‘ಅರಿಹ’ ಸಿನಿಮಾ ಮುಹೂರ್ತದ ಝಲಕ್… ಶ್ರೀ ನಾಯಕನಾಗಿ ಮತ್ತೊಂದು ಸಿನಿಮಾ .. ಮುಖ್ಯಭೂಮಿಕೆಯಲ್ಲಿ ಸನತ್ ಮ್ಯಾಜಿಕ್!

ಯುವಸಿನಿಮೋತ್ಸಾಹಿಗಳ ಪಡೆಯೊಂದು ಸೇರಿ ತಯಾರಿಸ್ತಿರುವ ಅರಿಹ ಸಿನಿಮಾದ ಮುಹೂರ್ತ ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಇವತ್ತು ಸರಳವಾಗಿ ನೆರವೇರಿದೆ. ನಿರ್ದೇಶಕ ಆದರ್ಶ್ ಈಶ್ವರಪ್ಪ ಚಿತ್ರಕ್ಕೆ ಕ್ಲಾಪ್ ಮಾಡಿದ್ದು, ಹಿರಿಯ ನಟಿ ಭವ್ಯ ಮುಹೂರ್ತ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.

ಈ ಹಿಂದೆ ಹಲವು ಕಿರುಚಿತ್ರ ನಿರ್ದೇಶನ ಮಾಡಿರುವ ಮೋಹನ್ ಕುಮಾರ್ ಹೆಚ್ ಸಾರಥ್ಯದಲ್ಲಿ ಅರಿಹ ಸಿನಿಮಾ ಮೂಡಿ ಬರ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದ್ದು, ಎಂಪಿ ಪ್ರೊಡಕ್ಷನ್ ಅಡಿಯಲ್ಲಿ ಸಿ.ಪಿ.ಆರ್.ಗೌಡ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. .

ಅರಿಹ ಸಿನಿಮಾದಲ್ಲಿ ಶ್ರೀ- ಕಾಜಲ್ ಕುಂದರ್ ಜೋಡಿ

ಕಿರುತೆರೆ ಮೂಲಕ ಬೆಳ್ಳಿತೆರೆ ಬಾನಂಗಳ ಪ್ರವೇಶಿಸಿ ಪ್ರತಿಭಾನ್ವಿತ ನಾಯಕ ನಟ, ಇರುವುದೆಲ್ಲವ ಬಿಟ್ಟು , ಗಜಾನನ ಅಂಡ್ ಗ್ಯಾಂಗ್ ಸಿನಿಮಾ ಖ್ಯಾತಿಯ ಶ್ರೀ ನಾಯಕನಾಗಿ ನಟಿಸ್ತಿದ್ದು, ಶ್ರೀಗೆ ನಾಯಕಿಯಾಗಿ ಕಾಜಲ್ ಕುಂದರ್ ನಟಿಸುತ್ತಿದ್ದಾರೆ. ಕಮರೊಟ್ಟು ಚೆಕ್ ಪೋಸ್ಟ್, ಭೈರವ, ಒಲವೇ ಮಂದಾರ-2, ಚಿ.ತು.ಯುವಕರ ಸಂಘ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಸನತ್ ಅರಿಹ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಶೋಭರಾಜ್, ಶಶಿರಾಜ್, ಆರ್ ಜೆ ವಿಕ್ಕಿ, ಅಶೋಕ್ ಶರ್ಮಾ, ಶ್ವೇತಾ ಆರ್ ಪ್ರಸಾದ್, ಧನುಶ್ರೀ, ವೈನ್ ಸ್ಟೋರ್ ರಘುಗೌಡ, ಅನಘ ಸಾಗರ್, ಹರ್ಷಿತಾ ಸೇರಿದಂತೆ ಇತರೆ ತಾರಾಬಳಗ ಸಿನಿಮಾದಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರಕ್ಕೆ ಧ್ವನಿ ನೀಡಲಿದ್ದಾರೆ ಧ್ರುವ ಸರ್ಜಾ.!

Wed May 4 , 2022
ಚಿರಂಜೀವಿ ಸರ್ಜಾ ನಮ್ಮನೆಲ್ಲಾ ಬಿಟ್ಟು ಹೋಗಿ ಹತ್ತಿರ ಎರಡುವರ್ಷಗಳಾಗುತ್ತಿದೆ. ಅವರ ಅಭಿನಯದ ಕೊನೆಯ ಚಿತ್ರ “ರಾಜ ಮಾರ್ತಾಂಡ” ಚಿತ್ರ ಜೂನ್ ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಧ್ವನಿ ನೀಡಿರುವ ಈ ಚಿತ್ರದ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಬಿಡುಗಡೆ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಉಪಸ್ಥಿತರಿದ್ದರು. ಮೇಘನಾರಾಜ್ ಹಾಗೂ ಸುಂದರರಾಜ್ ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಚಿರು ಸರ್ ನಮ್ಮ ಚಿತ್ರದ ಬಹುತೇಕ […]

Advertisement

Wordpress Social Share Plugin powered by Ultimatelysocial