ನಕಲಿ ಚಿನ್ನಾಭರಣ ಅಡವಿಟ್ಟುಕೊಂಡು ಸಂಬಂಧಿಕರಿಗೆ ಸಾಲ ಕೊಟ್ಟು ಅಕ್ರಮ ಎಸಗಿದ್ದ ಕೆಂಗೇರಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮಾಜಿ ಮ್ಯಾನೇಜರ್ ಟಿ. ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯ ಒಪ್ಪಿಗೆ ನೀಡಿದೆ ಆರೋಪಿಗಳಾದ ಟಿ. ಎಲ್. ಪ್ರವೀಣ್ ಕುಮಾರ್, ಎಸ್. ಕೆ. ಸುಬ್ರಹ್ಮಣ್ಯ ರೆಡ್ಡಿ, ಆರ್. ರಂಗನಾಥ್, ನರಸಿಂಹ ಮೂರ್ತಿ, ಶಾಂತ ಕುಮಾರಿ, ಕೆ. ಆರ್. ಕವಿತಾ ವಿರುದ್ಧ ಪಿಎಂಎಲ್ಎ ಕಾಯಿದೆಯಡಿ ಪ್ರಕರಣದ ವಿಚಾರಣೆ ನಡೆಸಲು ಪ್ರಾಸಿಕ್ಯೂಶನ್ ದೂರು ಸಲ್ಲಿಸಲಾಗಿತ್ತು. ಈ ದೂರು ವಿಚಾರಣೆಗೆ (ಕಾಗ್ನಿಜೆನ್ಸ್) ನ್ಯಾಯಾಲಯ ಗುರುವಾರ ಒಪ್ಪಿಗೆ ನೀಡಿದೆ ಎಂದು ಇಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.2017ರ ಡಿಸೆಂಬರ್ 13 ರಿಂದ 2018ರ ಜುಲೈ 7ರ ನಡುವಣ ಅವಧಿಯಲ್ಲಿ ಕೆಂಗೇರಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯ ಮುಖ್ಯಸ್ಥರಾಗಿದ್ದ ಪ್ರವೀಣ್ ಕುಮಾರ್, ಸಿಬ್ಬಂದಿ ಸುಬ್ರಹ್ಮಣ್ಯ ರೆಡ್ಡಿ ಹಾಗೂ ಇತರರು ನಕಲಿ ಚಿನ್ನಾಭರಣ ಅಡವಿರಿಸಿಕೊಂಡು ತನ್ನ ಸಂಬಂಧಿಕರು, ಪರಿಚಯಸ್ಥರು ಸೇರಿ 57 ಮಂದಿಗೆ ಚಿನ್ನಾಭರಣ ಸಾಲ ಮಂಜೂರು ಮಾಡಿ ಅಕ್ರಮ ಎಸಗಿದ್ದರು. ಬಳಿಕ ಸುಬ್ರಹ್ಮಣ್ಯ ರೆಡ್ಡಿ ಈ ಸಾಲದ ಹಣವನ್ನು ತನ್ನ ವೈಯುಕ್ತಿಕ ಖಾತೆ, ಕುಟುಂಬ ಸದಸ್ಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಇದರಿಂದ ಬ್ಯಾಂಕ್ಗೆ 19.03 ಕೋಟಿ ರೂ. ನಷ್ಟ ಉಂಟಾಗಿತ್ತು. ಈ ಹಣದಿಂದ ಆರೋಪಿಗಳು ಆಸ್ತಿ ಖರೀದಿ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada