ಮಂಡ್ಯ: ಯಾವುದೇ ವಸ್ತು ರಸ್ತೆಯಲ್ಲಿ ಬಿದ್ದಿದ್ದಾಗ ಎತ್ತಿಕೊಳ್ಳೋದಕ್ಕೆ ಹಿಂದೆ ಮುಂದೆ ನೋಡೋ ಜನರು ಮಾತ್ರ, ರಸ್ತೆ ಪಕ್ಕದಲ್ಲಿ ಬಿದ್ದಿದ್ದ ರಾಶಿ ರಾಶಿ ದ್ರಾಕ್ಷಿಯನ್ನು ನನಗೂ ಬೇಕು.. ನನಗೂ ಬೇಕು ಎಂಬುದಾಗಿ ನಾ ಮುಂದು, ತಾ ಮುಂದು ಎನ್ನುವಂತೆ ಮುಗಿಬಿದ್ದು ಬಾಚಿಕೊಂಡು ಹೋಗಿರೋ ಘಟನೆ, ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್ ಗೇಟ್ ಬಳಿಯ ರಸ್ತೆಯ ಪಕ್ಕದಲ್ಲಿಯೇ ರಾಶಿ ರಾಶಿ ದ್ರಾಕ್ಷಿಯನ್ನು ಯಾರೋ ಸುರಿದು ಹೋಗಿದ್ದರು. ಹೀಗೆ ರಸ್ತೆಯ ಪಕ್ಕದಲ್ಲಿಯೇ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಕಂಡಂತ ಜನರು ಮಾತ್ರ, ಹ್ಯಾಂಡ್ ಕವರ್, ಚೀಲ ಸೇರಿದಂತೆ ಹಲವು ರೀತಿಯಲ್ಲಿ ಬಾಚಿಕೊಂಡು ಹೊತ್ತೊಯ್ದಿದ್ದು ಕಂಡು ಬಂದಿತು.
ಅಂದಹಾಗೇ ಕ್ಯಾಂಟರ್ ಲಾರಿಯೊಬ್ಬರು ಸುಮಾರು 100ಕ್ಕೂ ಹೆಚ್ಚು ಕೆಜಿ ದ್ರಾಕ್ಷಿಯನ್ನು ವಿಸಿ ಫಾರ್ಮ್ ಗೇಟ್ ಬಳಿಯಲ್ಲಿ ಸುರಿದು ಹೋಗಿದ್ದಾನೆ ಎನ್ನಲಾಗಿದೆ. ಹೀಗೆ ಸುರಿದು ಹೋಗಿರುವಂತ ದ್ರಾಕ್ಷಿಯನ್ನು ಯಾಕ್ ಸುರಿದು ಹೋಗಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದಂತ ಜನರು ಮಾತ್ರ ಮುಗಿ ಬಿದ್ದು ತಗೊಂಡು ಹೋಗುತ್ತಿದ್ದು ಕಂಡು ಬಂದಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada