ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ :

ಹುಬ್ಬಳ್ಳಿ : ರೈಲು ಪ್ರಯಾಣಿಕರಿಗೆ ಸಿಹಿಸುದ್ದಿಯಾಗಿದ್ದು,ಟ್ರೇನ್ ಆನ್ ಡಿಮ್ಯಾಂಡ್ ಆಧಾರದ ಮೆರೆಗೆ ಮಾ.6 ರಿಂದ ಮತ್ತೆ ಧಾರವಾಡ-ಬೆಳಗಾವಿ ರೈಲು ಆರಂಭವಾಗಲಿದೆ. ಈ ಕುರಿತ ಕಂಪ್ಲೀಟ್‌ ಮಾಹಿತಿ ಇಲ್ಲಿದೆ ಓದಿ.ನೈಋತ್ಯ ರೈಲ್ವೆ ಧಾರವಾಡ ಬೆಳಗಾವಿ ಧಾರವಾಡ ಕಾಯ್ದಿರಿಸದ ವಿಶೇಷ ರೈಲನ್ನು ಮಾ.6 ರಿಂದ ಆರಂಭವಾಗಲಿದ್ದು, ರೈಲು ಸಂಖ್ಯೆ 07357 ಧಾರವಾಡ ಬೆಳಗಾವಿ ರೈಲು ಧಾರವಾಡದಿಂದ ಬೆಳಗ್ಗೆ 8:15 ಕ್ಕೆ ಹೊರಟು 10:45 ಕ್ಕೆ ಬೆಳಗಾವಿ ತಲುಪುತ್ತದೆ.

ಸದ್ಯದ ಮಾಹಿತಿ ಪ್ರಕಾರ ಮಾರ್ಚ್ 6, 2023 ರಿಂದ ಸೆಪ್ಟೆಂಬರ್ 6, 2023 ರವರೆಗೆ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ಇನ್ನು ರೈಲು ಸಂಖ್ಯೆ 07358 ಬೆಳಗಾವಿ ಧಾರವಾಡ ರೈಲು ಬೆಳಗಾವಿಯಿಂದ ಸಂಜೆ 7:30ಕ್ಕೆ ಹೊರಟು ರಾತ್ರಿ 9:55ಕ್ಕೆ ಧಾರವಾಡ ತಲುಪಲಿದೆ ಮಾರ್ಗದಲ್ಲಿ, ರೈಲು ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲು 22 ಕೋಚ್​ಗಳನ್ನು ಹೊಂದಿದ್ದು, ಅದರಲ್ಲಿ 11 ಸ್ಲೀಪರ್ ಕೋಚ್​ಗಳು, 7 ಜನರಲ್ ಕೋಚ್​ಗಳು, 2 ಥೀ ಟೈರ್ ಎಸಿ ಕೋಚ್​ಗಳು, 1 ಟು ಟೈರ್ ಎಸಿ ಕೋಚ್ ಮತ್ತು ಒಂದು ಎಸಿ 1 ಟೈರ್ ಕೋಚ್ ಇರಲಿದೆ. ಈ ಬದಲಾವಣೆಯ ಕಾರಣದಿಂದ ಮಾರ್ಚ್ 6 ರಿಂದ ರೈಲು ಸಂಖ್ಯೆ 07363/07364 ಧಾರವಾಡ ಹುಬ್ಬಳ್ಳಿ ಧಾರವಾಡ ಪ್ಯಾಸೆಂಜರ್ ವಿಶೇಷ ರೈಲನ್ನು ರದ್ದು ಮಾಡಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

