ಜೆಬಿಎಸ್‌ಎಸ್ ಜಿಲ್ಲಾ ಸಮಿತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಯಶಸ್ವಿ!

ಯಾದಗಿರಿ, 30.05.22, ಶನಿವಾರ : ಯಾದಗಿರಿ ತಾಲ್ಲೂಕಿನ ಆನೂರ ಬಿ. ಗ್ರಾಮದಲ್ಲಿ ಜೈ ಭೀಮ ಸಂಘರ್ಷ ಸಮಿತಿ ಜಿಲ್ಲೆ ಸಮಿತಿ ವತಿಯಿಂದ ಡಾ|| ಬಿ.ಆರ್ ಅಂಬೇಡ್ಕರ್ ಅವರ ೧೩೧ನೇ ಜಯಂತಿಯನ್ನು ಸರಳ ಸಂಭ್ರಮದಿAದ ಆಚರಿಸಲಾಯಿತು.
ಪಂಚಶೀಲ ಧ್ವಜಾರೋಹಣವನ್ನು ಮುಖಂಡ ಬಸನಗೌಡ ಪೊಲೀಸ್ ಪಾಟೀಲ್ ನೆರವೇರಿಸಿದರು. ನಂತರ ಗ್ರಾಮದ ಹಿರಿಯ ಮುಖಂಡ ಸಿದ್ದಲಿಂಗರೆಡ್ಡಿ ಮಾಲಿಪಾಟೀಲ್ ಬಾಬಾ ಸಾಹೇಬ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ಜರುಗಿದ ಕಾರ್ಯಕ್ರಮವನ್ನು ಬೆಳಗುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಹಾದೇವಮ್ಮ ಉದ್ಘಾಟಿಸಿದರು. ಗ್ರಾಪಂ ಮಾಜಿ ಅಧ್ಯಕ್ಷೆ ಪಾರ್ವತಮ್ಮ ಕಲಾಲ್, ನಗರಸಭೆ ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್ ಜ್ಯೋತಿ ಬೆಳಗಿಸಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಜೆಬಿಎಸ್‌ಎಸ್ ಕಲ್ಯಾಣ ಕರ್ನಾಟಕ ಅಧ್ಯಕ್ಷ ಹನುಮಪ್ಪ ಬೇರಿ ಹಾಗೂ ಜಿಲ್ಲಾದ್ಯಕ್ಷ ರಾಹುಲ್ ಕೊಲ್ಲೂರಕರ್, ಬಿಜೆಪಿ ಯುವ ಮೋರ್ಚಾ ಯಾದಗಿರಿ ನಗರಾಧ್ಯಕ್ಷ ಶ್ರೀಧರ ರಾಯಚೂರಕರ್ ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಸರಕಲ್ ನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿದ್ದಣ್ಣ ಪರಮೇಶ್ವರ ಆಗಮಿಸಿ ಬಾಬಾಸಾಹೆಬರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮರಲಿಂಗಪ್ಪ ಚಲುವಾದಿ, ರವಿಕುಮಾರ ಚೆಲುವಾದಿ, ಪ್ರಮೋದ ಚಲವಾದಿ, ರಮೇಶ ಕ್ಯಾತನಾಳ, ಆಂಜಿನೇಯ ಭಂಡಾರಿ ಸೇರಿದಂತೆ ಅನೇಕ ಕಾರ್ಯಕರ್ತರು ವಿವಿಧೆಡೆಯಿಂದ ಆಗಮಿಸಿದ್ದ ಅಭಿಮಾನಿಗಳು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾವಿರಾರು ಮಹಿಳೆಯರಿಗೆ ಉಡಿ ತುಂಬಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಶಾಸಕ!

Mon May 2 , 2022
ಕಾರ್ಮಿಕ ದಿನಾಚರಣೆ, ಹುಟ್ಟು ಹಬ್ಬದ ನಿಮಿತ್ತ ‌ಕಾರ್ಯಕ್ರಮ‌ ಆಯೋಜನೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ . ಗಂಗಾವತಿ & ಕನಕಗಿರಿ ಕ್ಷೇತ್ರದ ಮಹಿಳೆಯರಿಗೆ ಉಡಿತುಂಬಿ ಸಿರೆ ವಿತರಣೆ. ಕಾರ್ಯಕ್ರಮದಲ್ಲಿ‌ ಸಾವಿರಾರು ಮಹಿಳೆಯರು ಭಾಗಿ. ಪರಣ್ಣ ಮುನವಳ್ಳಿ ಅವರ 68 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಆಯೋಜನೆ. ಕಾರ್ಯಕ್ರಮಲ್ಲಿ ಮಠಾಧೀಶರು, ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಭಾಗಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please […]

Advertisement

Wordpress Social Share Plugin powered by Ultimatelysocial