್ರಸಂಗ ನಡೆಯಿತು.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿನ ಕಾರ್ಯಕ್ರಮಕ್ಕೆ ಹೋಗುವಾಗ ದಾರಿ ತಪ್ಪಿದ ಮುಖ್ಯಮಂತ್ರಿಗಳ ವಾಹನವು ಸುತ್ತು ಹಾಕಿಕೊಂಡು ತೆರಳಿತು.
ಬೆಂಗಾವಲು ವಾಹನ ಸಿಬ್ಬಂದಿ ಮುಖ್ಯಮಂತ್ರಿಗಳು ತೆರಳಬೇಕಾದ ಮಾರ್ಗ ನಕ್ಷೆಯಲ್ಲಿ ಗೊಂದಲ ಮಾಡಿಕೊಂಡಿರುವುದು ಈ ಗೊಂದಲಕ್ಕೆ ಕಾರಣವಾಗಿದೆ. ಕಾಪೆರ್ರೇಷನ್ ಸರ್ಕಲ್ನಿಂದ ಬಸವನಗುಡಿಗೆ ಬರಬೇಕಿದ್ದ ಬೊಮ್ಮಾಯಿ ಕಾಪೆರ್ರೇಷನ್ ಸರ್ಕಲ್ – ಮೈಸೂರು ಬ್ಯಾಂಕ್ ಸರ್ಕಲ್ – ಚಾಲುಕ್ಯ ವೃತ್ತ – ರೇಸ್ ಕೋರ್ಸ್ ಸರ್ಕಲ್ – ಮತ್ತೆ ವಾಪಸ್ ಚಾಲುಕ್ಯ ವೃತ್ತ – ಕೆ.ಆರ್. ಸರ್ಕಲ್ – ಕಾಪೆರ್ರೇಷನ್ ಸರ್ಕಲ್ – ಲಾಲ್ ಬಾಗ್ ಸರ್ಕಲ್ ಮೂಲಕ ನ್ಯಾಷನಲ್ ಕಾಲೇಜ್ ಮೈದಾನ ಆಗಮಿಸಿದರು.
11.30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ಮೊದಲೇ ಅರ್ಧ ಗಂಟೆ ವಿಳಂಬ ಆಗಿತ್ತು. ಬೆಂಗಾವಲು ಸಿಬ್ಬಂದಿಯ ಎಡವಟ್ಟಿನಿಂದ ಮತ್ತೆ 15 ನಿಮಿಷ ತಡವಾಯಿತು. ಬೆಂಗಾವಲು ವಾಹನದ ಗೊಂದಲದಿಂದ ಸಂಚಾರ ಪೊಲೀಸರು ಕೂಡ ಕಕ್ಕಾಬಿಕ್ಕಿಯಾದರು. ಸಿಎಂ ತೆರಳುತ್ತಿದ್ದ ರಸ್ತೆ ಮಾರ್ಗಗಳ್ಲಲಿ ತರಾತುರಿಯಲ್ಲಿ ದಾರಿ ಮಾಡಿಕೊಡುವಲ್ಲಿ ಪೊಲೀಸರು ಹೈರಾಣಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: