‘ಗುಳ್ಟು’ ಖ್ಯಾತಿಯ ನವೀನ್ ಶಂಕರ್ ಹೊಸ ಸಿನಿಮಾ ‘ಮೂಲತಃ ನಮ್ಮವರೇ’

‘ಗುಳ್ಟು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೀರೋ ಆಗಿ ಗುರುತಿಸಿಕೊಂಡವರು ನವೀನ್ ಶಂಕರ್. ಈಚೆಗೆ ತೆರೆಕಂಡ ಅವರ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾಕ್ಕೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸಿನಿಮಾದ ನಂತರ ಇದೀಗ ನವೀನ್ ಶಂಕರ್ ಅವರ ಮತ್ತೊಂದು ಸಿನಿಮಾದ ಟೈಟಲ್ ಘೋಷಣೆ ಆಗಿದೆ. ಈ ಸಿನಿಮಾಗೆ ವಿಭಿನ್ನವಾದ ಟೈಟಲ್ ಇಡಲಾಗಿದೆ. ಹೌದು, ನವೀನ್ ಶಂಕರ್ ನಟನೆಯ ಮುಂದಿನ ಸಿನಿಮಾ ‘ಮೂಲತಃ ನಮ್ಮವರೇ’. ಈ ಸಿನಿಮಾವನ್ನು ಕಿರಣ್ ಗೋವಿಂದರಾಜ್ ಅವರು ನಿರ್ಮಾಣ ಮಾಡುತ್ತಿದ್ದು, ಚೇತನ್ ಭಾಸ್ಕರಯ್ಯ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈಚೆಗೆ ಈ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ನಡೆಯಿತು.’ಈ ಸಿನಿಮಾ ತಂಡದವರು ಎಲ್ಲವನ್ನೂ ಸಿದ್ದಮಾಡಿಕೊಂಡು, ನಾಯಕನ ಹುಡುಕಾಟದಲ್ಲಿದ್ದರು. ಕೆಲವು ನಾಯಕರನ್ನು ಸಂಪರ್ಕ ಕೂಡ ಮಾಡಿದ್ದರು. ಆನಂತರ ಇವರಿಗೆ ನಾನು ಸಿಕ್ಕಿದೆ‌. ಈ ಸಿನಿಮಾದ ಕಥೆ ತುಂಬಾ ಚೆನ್ನಾಗಿದೆ. ನಾನು ಇಲ್ಲಿಯವರೆಗೂ ಈ ರೀತಿಯ ಕಥೆಯಲ್ಲಿ ನಟಿಸಿಲ್ಲ ಎನ್ನಬಹುದು. ಇಲ್ಲಿರುವ ಅಪ್ಪ- ಮಗನ ಸೆಂಟಿಮೆಂಟ್ ಸನ್ನಿವೇಶಗಳು ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ. ಶೋಭರಾಜ್ ಅವರು ನನ್ನ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನ್ನ ಈ ಹಿಂದಿನ ಚಿತ್ರಗಳಲ್ಲಿ ಆಕ್ಷನ್, ಡ್ಯಾನ್ಸ್‌ಗೆ ಅಷ್ಟೇನೂ ಅವಕಾಶವಿರಲಿಲ್ಲ. ಈ ಚಿತ್ರದಲ್ಲಿ ಎಲ್ಲವೂ ಇದೆ’ ಎಂದು ಮಾಹಿತಿ ನೀಡಿದರು ನಟ ನವೀನ್ ಶಂಕರ್.’ನಾನು ಹಾಗೂ ನಿರ್ದೇಶಕ ಚೇತನ್ ಭಾಸ್ಕರಯ್ಯ ಸ್ನೇಹಿತರು. ನನಗೆ ನಟನಾಗಬೇಕೆಂದು ಆಸೆಯಿತ್ತು. ಆದರೆ ಈ ಸಿನಿಮಾಗೆ ನಿರ್ಮಾಪಕನಾದೆ. ಎಲ್ಲರೂ ನಮ್ಮ ಚಿತ್ರ ನೋಡಿ ಪ್ರೋತ್ಸಾಹ ನೀಡಿ..’ ಎಂದರು ನಿರ್ಮಾಪಕ ಕಿರಣ್ ಗೋವಿಂದರಾಜ್. ಕೇರಳದ ಚಂತು ಛಾಯಾಗ್ರಹಣ ಮಾಡಿದ್ದು, ‘ಏಕ್ ಕ್ಯಾಬ್ ದಿ ಬ್ಯಾಂಡ್’ ಸಂಗೀತ ನಿರ್ದೇಶನ ಹಾಗೂ ಜುವೀನ್ ಸಿಂಗ್ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಯುದ್ಧವಾದರೆ ಪಾಕಿಸ್ತಾನ-ಚೀನಾ ಎರಡರ ವಿರುದ್ಧವೂ ನಡೆಯುತ್ತದೆ

Thu Dec 29 , 2022
ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಸಶಸ್ತ್ರ ಪಡೆಗಳ ನಿವೃತ್ತ ಯೋಧರ ಜತೆ ಸಂವಾದ ನಡೆಸಿರುವುದು ಯೂಟ್ಯೂಬ್ ವಿಡಿಯೋದಲ್ಲಿ ದಾಖಲಾಗಿದೆ. “ಚೀನಾ ಮತ್ತು ಪಾಕಿಸ್ತಾನಗಳು ಜತೆಯಾಗಿ ಬಂದಿವೆ. ಯಾವುದಾದರೂ ಯುದ್ಧ ನಡೆಯುವುದೇ ಆದರೆ ಈ ಎರಡೂ ದೇಶಗಳ ಜತೆ ನಡೆಯಲಿದೆ. ಇದರಿಂದ ದೇಶಕ್ಕೆ ಭಾರಿ ನಷ್ಟ ಉಂಟಾಗಲಿದೆ. ಭಾರತ ಈಗಲೇ ಅತೀವ ಸಂಕಷ್ಟದಲ್ಲಿದೆ. ನನಗೆ ನಿಮ್ಮ (ಸೇನೆ) ಮೇಲೆ ಗೌರವ ಇರುವುದು ಮಾತ್ರವಲ್ಲ, ನಿಮ್ಮ ಬಗ್ಗೆ ಪ್ರೀತಿ […]

Advertisement

Wordpress Social Share Plugin powered by Ultimatelysocial