ರೈಲು ಬೆಳಗಾವಿಯಲ್ಲಿ ಪ್ರಾಥಮಿಕ ನಿರ್ವಹಣೆ ಮತ್ತು ಮೈಸೂರು ಅಥವಾ ಬಾಗಲಕೋಟೆಯಲ್ಲಿ ದ್ವಿತೀಯ ನಿರ್ವಹಣೆಯನ್ನು ಹೊಂದಿರುತ್ತದೆ ಈ ರೈಲು ಮೈಸೂರು, ಹಾಸನ ಜನರಿಗೆ ಬೆಳಗಾವಿಗೆ ನೇರ ಸಂಪರ್ಕವನ್ನು ಒದಗಿಸುತ್ತದೆ.ಆದರೆ, ಈ ರೈಲಿನಲ್ಲಿ ಸೀಟ್ ರಿಸರ್ವ್ ಮಾಡಲು ಬರದ ಕಾರಣ ಮೈಸೂರು ಅಥವಾ ಹಾಸನದಿಂದ ಬೆಳಗಾವಿಗೆ ನೇರವಾಗಿ ಟಿಕೆಟ್ ಬುಕ್ ಮಾಡಲು ಸಾಧ್ಯವಿಲ್ಲ. ಪ್ರಯಾಣಿಕರು ಕೇವಲ ಧಾರವಾಡದವರೆಗೆ ಟಿಕೆಟ್ ಅನ್ನು ರಿಸರ್ವ್ ಮಾಡಬಹುದು ಹಾಗೂ ಬೆಳಗಾವಿ ಕಡೆಗೆ ಕಾಯ್ದಿರಿಸದ ಟಿಕೆಟ್ ಖರೀದಿಸಬೇಕು. ರೈಲು ಸಂಖ್ಯೆ 17301/17302 ಮೈಸೂರು ಧಾರವಾಡ ಮೈಸೂರು ಹುಬ್ಬಳ್ಳಿಯಲ್ಲಿ ಪ್ರಾಥಮಿಕ ನಿರ್ವಹಣೆಯನ್ನು ಹೊಂದಿತ್ತು. ಈಗ ಅದೇ ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಬೆಳಗಾವಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೇ, ಹುಬ್ಬಳ್ಳಿ ಅಥವಾ ಧಾರವಾಡದಿಂದ ಹೊಸ ರೈಲನ್ನು ಪ್ರಾರಂಭಿಸಲು ಹುಬ್ಬಳ್ಳಿ ಪಿಟ್ಲೈನ್ನಲ್ಲಿ ರೈಲು ಸಂಖ್ಯೆ 17301/17302 (ಧಾರವಾಡ ಮೈಸೂರು ಧಾರವಾಡ ಎಕ್ಸ್ಪ್ರೆಸ್) ಸ್ಲಾಟ್ ಅನ್ನು ಖಾಲಿ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರೇ ಪ್ರತಿದಿನ 10,000 ಹೆಜ್ಜೆಗಳನ್ನ ಕಂಪ್ಲೀಟ್‌ ಮಾಡೋದಕ್ಕೆ ಆಗ್ತಿಲ್ವಾ? ಇಲ್ಲಿದೆ ಟಿಪ್ಸ್‌!

Wed Mar 1 , 2023
ಆರೋಗ್ಯವೇ ಭಾಗ್ಯ ಅಂತಾರೆ. ಆದ್ರೆ ದುಡಿಯೋ ಗೌಜಿನಲ್ಲಿ ಜನ ಆರೋಗ್ಯವನ್ನು ಮರೆತಂತಿದೆ.ಕೂತು ಕೆಲಸ ಮಾಡೋದ್ರಿಂದ ಸಿಕ್ಕಾಪಟ್ಟೆ ಕಾಯಿಲೆಗಳು ಮೈಗಂಟಿಕೊಂಡಿರುತ್ತವೆ. ಈ ಸಮಸ್ಯೆ ಪರಿಹಾರ ಹುಡ್ಕೊಂಡು ಡಾಕ್ಟರ್‌ ಹತ್ರ ಹೋದ್ರೆ ದಿನಾ ವಾಕ್‌ ಮಾಡಿ. ದಿನಕ್ಕೆ ಹತ್ತು ಸಾವಿರ ಹೆಜ್ಜೆ ನಡೆದ್ರೆ ಸಾಕು ಅಂತ ಡಾಕ್ಟರ್‌ ಸೂಚನೆಯನ್ನು ನೀಡ್ತಾರೆ. ಇದೇ ಜೋಷ್‌ನಲ್ಲಿ ವಾಕ್‌ ಮಾಡೋದಕ್ಕೆ ಹೊರಟ ಜನ ಒಂದೇ ದಿನಕ್ಕೆ ಸುಸ್ತಾಗಿ ಹೋಗ್ತಾರೆ. ಇನ್ನೂ ನಾಳೆ ಹೇಗಪ್ಪಾ ಅಷ್ಟೊಂದು ನಡೆಯೋದು ಅನ್ನೋ […]

Advertisement

Wordpress Social Share Plugin powered by Ultimatelysocial