ಯಾದಗಿರಿ, 30.05.22, ಶನಿವಾರ : ಯಾದಗಿರಿ ತಾಲ್ಲೂಕಿನ ಆನೂರ ಬಿ. ಗ್ರಾಮದಲ್ಲಿ ಜೈ ಭೀಮ ಸಂಘರ್ಷ ಸಮಿತಿ ಜಿಲ್ಲೆ ಸಮಿತಿ ವತಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಸರಳ ಸಂಭ್ರಮದಿAದ ಆಚರಿಸಲಾಯಿತು.
ಪಂಚಶೀಲ ಧ್ವಜಾರೋಹಣವನ್ನು ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ನೆರವೇರಿಸಿದರು. ನಂತರ ಗ್ರಾಮದ ಹಿರಿಯ ಮುಖಂಡ ಸಿದ್ದಲಿಂಗರೆಡ್ಡಿ ಮಾಲಿಪಾಟೀಲ್ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಜರುಗಿದ ಕಾರ್ಯಕ್ರಮವನ್ನು ಬೆಳಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಹಾದೇವಮ್ಮ ಉದ್ಘಾಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಕಲಾಲ್, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್ ಜ್ಯೋತಿ ಬೆಳಗಿಸಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಜೆಬಿಎಸ್ಎಸ್ ಕಲ್ಯಾಣ ಕರ್ನಾಟಕ ಅಧ್ಯಕ್ಷ ಹನುಮಪ್ಪ ಬೇರಿ ಹಾಗೂ ಜಿಲ್ಲಾದ್ಯಕ್ಷ ರಾಹುಲ್ ಕೊಲ್ಲೂರಕರ್, ಬಿಜೆಪಿ ಯುವ ಮೋರ್ಚಾ ಯಾದಗಿರಿ ನಗರಾಧ್ಯಕ್ಷ ಶ್ರೀಧರ ರಾಯಚೂರಕರ್ ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಸರಕಲ್ ನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಪರಮೇಶ್ವರ ಆಗಮಿಸಿ ಬಾಬಾಸಾಹೆಬರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮರಲಿಂಗಪ್ಪ ಚಲುವಾದಿ, ರವಿಕುಮಾರ ಚೆಲುವಾದಿ, ಪ್ರಮೋದ ಚಲವಾದಿ, ರಮೇಶ ಕ್ಯಾತನಾಳ, ಆಂಜಿನೇಯ ಭಂಡಾರಿ ಸೇರಿದಂತೆ ಅನೇಕ ಕಾರ್ಯಕರ್ತರು ವಿವಿಧೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು ಭಾಗವಹಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada